ETV Bharat / bharat

ಎಡಪಕ್ಷ, ಟಿಎಂಸಿ, ಬಿಜೆಪಿ ಮತ್ತು ಬಂಗಾಳದಲ್ಲಿ ಔದ್ಯಮೀಕರಣದ ಪ್ರಯತ್ನ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಿಂದಾಗಿ ಮತ್ತೊಂದು ಬಾರಿ ಉದ್ಯಮಗಳ ವಿಚಾರ ಚುನಾವಣಾ ಕಣಕ್ಕಿಳಿದಿದೆ. 2011 ರಲ್ಲಿ ಬುದ್ಧದೇಬ್ ಭಟ್ಟಾಚಾರ್ಜೀ ಮತ್ತು ಮಮತಾ ಬ್ಯಾನರ್ಜಿ ಮಧ್ಯೆ ಇದೇ ವಿಷಯಕ್ಕೆ ಭಾರಿ ವಾಗ್ವಾದ ನಡೆದಿತ್ತು. ಈಗ, ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಇದೇ ವಾಗ್ವಾದ ನಡೆಯುತ್ತಿದೆ. ಅಷ್ಟೇ ಅಲ್ಲ, ಈ ಬಾರಿಯೂ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿಯೆರಡೂ ಹೂಗ್ಲಿಯನ್ನೇ ತಮ್ಮ ರಣಕಣವನ್ನಾಗಿ ಆಯ್ಕೆ ಮಾಡಿಕೊಂಡಿವೆ. ಇದೇ ಸ್ಥಳದಲ್ಲೇ ಸಿಂಗೂರು ಗಲಭೆಯೂ ನಡೆದಿತ್ತು ಎಂಬುದನ್ನು ನಾವು ಗಮನಿಸಬಹುದು.

author img

By

Published : Feb 27, 2021, 4:42 PM IST

ಪ್ರಯತ್ನ
ಪ್ರಯತ್ನ

ಪಶ್ಚಿಮ ಬಂಗಾಳವನ್ನು ಟಾಟಾ ಮೋಟಾರ್ಸ್ ತೊರೆದು 11 ವರ್ಷಗಳೇ ಗತಿಸಿದವು. ಆದರೆ, ರಾಜ್ಯಕ್ಕೆ ಇನ್ನೂ ಉದ್ಯಮ ವಿರೋಧಿ ಎಂಬ ಹಣೆಪಟ್ಟಿ ತಪ್ಪಲೇ ಇಲ್ಲ. ಉತ್ಪಾದನೆ ಉದ್ಯಮದ ಬಗ್ಗೆ ಇರುವ ಋಣಾತ್ಮಕ ಇಮೇಜ್‌ ಅನ್ನು ಬಂಗಾಳವೇ ನಿವಾರಿಸಿಕೊಳ್ಳಬೇಕಿದೆ. ಅದರಲ್ಲೂ, ರಾಜ್ಯ ಸರ್ಕಾರ ನಡೆಸುವ ಹಲವು ಸಭೆಗಳಲ್ಲಿ ಈ ಪ್ರಯತ್ನ ಇನ್ನೂ ನಡೆಯಬೇಕಿರುವುದು ಕಂಡುಬರುತ್ತದೆ. ಕಳೆದ 10 ವರ್ಷಗಳಿಂದಲೂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಡೆಸುತ್ತಿರುವ ಬಂಗಾಳ ಜಾಗತಿಕ ಉದ್ಯಮ ಸಮಾವೇಶ ಈ ನಿಟ್ಟಿನಲ್ಲಿ ಯಾವ ಮುನ್ನಡೆಯನ್ನೂ ಸಾಧಿಸಿಲ್ಲ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ ಎಂದು ಸಂಖ್ಯೆಗಳು ಮತ್ತು ಅಂಕಿ ಅಂಶಗಳ ಮೂಲಕ ರಾಜ್ಯ ಸರ್ಕಾರ ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದರೂ. ಸರ್ಕಾರದಲ್ಲಿರುವ ಹಲವರೇ ಈ ಡೇಟಾಗಳನ್ನು ಪ್ರಶ್ನಿಸಿದ್ದಾರೆ.

