ETV Bharat / bharat

ತೆಲಂಗಾಣ: ಹೆತ್ತ ಮಗಳನ್ನೇ ಹಣಕ್ಕಾಗಿ ಮಾರಿದ ತಾಯಿ

author img

By

Published : Dec 2, 2022, 2:47 PM IST

ಕಳೆದ ತಿಂಗಳು ಈಕೆಯೊಂದಿಗೆ ಇವಳನ್ನು ಖರೀದಿಸಿದ ಪತಿ - ಪತ್ನಿ ಇಬ್ಬರು ಜಗಳವಾಡಿ ಚಿನ್ನದ ಕಿವಿಯೋಲೆ, ಬೆಳ್ಳಿ ಬಳೆ, ನಗದನ್ನು ತೆಗೆದುಕೊಂಡದ್ದಲ್ಲದೇ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಹೇಗಾದರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಬಾಲಕಿ ಕೊನೆಗೂ ಖಮ್ಮಂ ಜಿಲ್ಲೆಯಿಂದ ತಪ್ಪಿಸಿಕೊಂಡು ನಗರವನ್ನು ತಲುಪಿ ತನ್ನ ಹಯತ್​ನಗರದಲ್ಲಿ ಅಕ್ಕನ ಮನೆಗೆ ಬರುತ್ತಾಳೆ.

Telangana: A mother sold her daughter for money
ತೆಲಂಗಾಣ: ಹೆತ್ತ ಮಗಳನ್ನೆ ಹಣಕ್ಕಾಗಿ ಮಾರಿದ ತಾಯಿ

ಹಯಾತ್‌ನಗರ: ಹೆತ್ತ ತನ್ನ ಮಗಳನ್ನೇ ಹಣಕ್ಕಾಗಿ ಬೇರಾಕೆಗೆ ಮಾರಿದ ಘಟನೆ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. 16 ವರ್ಷದ ಬಾಲಕಿಯನ್ನು ಕಳೆದ ವರ್ಷ ಏಪ್ರಿಲ್​ನಲ್ಲಿ ಆಕೆಯ ತಾಯಿಯೆ ಬೇರೆ ಮಹಿಳೆಗೆ ಮಾರಾಟ ಮಾಡಿದ್ದಾಳೆ.

ಬಾಲಕಿಯನ್ನು ಖರೀದಿಸಿದ ಮಹಿಳೆ ಖಮ್ಮಂ ನಗರದ ವರಂಗಲ್ ಕ್ರಾಸ್‌ರೋಡ್​ನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ನಂತರ ಪತಿಯೊಂದಿಗೆ ಸೇರಿ ಆಕೆಗೆ ವೇಶ್ಯಾವಾಟಿಕೆ ನಡೆಸುವಂತೆ ಒತ್ತಾಯಿಸಿ ಅವಳನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ವೇಶ್ಯಾವಾಟಿಕೆಗೆ ಬಲವಂತವಾಗಿ ಆಕೆಯನ್ನು ಬೇರೆ ಬೇರೆ ಊರುಗಳಿಗೆ ಕಳುಹಿಸುತ್ತಿದ್ದರು. ಇದರಿಂದ ಸತತ ಏಳು ತಿಂಗಳುಗಳ ಕಾಲ ಸಂತ್ರಸ್ತೆ ನರಕಯಾತನೆ ಅನುಭವಿಸಿದ್ದಾಳೆ.

ಕಳೆದ ತಿಂಗಳು ಈಕೆಯೊಂದಿಗೆ ಇವಳನ್ನು ಖರೀದಿಸಿದ ಪತಿ ಪತ್ನಿ ಇಬ್ಬರು ಜಗಳವಾಡಿ ಚಿನ್ನದ ಕಿವಿಯೋಲೆ, ಬೆಳ್ಳಿ ಬಳೆ, ನಗದನ್ನು ತೆಗೆದುಕೊಂಡದ್ದಲ್ಲದೆ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಹೇಗಾದರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಬಾಲಕಿ ಕೊನೆಗೂ ಖಮ್ಮಂ ಜಿಲ್ಲೆಯಿಂದ ತಪ್ಪಿಸಿಕೊಂಡು ನಗರವನ್ನು ತಲುಪಿ ತನ್ನ ಹಯಾತ್​ನಗರದಲ್ಲಿ ಅಕ್ಕನ ಮನೆಗೆ ಬರುತ್ತಾಳೆ.

ಆದರೆ, 23ಕ್ಕೆ ಇಲ್ಲಿಗೂ ಆಗಮಿಸಿದ ವೇಶ್ಯಾವಾಟಿಕೆ ತಂಡ ಬಾಲಕಿ ಇರುವ ಸ್ಥಳವನ್ನು ತಿಳಿಸುವಂತೆ ಒತ್ತಾಯಿಸಿದಾಗ ಅವಳು ಆಭರಣಗಳನ್ನು ಕದ್ದು ಪರಾರಿಯಾಗಿದ್ದಾಳೆ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೆ ಅವಳ ವಿವರವನ್ನು ಕೇಳಿದ್ದಾರೆ ಆಗ ಬಹಿರಂಗ ಪಡಿಸದೇ ಇದ್ದಾಗ ಬಾಲಕಿ ಎಲ್ಲಿ ಕಂಡರೂ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ.

