ETV Bharat / bharat

ರಾಹಿಲಾದಲ್ಲಿರುವ ಸೂರ್ಯ ದೇವಾಲಯದ ವಿಶೇಷತೆಗಳೇನು?: ಛತ್​ ಪೂಜೆಗಿರುವ ಮಹತ್ವವೇನು?

Sun Temple in Madhya Pradesh: ಮಧ್ಯಪ್ರದೇಶದ ರಾಹಿಲಾ ಜಿಲ್ಲೆಯಲ್ಲಿರುವ ಐತಿಹಾಸಿಕ ಭಕ್ತಿಧಾಮ ಸೂರ್ಯ ದೇವಾಲಯದ ವಿಶೇಷತೆಗಳನ್ನು ತಿಳಿಯಿರಿ..

author img

By ETV Bharat Karnataka Team

Published : Nov 16, 2023, 9:16 PM IST

Sun Temple in Madhya Pradesh holds great significance for devotees
ರಾಹಿಲಾದಲ್ಲಿರುವ ಸೂರ್ಯ ದೇವಾಲಯದ ವಿಶೇಷತೆಗಳೇನು? ಛತ್​ ಪೂಜೆಗಿರುವ ಮಹತ್ವವೇನು?

ರಾಹಿಲಾ (ಮಧ್ಯಪ್ರದೇಶ): ನಮ್ಮ ಭಾರತದ ಐತಿಹಾಸಿಕ ತಾಣಗಳು ಸಾಕಷ್ಟು ಶ್ರೀಮಂತವಾಗಿವೆ. ಸುಂದರವಾದ ವಾಸ್ತುಶಿಲ್ಪಗಳು ವಿದೇಶಿಗರನ್ನೂ ಆಕರ್ಷಿಸುತ್ತವೆ. ಮಧ್ಯಪ್ರದೇಶದ ರಾಹಿಲಾ ಜಿಲ್ಲೆಯಲ್ಲಿರುವ ಐತಿಹಾಸಿಕ ಭಕ್ತಿಧಾಮ ಸೂರ್ಯ ದೇವಾಲಯವು ಹೆಚ್ಚು ಅದ್ಭುತವಾಗಿದೆ. 1100 ವರ್ಷಗಳಷ್ಟು ಪುರಾತನವಾದ ಈ ದೇವಾಲಯವು ಸೂರ್ಯನಿಗೆ ಸಮರ್ಪಿತವಾಗಿದೆ. ಪೂರ್ವಾಭಿಮುಖವಾಗಿ ಇರುವ ಭಾರತದ ಏಕೈಕ ಸೂರ್ಯ ದೇವಾಲಯ ಇದಾಗಿರುವುದು ವಿಶೇಷ.

ಭಾರತದ ಕೆಲವೆಡೆ ಸೂರ್ಯನನ್ನು ವಿಶೇಷವಾಗಿ ಪೂಜಿಸುವ ಹಬ್ಬ 'ಛತ್​ ಪೂಜೆ'. ಈ ಸಮಯದಲ್ಲಿ ರಾಹಿಲಾದ ಸೂರ್ಯ ದೇವಾಲಯವು ಹೆಚ್ಚು ಮಹತ್ವ ಪಡೆದುಕೊಂಡಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಜನರು ವಿಶೇಷವಾಗಿ ಭಕ್ತಿ ಮತ್ತು ಉತ್ಸಾಹದಿಂದ ಈ ಪೂಜೆಯನ್ನು ಆಚರಿಸುತ್ತಾರೆ. ರಾಹಿಲಾ ಸೂರ್ಯ ದೇವಾಲಯವು ಸರ್ಕಾರ ಸಂರಕ್ಷಿತ ತಾಣವಾಗಿದೆ. ಮಧ್ಯಪ್ರದೇಶದ ಪುರಾತತ್ವ ಇಲಾಖೆಯ ಪ್ರಕಾರ, ಈ ದೇವಾಲಯವು 10ನೇ ಶತಮಾನಕ್ಕೆ ಸೇರಿದೆ. ಇದು ಕಾಲಾಂತರದಲ್ಲಿ ನಿರ್ನಾಮವಾಗಿ, 18ನೇ ಶತಮಾನದಲ್ಲಿ ಪುನರ್​​ ನಿರ್ಮಾಣಗೊಂಡಿತು. ಈ ದೇವಾಲಯವು ರಾಹಿಲಾದಿಂದ ಹುಟ್ಟುವ ಸುನಾರ್​ ಮತ್ತು ದೇಹಾರ್​ ನದಿಗಳ ಸಂಗಮದಲ್ಲಿದೆ.