ಇದೇ ಉದ್ಯಮ ಪ್ರಗತಿ ಕುಂಠಿತಗೊಳ್ಳುತ್ತಿರುವ ಸಂಗತಿ ಮತ್ತೆ ಬಿಜೆಪಿಯಿಂದಾಗಿ ಮುನ್ನೆಲೆಗೆ ಬಂದಿದೆ. ಮೋದಿ ಉದ್ದೇಶಪೂರ್ವಕವಾಗಿ ಉದ್ಯಮ ಸಂಬಂಧಿ ಸಂಗತಿಗಳನ್ನು ಹೆಕ್ಕಿ ತೆಗೆದು ಅದನ್ನು ಪೊರಿಬೊರ್ತನರ್‌ ಪೊರಿಬೊರ್ತನ್ (ಬದಲಾವಣೆಯ ಬದಲಾವಣೆ) ಘೋಷಣೆಗೆ ಪೋಣಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಲಾಗುತ್ತದೆ. ಇದರಿಂದ ಬಂಗಾಳದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಹೊಸ ಬಂಗಾಳ ಉದಯವಾಗುತ್ತದೆ ಎಂಬುದನ್ನೇ ಅವರು ಚುನಾವಣಾ ಘೋಷವಾಕ್ಯವನ್ನಾಗಿಸಿಕೊಂಡಿದ್ದಾರೆ.

ಬುದ್ಧದೇಬ್‌ ಭಟ್ಟಾಚಾರ್ಜೀ ಮುಖ್ಯಮಂತ್ರಿಯಾದ ಎರಡನೇ ಅವಧಿಯಲ್ಲಿ ರಾಜ್ಯಕ್ಕೆ ಹೂಡಿಕೆಯನ್ನು ತರಲು ಭಾರಿ ಪರಿಶ್ರಮವಹಿಸಿದ್ದರು. ಹಲವು ರಾಜ್ಯಗಳು, ವಿದೇಶಗಳಿಗೆ ಅವರು ತೆರಳಿ, ಬಂಗಾಳವನ್ನು ಉದ್ಯಮ ಸ್ನೇಹಿಯನ್ನಾಗಿಸಲು ಪ್ರಯತ್ನಿಸಿದ್ದರು. ಆಗ ರಾಜ್ಯದ ಸಚಿವಾಲಯ ರೈಟರ್ಸ್‌ ಬಿಲ್ಡಿಂಗ್ಸ್‌ನಲ್ಲಿ ಉದ್ಯಮಗಳು ಮತ್ತು ಹೂಡಿಕೆ ಎಂಬ ಎರಡು ಶಬ್ದಗಳೇ ಮಾರ್ದನಿಸುತ್ತಿದ್ದವು.

ಆದರೆ, ವಾಸ್ತವ ವಿಭಿನ್ನವಾಗಿತ್ತು. ಭಟ್ಟಾಚಾರ್ಜೀ ಕನಸು ವಾಸ್ತವಕ್ಕಿಳಿಯಲಿಲ್ಲ. ಯಾವುದೇ ಪ್ರಮುಖ ಉದ್ಯಮಗಳು ಬರಲಿಲ್ಲ. ಬದಲಿಗೆ, ಸಿಂಗೂರು ಮತ್ತು ನಂದಿಗ್ರಾಮದ ಕಳಂಕವನ್ನು ಬುದ್ಧದೇಬ್‌ ಭಟ್ಟಾಚಾರ್ಜೀ ಹೊತ್ತುಕೊಂಡು ನಗಣ್ಯವಾಗಬೇಕಾಯಿತು. ಎಡ ಪಕ್ಷವು ನಿಧಾನವಾಗಿ ರಾಜಕೀಯ ಇತಿಹಾಸದಿಂದಲೇ ಕಣ್ಮರೆಯಾಗುವಂತಾಯಿತು.

ಬಂಗಾಳಕ್ಕಿರುವ ಉದ್ಯಮ ವಿರೋಧಿ ಹಣೆಪಟ್ಟಿಯನ್ನು ತೆಗೆದುಹಾಕಲು ಭಟ್ಟಾಚಾರ್ಜೀ ಬಯಸಿದ್ದರು. ‘ಕೃಷಿ ನಮ್ಮ ಅಡಿಪಾಯ ಮತ್ತು ಉದ್ಯಮ ನಮ್ಮ ಭವಿಷ್ಯ’ ಎಂದು ಪಕ್ಷ ಹಾಗೂ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸಿದ್ದರು. ಆದರೆ ಅದನ್ನು ಅರ್ಥ ಮಾಡಿಸುವಲ್ಲಿ ಅವರು ವಿಫಲರೂ ಆದರು. ಅಷ್ಟಕ್ಕೂ, ಇದೇ ಅವರಿಗೆ ತಿರುಗುಬಾಣವಾಯಿತು ಮತ್ತು ಕೆಂಪು ಪಡೆಯಲ್ಲಿ ಬುದ್ಧದೇಬ್ ಭಟ್ಟಾಚಾರ್ಜಿ ಜನರಲ್‌ರಂತೆ ವರ್ತಿಸುತ್ತಿದ್ದರು ಎಂದು ಕೇಳಿಬರುವುದಕ್ಕೆ ಕಾರಣವಾಯಿತು.

