ತೆಂಕಸಿ (ತಮಿಳುನಾಡು): ಇಲ್ಲಿನ ತೆಂಕಸಿ ಬಳಿಯ ಕಲ್ಲುರಾಣಃಇ ಎಂಬ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ಮಾನವನ ಕೊಳೆತ ತಲೆಬುರುಡೆ ಹಿಡಿದು ನೃತ್ಯ ಮಾಡಿರುವುದು ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಹಲವು ಸ್ಮಶಾನವಾಸಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಟ್ಟುಕೋವಿಲ್ ಬಳಿಯ ಶಕ್ತಿ ಪೋತಿ ಸುದಾಲೈ ಮಾದಸ್ವಾಮಿ ದೇವಾಲಯದ ಆವರಣದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲೇ ಈ ಘಟನೆ ನಡೆಯಿತು. ಮಾನವನ ತಲೆ ಬುರುಡೆಯನ್ನು ಕತ್ತಿಗೆ ಸಿಕ್ಕಿಸಿಕೊಂಡು ನೃತ್ಯ ಮಾಡಿದ್ದಾರೆ.
ಜಾತ್ರಾ ಮಹೋತ್ಸವದ ವೇಳೆ ಮಾನವರ ದೇಹವನ್ನು ಭಕ್ಷಣೆ ಮಾಡಲಾಗಿದೆ ಎಂಬ ಆರೋಪ ಸಹ ಇದ್ದು, ವಿಚಾರಣೆ ಮುಂದುವರಿದಿದೆ.