ETV Bharat / bharat

ಹೂಡಿಕೆದಾರರ ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ: ಕೇಂದ್ರ, ಸೆಬಿಗೆ ಸುಪ್ರೀಂ ಕೋರ್ಟ್ ಸೂಚನೆ - ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ

ಭಾರತದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುಪ್ರೀಂ ಕೋರ್ಟ್ ಕೇಳಿದೆ. ಈ ಬಗ್ಗೆ ಸಲ್ಲಿಸಲಾದ ಪಿಐಎಲ್​ಗಳ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಸರ್ಕಾರ ಮತ್ತು ಸೆಬಿಗೆ ಸೂಚಿಸಿದೆ.

ಹೂಡಿಕೆದಾರರ ಸುರಕ್ಷತೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ: ಕೇಂದ್ರ, ಸೆಬಿಗೆ ಸುಪ್ರೀಂ ಕೋರ್ಟ್ ಸೂಚನೆ
tell-about-measures-taken-for-investor-safety-supreme-court-notice-to-centre-sebi
author img

By

Published : Feb 10, 2023, 7:44 PM IST

ನವದೆಹಲಿ: ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಶುಕ್ರವಾರ ಕಾಳಜಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಷೇರು ಮಾರುಕಟ್ಟೆಯನ್ನು ನಿಯಂತ್ರಿಸಲು ದೃಢವಾದ ವ್ಯವಸ್ಥೆಯೊಂದನ್ನು ರಚಿಸುವತ್ತ ಒಲವು ತೋರಿದೆ. ಅಮಾಯಕ ಹೂಡಿಕೆದಾರರ ಶೋಷಣೆ ಮಾಡಲಾಗುತ್ತಿದೆ ಮತ್ತು ಅದಾನಿ ಗ್ರೂಪ್‌ನ ಷೇರು ಮೌಲ್ಯದ ಕೃತಕ ಕುಸಿತ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಪಿಐಎಲ್​ಗಳ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಈ ಬಗ್ಗೆ ಆತಂಕ ವ್ಯಕ್ತಪಡಿಸಿತು ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಾರದೋ ತಲೆದಂಡಕ್ಕೆ ಯೋಜಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ತಿಳಿಸಿತು. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ಆಧುನಿಕ ಕಾಲದಲ್ಲಿ ಬಂಡವಾಳ ಹರಿವು ತಡೆರಹಿತವಾಗಿರುವ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಿಯಂತ್ರಕ ಕಾರ್ಯವಿಧಾನವನ್ನು ಬಲಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಹಣಕಾಸು ಸಚಿವಾಲಯ ಮತ್ತು ಇತರರಿಂದ ಅಭಿಪ್ರಾಯಗಳನ್ನು ಕೋರಿತು.

ಇದು ಕೇವಲ ಮುಕ್ತ ಸಂವಾದವಾಗಿದೆ. ಅವರು ನ್ಯಾಯಾಲಯದ ಮುಂದೆ ಸಮಸ್ಯೆಯನ್ನು ತಂದಿದ್ದಾರೆ. ಭಾರತೀಯ ಹೂಡಿಕೆದಾರರ ರಕ್ಷಣೆಯನ್ನು ನಾವು ಹೇಗೆ ಖಚಿತಪಡಿಸಿಕೊಳ್ಳುತ್ತೇವೆ ಎಂಬುದು ಆತಂಕದ ಸಂಗತಿಯಾಗಿದೆ. ಇಲ್ಲಿ ನಡೆದಿರುವುದು ಶಾರ್ಟ್ ಸೆಲ್ಲಿಂಗ್ ಆಗಿದೆ. ಬಹುಶಃ ಸೆಬಿ ತನ್ನ ತನಿಖೆಯನ್ನು ಮಾಡುತ್ತಿದೆ. ನಾವಿಲ್ಲಿ ಯಾರನ್ನೋ ಬಲಿಪಶು ಮಾಡಲು ಯೋಜಿಸುತ್ತಿಲ್ಲ ಎಂಬುದನ್ನು ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಎಂದು ಕೋರ್ಟ್ ಹೇಳಿತು.

ಭವಿಷ್ಯದಲ್ಲಿ ನಾವು ದೃಢವಾದ ವ್ಯವಸ್ಥೆ ಹೊಂದಲಿದ್ದೇವೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು? ಏಕೆಂದರೆ ಇಂದು ಬಂಡವಾಳವು ಭಾರತದ ಒಳಗೆ ಮತ್ತು ಹೊರಗೆ ಮನಬಂದಂತೆ ಚಲಿಸುತ್ತಿದೆ. ಭವಿಷ್ಯದಲ್ಲಿ ಭಾರತೀಯ ಹೂಡಿಕೆದಾರರನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಎಲ್ಲರೂ ಈಗ ಷೇರು ಮಾರುಕಟ್ಟೆಯಲ್ಲಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಮಾರುಕಟ್ಟೆಯಲ್ಲಿ 10 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿರುವುದನ್ನು ಪಿಐಎಲ್​ನಲ್ಲಿ ಹೇಳಿರುವುದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