2011 ರಲ್ಲಿ ಪೊರಿಬೊರ್ತನ್ (ಬದಲಾವಣೆ) ಎಂಬ ಅಲೆ ಬೀಸಿದ ನಂತರ ಬಂಗಾಳದಲ್ಲಿ ಉದ್ಯಮ ಸ್ಥಾಪನೆ ಬಗ್ಗೆ ಮಮತಾ ತುಂಬಾ ಮಾತನಾಡಿದ್ದಾರೆ. ಸಮ್ಮೇಳನಗಳು, ಶೃಂಗಗಳು, ಸಭೆಗಳು, ಭೇಟಿಗಳು ಮತ್ತು ಈವೆಂಟ್‌ಗಳು ನಡೆಯುತ್ತಲೇ ಇದ್ದವು. ಆದರೆ, ಈ ಪ್ರಯತ್ನಗಳಿಂದ ಎಷ್ಟು ಉದ್ಯಮಗಳು ಸ್ಥಾಪನೆಯಾದವು ಅಥವಾ ಎಷ್ಟು ಜನರಿಗೆ ಕಳೆದ 10 ವರ್ಷಗಳಲ್ಲಿ ಉದ್ಯೋಗ ಲಭ್ಯವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಟಾಟಾ ಕಂಪನಿಯು ಸಿಂಗೂರ್‌ ತೊರೆದ ನಂತರ ರೈತರಿಗೆ ಅವರ ಜಮೀನನ್ನು ವಾಪಸು ನೀಡಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದರು. ಆದರೆ, ಭಾರಿ ಕಾನೂನು ಹೋರಾಟದ ನಂತರ ರೈತರಿಗೆ ಜಮೀನು ವಾಪಸ್ ಸಿಕ್ಕಿದ್ದೇನೋ ನಿಜ. ಅಷ್ಟು ಹೊತ್ತಿಗಾಗಲೇ, ಸಿಂಗೂರು ಜಮೀನಿನ ಗುಣಲಕ್ಷಣವೇ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಆ ಜಾಗವನ್ನು ತೆಗೆದುಕೊಂಡು ಏನು ಮಾಡಬೇಕು ಎಂಬ ಗೊಂದಲ ಸಿಂಗೂರಿನ ಜನರಿಗೆ ಈಗ ಕಾಡುತ್ತಿದೆ. ಇದೆಲ್ಲದರ ಮಧ್ಯೆಯೇ ಮತ್ತೆ ಉದ್ಯಮ ಬೆಳೆಯಬೇಕು ಎಂಬ ಕರೆ ನೀಡಲಾಗುತ್ತಿದೆ. ಈ ಬಾರಿ ಮತ್ತೊಂದು ಪಕ್ಷ, ಬಿಜೆಪಿ ಈ ಮಾತನ್ನು ಹೇಳುತ್ತಿದೆ.

ಆಡಳಿತ ಬದಲಾದರೂ ಬಂಗಾಳದಲ್ಲಿ ಉದ್ಯಮಗಳು ಶೀಘ್ರದಲ್ಲಿ ತಲೆಯೆತ್ತಲು ಸಾಧ್ಯವೇ ಎಂಬ ಪ್ರಶ್ನೆ ಈಗ ಸಹಜವಾಗಿ ಕೇಳಿಬರುತ್ತಿದೆ. ಕಮಲ ಪಾಳಯ ಈ ಬಗ್ಗೆ ಖಚಿತ ಧ್ವನಿಯಲ್ಲಿ ಹೇಳುತ್ತದೆ. ಜೊತೆಗೆ, ಗುಜರಾತ್‌ನ ಉದಾಹರಣೆಯನ್ನೂ ಕೊಡುತ್ತದೆ. ಈಗ ಪ್ರಧಾನಿಯಾಗಿದ್ದವರೇ ಅಂದು ಮುಖ್ಯಮಂತ್ರಿಯಾಗಿ ಮಾಡಿದ ಸಾಧನೆಯನ್ನು ಕಮಲ ಪಾಳಯ ತೋರಿಸುತ್ತದೆ. ಅವರ ಪ್ರಕಾರ ಗುಜರಾತ್‌ ಎಂದಿಗೂ ಉದ್ಯಮಿಗಳನ್ನು ವಾಪಸು ಕಳುಹಿಸಿಲ್ಲ. ಗುಜರಾತ್‌ ಮಾದರಿಯನ್ನು ಹೊತ್ತು, ಉದ್ಯಮದ ಕನಸಿನೊಂದಿಗೆ ಚುನಾವಣೆ ಕಣ ಬಂಗಾಳಕ್ಕೆ ನರೇಂದ್ರ ಮೋದಿ ಬಂದಿದ್ದಾರೆ.

