ETV Bharat / bharat

ಸಿಕಂದ್ರಾಬಾದ್​ನಲ್ಲಿ ರೈಲಿಗೆ ಬೆಂಕಿ, ಗಾಳಿಯಲ್ಲಿ ಗುಂಡು... ಯುವಕ ಸಾವು

author img

By

Published : Jun 17, 2022, 12:42 PM IST

Updated : Jun 17, 2022, 6:41 PM IST

ಅಕ್ಷರಶಃ ತೆಲಂಗಾಣದ ಹೈದರಾಬಾದ್​ ಹೊತ್ತಿ ಉರಿಯುತ್ತಿದೆ. ಅಗ್ನಿಪಥ್​ ಯೋಜನೆ ವಿರೋಧಿಸಿ ಪ್ರತಿಭಟನಾಕಾರರು ಉಗ್ರರೂಪ ತಾಳಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ಕ್ರಮದಲ್ಲಿ ಯುವಕನೊಬ್ಬ ಮೃತಪಟ್ಟಿದ್ದು, ಪ್ರತಿಭಟನೆ ಮತ್ತಷ್ಟು ಕಾವು ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

agneepath protest live update, agneepath yojana protest in Hyderabad, Agnipath Recruitment Scheme, agneepath scheme for army recruitment, Agnipath scheme protest in Telangana, Hyderabad riots against Agnipath scheme,  ಅಗ್ನಿಪಥ್ ಪ್ರತಿಭಟನೆ ಲೈವ್ ಅಪ್‌ಡೇಟ್, ಹೈದರಾಬಾದ್‌ನಲ್ಲಿ ಅಗ್ನಿಪಥ್ ಯೋಜನೆ ಪ್ರತಿಭಟನೆ, ಅಗ್ನಿಪಥ್ ನೇಮಕಾತಿ ಯೋಜನೆ, ಸೇನಾ ನೇಮಕಾತಿಗಾಗಿ ಅಗ್ನಿಪಥ್ ಯೋಜನೆ, ತೆಲಂಗಾಣದಲ್ಲಿ ಅಗ್ನಿಪಥ್ ಯೋಜನೆ ಪ್ರತಿಭಟನೆ, ಅಗ್ನಿಪಥ್ ಯೋಜನೆ ವಿರುದ್ಧ ಹೈದರಾಬಾದ್ ಗಲಭೆ,
‘ಅಗ್ನಿಪಥ್​’ದಲ್ಲಿ ಸಾಗುತ್ತಿರುವ ಹೈದರಾಬಾದ್

ಹೈದರಾಬಾದ್​: ದೇಶಾದ್ಯಂತ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ಉಗ್ರರೂಪ ಪಡೆದುಕೊಂಡಿದೆ. ಯೋಜನೆ ರದ್ದುಗೊಳಿಸುವಂತೆ ಸಿಕಂದರಾಬಾದ್‌ನಲ್ಲಿ ಯುವಕರ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ಈ ವೇಳೆ, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು.

‘ಅಗ್ನಿಪಥ್​’ದಲ್ಲಿ ಸಾಗುತ್ತಿರುವ ಹೈದರಾಬಾದ್

ಶೀತಲ ಸಮರ ಎಂದು ಕರೆಯಲಾಗುವ ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯುವಕ ನಿರ್ಮಲ್ ನಿವಾಸಿ ದಾಮೋದರಕುರಷಿಯಾ ಎಂದು ಗುರುತಿಸಲಾಗಿದೆ. ಸೇನಾ ನೇಮಕಾತಿ ಮಂಡಳಿಗೆ ತೆರಳಿ, ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಪ್ರತಿಭಟನಾಕಾರರನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಓದಿ: ಹೈದರಾಬಾದ್​ಗೂ ತಟ್ಟಿದ ‘ಅಗ್ನಿ’ ಕಾವು, ಟ್ರೈನ್​ಗೆ ಬೆಂಕಿ, ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು, ಯುವಕ ಸಾವು!

ಪ್ರತಿಭಟನಾಕಾರರು ಪೊಲೀಸರು ಮತ್ತು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಸಿಕಂದರಾಬಾದ್ ರೈಲ್ವೆ ನಿಲ್ದಾಣ ರಣರಂಗದಂತಾಗಿದೆ. ಪ್ರತಿಭಟನಾಕಾರರನ್ನು ಬಿಗಿಗೊಳಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ, ನೂಕುನುಗ್ಗಲಾಗಿದ್ದು, ಹಲವಾರು ಯುವಕರು ಗಾಯಗೊಂಡಿದ್ದಾರೆ. ಅಗ್ನಿಪಥ್​ ರದ್ದುಗೊಳಿಸಿ ಎಂದಿನಂತೆ ಸೇನಾ ನೇಮಕಾತಿ ನಡೆಸಬೇಕು ಎಂದು ಯುವಕರು ಆಗ್ರಹಿಸುತ್ತಿದ್ದಾರೆ.