ಇದರ ಜೀವ ಭಯದಿಂದ ಗುರವಾರ ಬಾಲಕಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಇರುವ ತೆಲಂಗಾಣ ಪೋಲೀಸರ ' ಶೀ' ತಂಡವನ್ನು ಸಂಪರ್ಕಿಸಿ ತಮಗಾದ ಎಲ್ಲ ಸಮಸ್ಯೆಗಳನ್ನು ವಿವರಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಪ್ರಕರಣವನ್ನು ಹಯತ್‌ನಗರ ಪೊಲೀಸರು ‘ಶೂನ್ಯ’ ಎಫ್‌ಐಆರ್‌ ದಾಖಲಿಸಿಕೊಂಡು, ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ;ಕರೆಂಟ್​ ಬಿಲ್ ಪಾವತಿಸಿಲ್ಲವೆಂದು ವೃದ್ಧೆಯಿಂದ 28 ಲಕ್ಷ ರೂ ದೋಚಿದ ಖದೀಮರು

ಹಯಾತ್‌ನಗರ: ಹೆತ್ತ ತನ್ನ ಮಗಳನ್ನೇ ಹಣಕ್ಕಾಗಿ ಬೇರಾಕೆಗೆ ಮಾರಿದ ಘಟನೆ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ. 16 ವರ್ಷದ ಬಾಲಕಿಯನ್ನು ಕಳೆದ ವರ್ಷ ಏಪ್ರಿಲ್​ನಲ್ಲಿ ಆಕೆಯ ತಾಯಿಯೆ ಬೇರೆ ಮಹಿಳೆಗೆ ಮಾರಾಟ ಮಾಡಿದ್ದಾಳೆ.

ಬಾಲಕಿಯನ್ನು ಖರೀದಿಸಿದ ಮಹಿಳೆ ಖಮ್ಮಂ ನಗರದ ವರಂಗಲ್ ಕ್ರಾಸ್‌ರೋಡ್​ನಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ನಂತರ ಪತಿಯೊಂದಿಗೆ ಸೇರಿ ಆಕೆಗೆ ವೇಶ್ಯಾವಾಟಿಕೆ ನಡೆಸುವಂತೆ ಒತ್ತಾಯಿಸಿ ಅವಳನ್ನು ಕೋಣೆಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೇ ವೇಶ್ಯಾವಾಟಿಕೆಗೆ ಬಲವಂತವಾಗಿ ಆಕೆಯನ್ನು ಬೇರೆ ಬೇರೆ ಊರುಗಳಿಗೆ ಕಳುಹಿಸುತ್ತಿದ್ದರು. ಇದರಿಂದ ಸತತ ಏಳು ತಿಂಗಳುಗಳ ಕಾಲ ಸಂತ್ರಸ್ತೆ ನರಕಯಾತನೆ ಅನುಭವಿಸಿದ್ದಾಳೆ.

ಕಳೆದ ತಿಂಗಳು ಈಕೆಯೊಂದಿಗೆ ಇವಳನ್ನು ಖರೀದಿಸಿದ ಪತಿ ಪತ್ನಿ ಇಬ್ಬರು ಜಗಳವಾಡಿ ಚಿನ್ನದ ಕಿವಿಯೋಲೆ, ಬೆಳ್ಳಿ ಬಳೆ, ನಗದನ್ನು ತೆಗೆದುಕೊಂಡದ್ದಲ್ಲದೆ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಹೇಗಾದರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಬಾಲಕಿ ಕೊನೆಗೂ ಖಮ್ಮಂ ಜಿಲ್ಲೆಯಿಂದ ತಪ್ಪಿಸಿಕೊಂಡು ನಗರವನ್ನು ತಲುಪಿ ತನ್ನ ಹಯಾತ್​ನಗರದಲ್ಲಿ ಅಕ್ಕನ ಮನೆಗೆ ಬರುತ್ತಾಳೆ.

ಆದರೆ, 23ಕ್ಕೆ ಇಲ್ಲಿಗೂ ಆಗಮಿಸಿದ ವೇಶ್ಯಾವಾಟಿಕೆ ತಂಡ ಬಾಲಕಿ ಇರುವ ಸ್ಥಳವನ್ನು ತಿಳಿಸುವಂತೆ ಒತ್ತಾಯಿಸಿದಾಗ ಅವಳು ಆಭರಣಗಳನ್ನು ಕದ್ದು ಪರಾರಿಯಾಗಿದ್ದಾಳೆ ಎಂದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೆ ಅವಳ ವಿವರವನ್ನು ಕೇಳಿದ್ದಾರೆ ಆಗ ಬಹಿರಂಗ ಪಡಿಸದೇ ಇದ್ದಾಗ ಬಾಲಕಿ ಎಲ್ಲಿ ಕಂಡರೂ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ.

ಇದರ ಜೀವ ಭಯದಿಂದ ಗುರವಾರ ಬಾಲಕಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ ಇರುವ ತೆಲಂಗಾಣ ಪೋಲೀಸರ ' ಶೀ' ತಂಡವನ್ನು ಸಂಪರ್ಕಿಸಿ ತಮಗಾದ ಎಲ್ಲ ಸಮಸ್ಯೆಗಳನ್ನು ವಿವರಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ಈ ಪ್ರಕರಣವನ್ನು ಹಯತ್‌ನಗರ ಪೊಲೀಸರು ‘ಶೂನ್ಯ’ ಎಫ್‌ಐಆರ್‌ ದಾಖಲಿಸಿಕೊಂಡು, ಸಂಬಂಧಪಟ್ಟ ಠಾಣೆಗೆ ವರ್ಗಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ;ಕರೆಂಟ್​ ಬಿಲ್ ಪಾವತಿಸಿಲ್ಲವೆಂದು ವೃದ್ಧೆಯಿಂದ 28 ಲಕ್ಷ ರೂ ದೋಚಿದ ಖದೀಮರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.