ಆದರೆ, ಈ ಕೆಲಸ ಅಷ್ಟು ಸುಲಭವೇ?

ಇದಕ್ಕೆ ಪಶ್ಚಿಮ ಬಂಗಾಳದಲ್ಲಿನ ಭೂಮಾಲೀಕತ್ವದ ವಿಧಾನವೇ ಉತ್ತರಿಸುತ್ತದೆ. ಭಾರಿ ಪ್ರಮಾಣದ ಭೂಮಿ ರಾಜ್ಯದಲ್ಲಿ ಒಂದೇ ಕಡೆ ಸಿಗುವುದು ಅಸಾಧ್ಯ ಎಂದು ಹಲವು ಪರಿಣಿತರು ಹೇಳುತ್ತಾರೆ. ಇದಕ್ಕೆ ಮೊದಲು ತೊಂದರೆಗೆ ಒಳಪಡುವುದೇ ಉತ್ಪಾದನಾ ಉದ್ಯಮ. ಕೇವಲ ಟಾಟಾ ಕಂಪನಿಯಲ್ಲ. ಲಾರ್ಸನ್‌ ಮತ್ತು ಟೂಬ್ರೋ ಕೂಡಾ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪಿಸುವ ಯೋಜನೆಯಿಂದ ಹಿಂದೆ ಸರಿದಿದೆ. ಇದಕ್ಕೆ ಕಾರಣವೇ ದೊಡ್ಡ ಮಟ್ಟದಲ್ಲಿ ಭೂಮಿ ಲಭ್ಯತೆ ಇಲ್ಲ ಎಂಬುದು. ತೃಣಮೂಲ ಕಾಂಗ್ರೆಸ್‌ ಸರ್ಕಾರದ ನಿಲುವೇನೆಂದರೆ, ಉದ್ಯಮಗಳಿಗೆ ಯಾವುದೇ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದರೆ, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಉದ್ಯಮಗಳನ್ನು ಸ್ಥಾಪಿಸುವುದು ಸಾಧ್ಯವೇ ಇಲ್ಲ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ.

ಬಂಗಾಳ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್‌ ಅಧಿಕಾರಕ್ಕೆ ಮರಳಿದರೆ, ಉದ್ಯಮಗಳಿಗೆ ಭೂಸ್ವಾಧೀನಕ್ಕೆ ಸಂಬಂಧಿಸಿರುವ ಅಡ್ಡಿಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸುವ ಸಾಧ್ಯತೆ ಇದೆ. ಆದರೆ, ಮಮತಾರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿಗೆ ಸಾಧ್ಯವಾದರೆ, ಎಲ್ಲವನ್ನೂ ರಾತ್ರೋರಾತ್ರಿ ಬದಲಾಯಿಸಬಹುದೇ? ಇದೇ ಹುಮ್ಮಸ್ಸಿನಿಂದ ಅವರು ಇದೆಲ್ಲವನ್ನೂ ಬದಲಿಸಬಹುದೇ?

ಬಂಗಾಳದಲ್ಲಿ ತುರ್ತಾಗಿ ಏನನ್ನಾದರೂ ಮಾಡಲು ಹೋದರೆ ಏನಾಗುತ್ತದೆ ಎಂಬುದಕ್ಕೆ ಬುದ್ಧದೇಬ್‌ ಭಟ್ಟಾಚಾರ್ಜೀ ಉದಾಹರಣೆ ನಮ್ಮೆದುರು ಇದೆ. ಖಂಡಿತವಾಗಿಯೂ, ಬಿಜೆಪಿ ಆ ಹಾದಿಯಲ್ಲಿ ಹೆಜ್ಜೆ ಇಡುವುದಿಲ್ಲ. ಹೀಗಾಗಿ, ಮೋದಿ-ಶಾ ಈಗ ಹೊರಡಿಸುತ್ತಿರುವ ಔದ್ಯಮೀಕರಣದ ಘೋಷಣೆಗಳ ಕಥೆ ಏನಾಗುತ್ತದೆ? ಈ ವಿಚಾರ ಎಂದಿಗೂ ಚರ್ಚೆಗೆ ಒಳಗಾಗುತ್ತಿರುವ ಬಿಸಿ ಬಿಸಿ ವಿಷಯವಾಗಿಯೇ ಮುಂದುವರಿಯುತ್ತದೆಯೇ? ಉತ್ತರಕ್ಕಾಗಿ, ಕಾಯುವುದೊಂದೇ ನಮಗೆ ಈಗ ಇರುವ ಉಪಾಯ.