ರಾಹಿಲಾ ಸೂರ್ಯ ದೇವಾಲಯದ ವಿಶೇಷತೆಗಳೇನು?: ಸಾಗರದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಭರತ್​ ಶುಕ್ಲಾ ಅವರು ರಾಹಿಲಾ ಸೂರ್ಯ ದೇವಾಲಯದ ಮಹತ್ವವನ್ನು ತಿಳಿಸಿದ್ದಾರೆ. ರಾಹಿಲಾದ ಸೂರ್ಯ ದೇವಾಲಯವು ಚಂದೇಲ ರಾಜರ ವಾಸ್ತುಶಿಲ್ಪದ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಈ ದೇವಾಲಯವು ಅದ್ಭುತ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ.

ದೇವಾಲಯದ ಸಂಕೀರ್ಣ ಶಿಲ್ಪಗಳು ಭಗವಾನ್​ ಸೂರ್ಯನನ್ನು ಏಳು ಕುದುರೆಗಳಿಂದ ಎಳೆಯಲ್ಪಟ್ಟ ರಥದ ಮೇಲೆ ಚಿತ್ರಿಸಲಾಗಿದೆ. ಇದು ವಿವಿಧ ಅಂಶಗಳನ್ನು ಸಂಕೇತಿಸುತ್ತದೆ. ಈ ದೇವಾಲಯದಲ್ಲಿ ವೈಷ್ಣದ ಧರ್ಮ, ನವಗ್ರಹ ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ ತ್ರಿಮೂರ್ತಿಗಳ ಜೊತೆಗೆ ಸೂರ್ಯನ ಇಬ್ಬರು ಹೆಂಡತಿಯರನ್ನು ಪೂಜಿಸಲಾಗುತ್ತದೆ. ವೈಷ್ಣವ ಪಂಥದ ಪ್ರಕಾರ ಇವರಿಗೆ ಪೂಜೆ ಸಲ್ಲುತ್ತದೆ. ಸೂರ್ಯ ದೇವಾಲಯವು ಐತಿಹಾಸಿಕ ಮಾತ್ರವಲ್ಲದೇ, ಭಕ್ತಿಯ ಧಾಮವಾಗಿ ನಿಂತಿದೆ. ಅನಾದಿ ಕಾಲದಿಂದ ಬಂದ ಛತ್​ ಪೂಜೆಯ ಸಂಪ್ರದಾಯವನ್ನು ಕಾಪಾಡಿಕೊಂಡು ಬಂದಿದೆ.

ಛತ್​ ಪೂಜೆ: ಛತ್​ ಪೂಜೆಯನ್ನು ಬಿಹಾರ, ಜಾರ್ಖಂಡ್​, ಉತ್ತರ ಪ್ರದೇಶ ಮತ್ತು ನೇಪಾಳದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಸೂರ್ಯ ದೇವನನ್ನು ಪೂಜಿಸಲಾಗುತ್ತದೆ. ಆರೋಗ್ಯಕರ ಜೀವನ, ಸಮೃದ್ಧಿ ಮತ್ತು ಯೋಗಕ್ಷೇಮವನ್ನು ದಯಪಾಲಿಸಿದ್ದಕ್ಕಾಗಿ ಕೃತಜ್ಞತೆಯನ್ನು ಅರ್ಪಿಸಲಾಗುತ್ತದೆ. ಜೊತೆಗೆ ಭಕ್ತಾಧಿಗಳು 36 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಸೂರ್ಯನಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ: ದೇವರ ನಾಡಲ್ಲಿ ಪಾಸ್​ಪೋರ್ಟ್​ ಟೆಂಪಲ್​; ವಿದೇಶಿ ಪ್ರವಾಸಿಗರಿಗೂ ಅಚ್ಚುಮೆಚ್ಚು ಈ ಸರಸ್ವತಿ ದೇವಾಲಯ