ಹೂಡಿಕೆದಾರರು ಸುರಕ್ಷಿತವಾಗಿದ್ದಾರೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು? ಇಂಥದ್ದು ಭವಿಷ್ಯದಲ್ಲಿ ಮತ್ತೆ ಆಗಲ್ಲ ಎಂದು ಹೇಗೆ ಖಚಿತಪಡಿಸಿಕೊಳ್ಳುವುದು? ಇದರಲ್ಲಿ ಸೆಬಿಯ ಪಾತ್ರ ಹೇಗೆ ನಿರ್ಣಯಿಸುವುದು? ಉದಾಹರಣೆಗೆ ನೋಡುವುದಾದರೆ- ಮತ್ತೊಂದು ವಿಚಾರಕ್ಕೆ ಬಂದರೆ ಸರ್ಕಿಟ್ ಬ್ರೇಕರ್​ ಇವೆ ಎಂದು ನ್ಯಾಯಾಲಯ ಹೇಳಿತು. ಹೂಡಿಕೆದಾರರನ್ನು ರಕ್ಷಿಸಲು ದೃಢವಾದ ಕ್ರಮಗಳನ್ನು ಜಾರಿಗೆ ತರುವುದರ ಜೊತೆಗೆ ಡೊಮೇನ್ ತಜ್ಞರು ಮತ್ತು ಇತರರ ಸಮಿತಿಯನ್ನು ರಚಿಸುವಂತೆ ಪೀಠವು ಸಲಹೆ ನೀಡಿತು. ಸೆಬಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್, ಮಾರುಕಟ್ಟೆ ನಿಯಂತ್ರಕ ಮತ್ತು ಇತರ ಶಾಸನಬದ್ಧ ಸಂಸ್ಥೆಗಳು ಅಗತ್ಯ ಕೆಲಸವನ್ನು ಮಾಡುತ್ತಿವೆ ಎಂದು ಹೇಳಿದರು.

ಇತ್ತೀಚಿನ ಎರಡು ವಾರಗಳಲ್ಲಿ ಕಂಡುಬಂದ ಕೆಲವು ಏರಿಳಿತಗಳಿಂದ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ದೇಶದೊಳಗಿನ ನಿಯಂತ್ರಕ ಕಾರ್ಯವಿಧಾನಗಳನ್ನು ಸರಿಯಾಗಿ ಬಲಪಡಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಸಾಲಿಸಿಟರ್ ಜನರಲ್ ಅವರಿಗೆ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದೇವೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಹಿಂಡೆನ್​ಬರ್ಗ್​ ವಿರುದ್ಧ ಕಾನೂನು ಹೋರಾಟಕ್ಕೆ ಯುಎಸ್​ ಲಾ ಫರ್ಮ್ ನೇಮಿಸಿಕೊಂಡ ಅದಾನಿ

ನವದೆಹಲಿ: ಭಾರತೀಯ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಬಗ್ಗೆ ಶುಕ್ರವಾರ ಕಾಳಜಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಷೇರು ಮಾರುಕಟ್ಟೆಯನ್ನು ನಿಯಂತ್ರಿಸಲು ದೃಢವಾದ ವ್ಯವಸ್ಥೆಯೊಂದನ್ನು ರಚಿಸುವತ್ತ ಒಲವು ತೋರಿದೆ. ಅಮಾಯಕ ಹೂಡಿಕೆದಾರರ ಶೋಷಣೆ ಮಾಡಲಾಗುತ್ತಿದೆ ಮತ್ತು ಅದಾನಿ ಗ್ರೂಪ್‌ನ ಷೇರು ಮೌಲ್ಯದ ಕೃತಕ ಕುಸಿತ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಪಿಐಎಲ್​ಗಳ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ಈ ಬಗ್ಗೆ ಆತಂಕ ವ್ಯಕ್ತಪಡಿಸಿತು ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಯಾರದೋ ತಲೆದಂಡಕ್ಕೆ ಯೋಜಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ತಿಳಿಸಿತು. ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರನ್ನೊಳಗೊಂಡ ಪೀಠವು, ಆಧುನಿಕ ಕಾಲದಲ್ಲಿ ಬಂಡವಾಳ ಹರಿವು ತಡೆರಹಿತವಾಗಿರುವ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ನಿಯಂತ್ರಕ ಕಾರ್ಯವಿಧಾನವನ್ನು ಬಲಪಡಿಸುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಹಣಕಾಸು ಸಚಿವಾಲಯ ಮತ್ತು ಇತರರಿಂದ ಅಭಿಪ್ರಾಯಗಳನ್ನು ಕೋರಿತು.