ಪಶ್ಚಿಮ ಬಂಗಾಳವನ್ನು ಟಾಟಾ ಮೋಟಾರ್ಸ್ ತೊರೆದು 11 ವರ್ಷಗಳೇ ಗತಿಸಿದವು. ಆದರೆ, ರಾಜ್ಯಕ್ಕೆ ಇನ್ನೂ ಉದ್ಯಮ ವಿರೋಧಿ ಎಂಬ ಹಣೆಪಟ್ಟಿ ತಪ್ಪಲೇ ಇಲ್ಲ. ಉತ್ಪಾದನೆ ಉದ್ಯಮದ ಬಗ್ಗೆ ಇರುವ ಋಣಾತ್ಮಕ ಇಮೇಜ್‌ ಅನ್ನು ಬಂಗಾಳವೇ ನಿವಾರಿಸಿಕೊಳ್ಳಬೇಕಿದೆ. ಅದರಲ್ಲೂ, ರಾಜ್ಯ ಸರ್ಕಾರ ನಡೆಸುವ ಹಲವು ಸಭೆಗಳಲ್ಲಿ ಈ ಪ್ರಯತ್ನ ಇನ್ನೂ ನಡೆಯಬೇಕಿರುವುದು ಕಂಡುಬರುತ್ತದೆ. ಕಳೆದ 10 ವರ್ಷಗಳಿಂದಲೂ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ನಡೆಸುತ್ತಿರುವ ಬಂಗಾಳ ಜಾಗತಿಕ ಉದ್ಯಮ ಸಮಾವೇಶ ಈ ನಿಟ್ಟಿನಲ್ಲಿ ಯಾವ ಮುನ್ನಡೆಯನ್ನೂ ಸಾಧಿಸಿಲ್ಲ. ರಾಜ್ಯದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದೆ ಎಂದು ಸಂಖ್ಯೆಗಳು ಮತ್ತು ಅಂಕಿ ಅಂಶಗಳ ಮೂಲಕ ರಾಜ್ಯ ಸರ್ಕಾರ ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದರೂ. ಸರ್ಕಾರದಲ್ಲಿರುವ ಹಲವರೇ ಈ ಡೇಟಾಗಳನ್ನು ಪ್ರಶ್ನಿಸಿದ್ದಾರೆ.

ಇದೇ ಉದ್ಯಮ ಪ್ರಗತಿ ಕುಂಠಿತಗೊಳ್ಳುತ್ತಿರುವ ಸಂಗತಿ ಮತ್ತೆ ಬಿಜೆಪಿಯಿಂದಾಗಿ ಮುನ್ನೆಲೆಗೆ ಬಂದಿದೆ. ಮೋದಿ ಉದ್ದೇಶಪೂರ್ವಕವಾಗಿ ಉದ್ಯಮ ಸಂಬಂಧಿ ಸಂಗತಿಗಳನ್ನು ಹೆಕ್ಕಿ ತೆಗೆದು ಅದನ್ನು ಪೊರಿಬೊರ್ತನರ್‌ ಪೊರಿಬೊರ್ತನ್ (ಬದಲಾವಣೆಯ ಬದಲಾವಣೆ) ಘೋಷಣೆಗೆ ಪೋಣಿಸುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳದಲ್ಲಿ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಸಲಾಗುತ್ತದೆ. ಇದರಿಂದ ಬಂಗಾಳದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಹೊಸ ಬಂಗಾಳ ಉದಯವಾಗುತ್ತದೆ ಎಂಬುದನ್ನೇ ಅವರು ಚುನಾವಣಾ ಘೋಷವಾಕ್ಯವನ್ನಾಗಿಸಿಕೊಂಡಿದ್ದಾರೆ.