ರಾಹಿಲಾ (ಮಧ್ಯಪ್ರದೇಶ): ನಮ್ಮ ಭಾರತದ ಐತಿಹಾಸಿಕ ತಾಣಗಳು ಸಾಕಷ್ಟು ಶ್ರೀಮಂತವಾಗಿವೆ. ಸುಂದರವಾದ ವಾಸ್ತುಶಿಲ್ಪಗಳು ವಿದೇಶಿಗರನ್ನೂ ಆಕರ್ಷಿಸುತ್ತವೆ. ಮಧ್ಯಪ್ರದೇಶದ ರಾಹಿಲಾ ಜಿಲ್ಲೆಯಲ್ಲಿರುವ ಐತಿಹಾಸಿಕ ಭಕ್ತಿಧಾಮ ಸೂರ್ಯ ದೇವಾಲಯವು ಹೆಚ್ಚು ಅದ್ಭುತವಾಗಿದೆ. 1100 ವರ್ಷಗಳಷ್ಟು ಪುರಾತನವಾದ ಈ ದೇವಾಲಯವು ಸೂರ್ಯನಿಗೆ ಸಮರ್ಪಿತವಾಗಿದೆ. ಪೂರ್ವಾಭಿಮುಖವಾಗಿ ಇರುವ ಭಾರತದ ಏಕೈಕ ಸೂರ್ಯ ದೇವಾಲಯ ಇದಾಗಿರುವುದು ವಿಶೇಷ.

ಭಾರತದ ಕೆಲವೆಡೆ ಸೂರ್ಯನನ್ನು ವಿಶೇಷವಾಗಿ ಪೂಜಿಸುವ ಹಬ್ಬ 'ಛತ್​ ಪೂಜೆ'. ಈ ಸಮಯದಲ್ಲಿ ರಾಹಿಲಾದ ಸೂರ್ಯ ದೇವಾಲಯವು ಹೆಚ್ಚು ಮಹತ್ವ ಪಡೆದುಕೊಂಡಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಜನರು ವಿಶೇಷವಾಗಿ ಭಕ್ತಿ ಮತ್ತು ಉತ್ಸಾಹದಿಂದ ಈ ಪೂಜೆಯನ್ನು ಆಚರಿಸುತ್ತಾರೆ. ರಾಹಿಲಾ ಸೂರ್ಯ ದೇವಾಲಯವು ಸರ್ಕಾರ ಸಂರಕ್ಷಿತ ತಾಣವಾಗಿದೆ. ಮಧ್ಯಪ್ರದೇಶದ ಪುರಾತತ್ವ ಇಲಾಖೆಯ ಪ್ರಕಾರ, ಈ ದೇವಾಲಯವು 10ನೇ ಶತಮಾನಕ್ಕೆ ಸೇರಿದೆ. ಇದು ಕಾಲಾಂತರದಲ್ಲಿ ನಿರ್ನಾಮವಾಗಿ, 18ನೇ ಶತಮಾನದಲ್ಲಿ ಪುನರ್​​ ನಿರ್ಮಾಣಗೊಂಡಿತು. ಈ ದೇವಾಲಯವು ರಾಹಿಲಾದಿಂದ ಹುಟ್ಟುವ ಸುನಾರ್​ ಮತ್ತು ದೇಹಾರ್​ ನದಿಗಳ ಸಂಗಮದಲ್ಲಿದೆ.