ಸಿಕಂದರಾಬಾದ್ ಗಲಭೆಯ ನಂತರ ಕಟ್ಟೆಚ್ಚರ ವಹಿಸಿದ್ದ ರಾಜ್ಯದ ಇತರ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿವೆ. ವಿಶೇಷವಾಗಿ ನಾಂಪಲ್ಲಿ, ವಾರಂಗಲ್, ಮಹಬೂಬಾಬಾದ್, ಕಾಜಿಪೇಟ್, ಜನಗಾಮ, ಡೋರ್ನಕಲ್ ರೈಲು ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ನಿಲ್ದಾಣಗಳಲ್ಲಿ ರೈಲ್ವೆ ಪೊಲೀಸರು ಹಾಗೂ ಸಾಮಾನ್ಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಹೈದರಾಬಾದ್​ನ ಮುಖ್ಯವಾದ ನಾಂಪಲ್ಲಿ ರೈಲು ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಲಾಗಿದೆ.

ಹೈದರಾಬಾದ್​: ದೇಶಾದ್ಯಂತ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ಉಗ್ರರೂಪ ಪಡೆದುಕೊಂಡಿದೆ. ಯೋಜನೆ ರದ್ದುಗೊಳಿಸುವಂತೆ ಸಿಕಂದರಾಬಾದ್‌ನಲ್ಲಿ ಯುವಕರ ಪ್ರತಿಭಟನೆ ಕಾವು ಹೆಚ್ಚಾಗಿದ್ದು, ಈ ವೇಳೆ, ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದರು.

‘ಅಗ್ನಿಪಥ್​’ದಲ್ಲಿ ಸಾಗುತ್ತಿರುವ ಹೈದರಾಬಾದ್

ಶೀತಲ ಸಮರ ಎಂದು ಕರೆಯಲಾಗುವ ಈ ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟ ಯುವಕ ನಿರ್ಮಲ್ ನಿವಾಸಿ ದಾಮೋದರಕುರಷಿಯಾ ಎಂದು ಗುರುತಿಸಲಾಗಿದೆ. ಸೇನಾ ನೇಮಕಾತಿ ಮಂಡಳಿಗೆ ತೆರಳಿ, ಅಲ್ಲಿಂದ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಗೊಂಡ ಪ್ರತಿಭಟನಾಕಾರರನ್ನು ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಓದಿ: ಹೈದರಾಬಾದ್​ಗೂ ತಟ್ಟಿದ ‘ಅಗ್ನಿ’ ಕಾವು, ಟ್ರೈನ್​ಗೆ ಬೆಂಕಿ, ಕಲ್ಲು ತೂರಾಟ, ಗಾಳಿಯಲ್ಲಿ ಗುಂಡು, ಯುವಕ ಸಾವು!

ಪ್ರತಿಭಟನಾಕಾರರು ಪೊಲೀಸರು ಮತ್ತು ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಸಿಕಂದರಾಬಾದ್ ರೈಲ್ವೆ ನಿಲ್ದಾಣ ರಣರಂಗದಂತಾಗಿದೆ. ಪ್ರತಿಭಟನಾಕಾರರನ್ನು ಬಿಗಿಗೊಳಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು. ಈ ವೇಳೆ, ನೂಕುನುಗ್ಗಲಾಗಿದ್ದು, ಹಲವಾರು ಯುವಕರು ಗಾಯಗೊಂಡಿದ್ದಾರೆ. ಅಗ್ನಿಪಥ್​ ರದ್ದುಗೊಳಿಸಿ ಎಂದಿನಂತೆ ಸೇನಾ ನೇಮಕಾತಿ ನಡೆಸಬೇಕು ಎಂದು ಯುವಕರು ಆಗ್ರಹಿಸುತ್ತಿದ್ದಾರೆ.

ಸಿಕಂದರಾಬಾದ್ ಗಲಭೆಯ ನಂತರ ಕಟ್ಟೆಚ್ಚರ ವಹಿಸಿದ್ದ ರಾಜ್ಯದ ಇತರ ರೈಲು ನಿಲ್ದಾಣಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿವೆ. ವಿಶೇಷವಾಗಿ ನಾಂಪಲ್ಲಿ, ವಾರಂಗಲ್, ಮಹಬೂಬಾಬಾದ್, ಕಾಜಿಪೇಟ್, ಜನಗಾಮ, ಡೋರ್ನಕಲ್ ರೈಲು ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಈ ನಿಲ್ದಾಣಗಳಲ್ಲಿ ರೈಲ್ವೆ ಪೊಲೀಸರು ಹಾಗೂ ಸಾಮಾನ್ಯ ಪೊಲೀಸರನ್ನು ನಿಯೋಜಿಸಲಾಗಿದ್ದು, ಹೈದರಾಬಾದ್​ನ ಮುಖ್ಯವಾದ ನಾಂಪಲ್ಲಿ ರೈಲು ನಿಲ್ದಾಣಕ್ಕೆ ಪ್ರವೇಶ ನಿರಾಕರಿಸಲಾಗಿದೆ.

Last Updated : Jun 17, 2022, 6:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.