ಬುದ್ಧದೇಬ್‌ ಭಟ್ಟಾಚಾರ್ಜೀ ಮುಖ್ಯಮಂತ್ರಿಯಾದ ಎರಡನೇ ಅವಧಿಯಲ್ಲಿ ರಾಜ್ಯಕ್ಕೆ ಹೂಡಿಕೆಯನ್ನು ತರಲು ಭಾರಿ ಪರಿಶ್ರಮವಹಿಸಿದ್ದರು. ಹಲವು ರಾಜ್ಯಗಳು, ವಿದೇಶಗಳಿಗೆ ಅವರು ತೆರಳಿ, ಬಂಗಾಳವನ್ನು ಉದ್ಯಮ ಸ್ನೇಹಿಯನ್ನಾಗಿಸಲು ಪ್ರಯತ್ನಿಸಿದ್ದರು. ಆಗ ರಾಜ್ಯದ ಸಚಿವಾಲಯ ರೈಟರ್ಸ್‌ ಬಿಲ್ಡಿಂಗ್ಸ್‌ನಲ್ಲಿ ಉದ್ಯಮಗಳು ಮತ್ತು ಹೂಡಿಕೆ ಎಂಬ ಎರಡು ಶಬ್ದಗಳೇ ಮಾರ್ದನಿಸುತ್ತಿದ್ದವು.

ಆದರೆ, ವಾಸ್ತವ ವಿಭಿನ್ನವಾಗಿತ್ತು. ಭಟ್ಟಾಚಾರ್ಜೀ ಕನಸು ವಾಸ್ತವಕ್ಕಿಳಿಯಲಿಲ್ಲ. ಯಾವುದೇ ಪ್ರಮುಖ ಉದ್ಯಮಗಳು ಬರಲಿಲ್ಲ. ಬದಲಿಗೆ, ಸಿಂಗೂರು ಮತ್ತು ನಂದಿಗ್ರಾಮದ ಕಳಂಕವನ್ನು ಬುದ್ಧದೇಬ್‌ ಭಟ್ಟಾಚಾರ್ಜೀ ಹೊತ್ತುಕೊಂಡು ನಗಣ್ಯವಾಗಬೇಕಾಯಿತು. ಎಡ ಪಕ್ಷವು ನಿಧಾನವಾಗಿ ರಾಜಕೀಯ ಇತಿಹಾಸದಿಂದಲೇ ಕಣ್ಮರೆಯಾಗುವಂತಾಯಿತು.

ಬಂಗಾಳಕ್ಕಿರುವ ಉದ್ಯಮ ವಿರೋಧಿ ಹಣೆಪಟ್ಟಿಯನ್ನು ತೆಗೆದುಹಾಕಲು ಭಟ್ಟಾಚಾರ್ಜೀ ಬಯಸಿದ್ದರು. ‘ಕೃಷಿ ನಮ್ಮ ಅಡಿಪಾಯ ಮತ್ತು ಉದ್ಯಮ ನಮ್ಮ ಭವಿಷ್ಯ’ ಎಂದು ಪಕ್ಷ ಹಾಗೂ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಬಯಸಿದ್ದರು. ಆದರೆ ಅದನ್ನು ಅರ್ಥ ಮಾಡಿಸುವಲ್ಲಿ ಅವರು ವಿಫಲರೂ ಆದರು. ಅಷ್ಟಕ್ಕೂ, ಇದೇ ಅವರಿಗೆ ತಿರುಗುಬಾಣವಾಯಿತು ಮತ್ತು ಕೆಂಪು ಪಡೆಯಲ್ಲಿ ಬುದ್ಧದೇಬ್ ಭಟ್ಟಾಚಾರ್ಜಿ ಜನರಲ್‌ರಂತೆ ವರ್ತಿಸುತ್ತಿದ್ದರು ಎಂದು ಕೇಳಿಬರುವುದಕ್ಕೆ ಕಾರಣವಾಯಿತು.