ರಾಹಿಲಾ ಸೂರ್ಯ ದೇವಾಲಯದ ವಿಶೇಷತೆಗಳೇನು?: ಸಾಗರದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಭರತ್​ ಶುಕ್ಲಾ ಅವರು ರಾಹಿಲಾ ಸೂರ್ಯ ದೇವಾಲಯದ ಮಹತ್ವವನ್ನು ತಿಳಿಸಿದ್ದಾರೆ. ರಾಹಿಲಾದ ಸೂರ್ಯ ದೇವಾಲಯವು ಚಂದೇಲ ರಾಜರ ವಾಸ್ತುಶಿಲ್ಪದ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಈ ದೇವಾಲಯವು ಅದ್ಭುತ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ.

ದೇವಾಲಯದ ಸಂಕೀರ್ಣ ಶಿಲ್ಪಗಳು ಭಗವಾನ್​ ಸೂರ್ಯನನ್ನು ಏಳು ಕುದುರೆಗಳಿಂದ ಎಳೆಯಲ್ಪಟ್ಟ ರಥದ ಮೇಲೆ ಚಿತ್ರಿಸಲಾಗಿದೆ. ಇದು ವಿವಿಧ ಅಂಶಗಳನ್ನು ಸಂಕೇತಿಸುತ್ತದೆ. ಈ ದೇವಾಲಯದಲ್ಲಿ ವೈಷ್ಣದ ಧರ್ಮ, ನವಗ್ರಹ ಹಾಗೂ ಬ್ರಹ್ಮ, ವಿಷ್ಣು ಮತ್ತು ಮಹೇಶ ತ್ರಿಮೂರ್ತಿಗಳ ಜೊತೆಗೆ ಸೂರ್ಯನ ಇಬ್ಬರು ಹೆಂಡತಿಯರನ್ನು ಪೂಜಿಸಲಾಗುತ್ತದೆ. ವೈಷ್ಣವ ಪಂಥದ ಪ್ರಕಾರ ಇವರಿಗೆ ಪೂಜೆ ಸಲ್ಲುತ್ತದೆ. ಸೂರ್ಯ ದೇವಾಲಯವು ಐತಿಹಾಸಿಕ ಮಾತ್ರವಲ್ಲದೇ, ಭಕ್ತಿಯ ಧಾಮವಾಗಿ ನಿಂತಿದೆ. ಅನಾದಿ ಕಾಲದಿಂದ ಬಂದ ಛತ್​ ಪೂಜೆಯ ಸಂಪ್ರದಾಯವನ್ನು ಕಾಪಾಡಿಕೊಂಡು ಬಂದಿದೆ.

ಛತ್​ ಪೂಜೆ: ಛತ್​ ಪೂಜೆಯನ್ನು ಬಿಹಾರ, ಜಾರ್ಖಂಡ್​, ಉತ್ತರ ಪ್ರದೇಶ ಮತ್ತು ನೇಪಾಳದ ಕೆಲವು ಪ್ರದೇಶಗಳಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಸೂರ್ಯ ದೇವನನ್ನು ಪೂಜಿಸಲಾಗುತ್ತದೆ. ಆರೋಗ್ಯಕರ ಜೀವನ, ಸಮೃದ್ಧಿ ಮತ್ತು ಯೋಗಕ್ಷೇಮವನ್ನು ದಯಪಾಲಿಸಿದ್ದಕ್ಕಾಗಿ ಕೃತಜ್ಞತೆಯನ್ನು ಅರ್ಪಿಸಲಾಗುತ್ತದೆ. ಜೊತೆಗೆ ಭಕ್ತಾಧಿಗಳು 36 ಗಂಟೆಗಳ ಕಾಲ ಉಪವಾಸ ಮಾಡುತ್ತಾರೆ. ಸೂರ್ಯನಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ: ದೇವರ ನಾಡಲ್ಲಿ ಪಾಸ್​ಪೋರ್ಟ್​ ಟೆಂಪಲ್​; ವಿದೇಶಿ ಪ್ರವಾಸಿಗರಿಗೂ ಅಚ್ಚುಮೆಚ್ಚು ಈ ಸರಸ್ವತಿ ದೇವಾಲಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.