ಇದು ಕೇವಲ ಮುಕ್ತ ಸಂವಾದವಾಗಿದೆ. ಅವರು ನ್ಯಾಯಾಲಯದ ಮುಂದೆ ಸಮಸ್ಯೆಯನ್ನು ತಂದಿದ್ದಾರೆ. ಭಾರತೀಯ ಹೂಡಿಕೆದಾರರ ರಕ್ಷಣೆಯನ್ನು ನಾವು ಹೇಗೆ ಖಚಿತಪಡಿಸಿಕೊಳ್ಳುತ್ತೇವೆ ಎಂಬುದು ಆತಂಕದ ಸಂಗತಿಯಾಗಿದೆ. ಇಲ್ಲಿ ನಡೆದಿರುವುದು ಶಾರ್ಟ್ ಸೆಲ್ಲಿಂಗ್ ಆಗಿದೆ. ಬಹುಶಃ ಸೆಬಿ ತನ್ನ ತನಿಖೆಯನ್ನು ಮಾಡುತ್ತಿದೆ. ನಾವಿಲ್ಲಿ ಯಾರನ್ನೋ ಬಲಿಪಶು ಮಾಡಲು ಯೋಜಿಸುತ್ತಿಲ್ಲ ಎಂಬುದನ್ನು ನಿಮ್ಮ ಅಧಿಕಾರಿಗಳಿಗೆ ತಿಳಿಸಿ ಎಂದು ಕೋರ್ಟ್ ಹೇಳಿತು.

ಭವಿಷ್ಯದಲ್ಲಿ ನಾವು ದೃಢವಾದ ವ್ಯವಸ್ಥೆ ಹೊಂದಲಿದ್ದೇವೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು? ಏಕೆಂದರೆ ಇಂದು ಬಂಡವಾಳವು ಭಾರತದ ಒಳಗೆ ಮತ್ತು ಹೊರಗೆ ಮನಬಂದಂತೆ ಚಲಿಸುತ್ತಿದೆ. ಭವಿಷ್ಯದಲ್ಲಿ ಭಾರತೀಯ ಹೂಡಿಕೆದಾರರನ್ನು ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? ಎಲ್ಲರೂ ಈಗ ಷೇರು ಮಾರುಕಟ್ಟೆಯಲ್ಲಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಮಾರುಕಟ್ಟೆಯಲ್ಲಿ 10 ಲಕ್ಷ ಕೋಟಿಗೂ ಹೆಚ್ಚು ನಷ್ಟವಾಗಿರುವುದನ್ನು ಪಿಐಎಲ್​ನಲ್ಲಿ ಹೇಳಿರುವುದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.

ಹೂಡಿಕೆದಾರರು ಸುರಕ್ಷಿತವಾಗಿದ್ದಾರೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳುವುದು? ಇಂಥದ್ದು ಭವಿಷ್ಯದಲ್ಲಿ ಮತ್ತೆ ಆಗಲ್ಲ ಎಂದು ಹೇಗೆ ಖಚಿತಪಡಿಸಿಕೊಳ್ಳುವುದು? ಇದರಲ್ಲಿ ಸೆಬಿಯ ಪಾತ್ರ ಹೇಗೆ ನಿರ್ಣಯಿಸುವುದು? ಉದಾಹರಣೆಗೆ ನೋಡುವುದಾದರೆ- ಮತ್ತೊಂದು ವಿಚಾರಕ್ಕೆ ಬಂದರೆ ಸರ್ಕಿಟ್ ಬ್ರೇಕರ್​ ಇವೆ ಎಂದು ನ್ಯಾಯಾಲಯ ಹೇಳಿತು. ಹೂಡಿಕೆದಾರರನ್ನು ರಕ್ಷಿಸಲು ದೃಢವಾದ ಕ್ರಮಗಳನ್ನು ಜಾರಿಗೆ ತರುವುದರ ಜೊತೆಗೆ ಡೊಮೇನ್ ತಜ್ಞರು ಮತ್ತು ಇತರರ ಸಮಿತಿಯನ್ನು ರಚಿಸುವಂತೆ ಪೀಠವು ಸಲಹೆ ನೀಡಿತು. ಸೆಬಿ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್, ಮಾರುಕಟ್ಟೆ ನಿಯಂತ್ರಕ ಮತ್ತು ಇತರ ಶಾಸನಬದ್ಧ ಸಂಸ್ಥೆಗಳು ಅಗತ್ಯ ಕೆಲಸವನ್ನು ಮಾಡುತ್ತಿವೆ ಎಂದು ಹೇಳಿದರು.

ಇತ್ತೀಚಿನ ಎರಡು ವಾರಗಳಲ್ಲಿ ಕಂಡುಬಂದ ಕೆಲವು ಏರಿಳಿತಗಳಿಂದ ಭಾರತೀಯ ಹೂಡಿಕೆದಾರರನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ದೇಶದೊಳಗಿನ ನಿಯಂತ್ರಕ ಕಾರ್ಯವಿಧಾನಗಳನ್ನು ಸರಿಯಾಗಿ ಬಲಪಡಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಸಾಲಿಸಿಟರ್ ಜನರಲ್ ಅವರಿಗೆ ನಮ್ಮ ಕಾಳಜಿಯನ್ನು ವ್ಯಕ್ತಪಡಿಸಿದ್ದೇವೆ ಎಂದು ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಹಿಂಡೆನ್​ಬರ್ಗ್​ ವಿರುದ್ಧ ಕಾನೂನು ಹೋರಾಟಕ್ಕೆ ಯುಎಸ್​ ಲಾ ಫರ್ಮ್ ನೇಮಿಸಿಕೊಂಡ ಅದಾನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.