2011 ರಲ್ಲಿ ಪೊರಿಬೊರ್ತನ್ (ಬದಲಾವಣೆ) ಎಂಬ ಅಲೆ ಬೀಸಿದ ನಂತರ ಬಂಗಾಳದಲ್ಲಿ ಉದ್ಯಮ ಸ್ಥಾಪನೆ ಬಗ್ಗೆ ಮಮತಾ ತುಂಬಾ ಮಾತನಾಡಿದ್ದಾರೆ. ಸಮ್ಮೇಳನಗಳು, ಶೃಂಗಗಳು, ಸಭೆಗಳು, ಭೇಟಿಗಳು ಮತ್ತು ಈವೆಂಟ್‌ಗಳು ನಡೆಯುತ್ತಲೇ ಇದ್ದವು. ಆದರೆ, ಈ ಪ್ರಯತ್ನಗಳಿಂದ ಎಷ್ಟು ಉದ್ಯಮಗಳು ಸ್ಥಾಪನೆಯಾದವು ಅಥವಾ ಎಷ್ಟು ಜನರಿಗೆ ಕಳೆದ 10 ವರ್ಷಗಳಲ್ಲಿ ಉದ್ಯೋಗ ಲಭ್ಯವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಟಾಟಾ ಕಂಪನಿಯು ಸಿಂಗೂರ್‌ ತೊರೆದ ನಂತರ ರೈತರಿಗೆ ಅವರ ಜಮೀನನ್ನು ವಾಪಸು ನೀಡಲಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಭರವಸೆ ನೀಡಿದ್ದರು. ಆದರೆ, ಭಾರಿ ಕಾನೂನು ಹೋರಾಟದ ನಂತರ ರೈತರಿಗೆ ಜಮೀನು ವಾಪಸ್ ಸಿಕ್ಕಿದ್ದೇನೋ ನಿಜ. ಅಷ್ಟು ಹೊತ್ತಿಗಾಗಲೇ, ಸಿಂಗೂರು ಜಮೀನಿನ ಗುಣಲಕ್ಷಣವೇ ಸಂಪೂರ್ಣವಾಗಿ ಬದಲಾಗಿ ಹೋಗಿತ್ತು. ಆ ಜಾಗವನ್ನು ತೆಗೆದುಕೊಂಡು ಏನು ಮಾಡಬೇಕು ಎಂಬ ಗೊಂದಲ ಸಿಂಗೂರಿನ ಜನರಿಗೆ ಈಗ ಕಾಡುತ್ತಿದೆ. ಇದೆಲ್ಲದರ ಮಧ್ಯೆಯೇ ಮತ್ತೆ ಉದ್ಯಮ ಬೆಳೆಯಬೇಕು ಎಂಬ ಕರೆ ನೀಡಲಾಗುತ್ತಿದೆ. ಈ ಬಾರಿ ಮತ್ತೊಂದು ಪಕ್ಷ, ಬಿಜೆಪಿ ಈ ಮಾತನ್ನು ಹೇಳುತ್ತಿದೆ.

ಆಡಳಿತ ಬದಲಾದರೂ ಬಂಗಾಳದಲ್ಲಿ ಉದ್ಯಮಗಳು ಶೀಘ್ರದಲ್ಲಿ ತಲೆಯೆತ್ತಲು ಸಾಧ್ಯವೇ ಎಂಬ ಪ್ರಶ್ನೆ ಈಗ ಸಹಜವಾಗಿ ಕೇಳಿಬರುತ್ತಿದೆ. ಕಮಲ ಪಾಳಯ ಈ ಬಗ್ಗೆ ಖಚಿತ ಧ್ವನಿಯಲ್ಲಿ ಹೇಳುತ್ತದೆ. ಜೊತೆಗೆ, ಗುಜರಾತ್‌ನ ಉದಾಹರಣೆಯನ್ನೂ ಕೊಡುತ್ತದೆ. ಈಗ ಪ್ರಧಾನಿಯಾಗಿದ್ದವರೇ ಅಂದು ಮುಖ್ಯಮಂತ್ರಿಯಾಗಿ ಮಾಡಿದ ಸಾಧನೆಯನ್ನು ಕಮಲ ಪಾಳಯ ತೋರಿಸುತ್ತದೆ. ಅವರ ಪ್ರಕಾರ ಗುಜರಾತ್‌ ಎಂದಿಗೂ ಉದ್ಯಮಿಗಳನ್ನು ವಾಪಸು ಕಳುಹಿಸಿಲ್ಲ. ಗುಜರಾತ್‌ ಮಾದರಿಯನ್ನು ಹೊತ್ತು, ಉದ್ಯಮದ ಕನಸಿನೊಂದಿಗೆ ಚುನಾವಣೆ ಕಣ ಬಂಗಾಳಕ್ಕೆ ನರೇಂದ್ರ ಮೋದಿ ಬಂದಿದ್ದಾರೆ.

ಆದರೆ, ಈ ಕೆಲಸ ಅಷ್ಟು ಸುಲಭವೇ?

ಇದಕ್ಕೆ ಪಶ್ಚಿಮ ಬಂಗಾಳದಲ್ಲಿನ ಭೂಮಾಲೀಕತ್ವದ ವಿಧಾನವೇ ಉತ್ತರಿಸುತ್ತದೆ. ಭಾರಿ ಪ್ರಮಾಣದ ಭೂಮಿ ರಾಜ್ಯದಲ್ಲಿ ಒಂದೇ ಕಡೆ ಸಿಗುವುದು ಅಸಾಧ್ಯ ಎಂದು ಹಲವು ಪರಿಣಿತರು ಹೇಳುತ್ತಾರೆ. ಇದಕ್ಕೆ ಮೊದಲು ತೊಂದರೆಗೆ ಒಳಪಡುವುದೇ ಉತ್ಪಾದನಾ ಉದ್ಯಮ. ಕೇವಲ ಟಾಟಾ ಕಂಪನಿಯಲ್ಲ. ಲಾರ್ಸನ್‌ ಮತ್ತು ಟೂಬ್ರೋ ಕೂಡಾ ಉಷ್ಣವಿದ್ಯುತ್‌ ಸ್ಥಾವರ ಸ್ಥಾಪಿಸುವ ಯೋಜನೆಯಿಂದ ಹಿಂದೆ ಸರಿದಿದೆ. ಇದಕ್ಕೆ ಕಾರಣವೇ ದೊಡ್ಡ ಮಟ್ಟದಲ್ಲಿ ಭೂಮಿ ಲಭ್ಯತೆ ಇಲ್ಲ ಎಂಬುದು. ತೃಣಮೂಲ ಕಾಂಗ್ರೆಸ್‌ ಸರ್ಕಾರದ ನಿಲುವೇನೆಂದರೆ, ಉದ್ಯಮಗಳಿಗೆ ಯಾವುದೇ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಈ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದೇ ಇದ್ದರೆ, ಪಶ್ಚಿಮ ಬಂಗಾಳದಲ್ಲಿ ದೊಡ್ಡ ಉದ್ಯಮಗಳನ್ನು ಸ್ಥಾಪಿಸುವುದು ಸಾಧ್ಯವೇ ಇಲ್ಲ ಎಂದು ಪರಿಣಿತರು ಅಭಿಪ್ರಾಯಪಡುತ್ತಾರೆ.

ಬಂಗಾಳ ಚುನಾವಣೆಯ ನಂತರ ತೃಣಮೂಲ ಕಾಂಗ್ರೆಸ್‌ ಅಧಿಕಾರಕ್ಕೆ ಮರಳಿದರೆ, ಉದ್ಯಮಗಳಿಗೆ ಭೂಸ್ವಾಧೀನಕ್ಕೆ ಸಂಬಂಧಿಸಿರುವ ಅಡ್ಡಿಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸುವ ಸಾಧ್ಯತೆ ಇದೆ. ಆದರೆ, ಮಮತಾರನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿಗೆ ಸಾಧ್ಯವಾದರೆ, ಎಲ್ಲವನ್ನೂ ರಾತ್ರೋರಾತ್ರಿ ಬದಲಾಯಿಸಬಹುದೇ? ಇದೇ ಹುಮ್ಮಸ್ಸಿನಿಂದ ಅವರು ಇದೆಲ್ಲವನ್ನೂ ಬದಲಿಸಬಹುದೇ?

ಬಂಗಾಳದಲ್ಲಿ ತುರ್ತಾಗಿ ಏನನ್ನಾದರೂ ಮಾಡಲು ಹೋದರೆ ಏನಾಗುತ್ತದೆ ಎಂಬುದಕ್ಕೆ ಬುದ್ಧದೇಬ್‌ ಭಟ್ಟಾಚಾರ್ಜೀ ಉದಾಹರಣೆ ನಮ್ಮೆದುರು ಇದೆ. ಖಂಡಿತವಾಗಿಯೂ, ಬಿಜೆಪಿ ಆ ಹಾದಿಯಲ್ಲಿ ಹೆಜ್ಜೆ ಇಡುವುದಿಲ್ಲ. ಹೀಗಾಗಿ, ಮೋದಿ-ಶಾ ಈಗ ಹೊರಡಿಸುತ್ತಿರುವ ಔದ್ಯಮೀಕರಣದ ಘೋಷಣೆಗಳ ಕಥೆ ಏನಾಗುತ್ತದೆ? ಈ ವಿಚಾರ ಎಂದಿಗೂ ಚರ್ಚೆಗೆ ಒಳಗಾಗುತ್ತಿರುವ ಬಿಸಿ ಬಿಸಿ ವಿಷಯವಾಗಿಯೇ ಮುಂದುವರಿಯುತ್ತದೆಯೇ? ಉತ್ತರಕ್ಕಾಗಿ, ಕಾಯುವುದೊಂದೇ ನಮಗೆ ಈಗ ಇರುವ ಉಪಾಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.