ETV Bharat / bharat

ಪಿಕ್ನಿಕ್​ಗೆ ಬಂದಿದ್ದ ಆರು ಜನರು ಜಲಪಾತದಲ್ಲಿ ಮುಳುಗಿ ಸಾವು

author img

By

Published : Aug 28, 2022, 8:04 PM IST

ಛತ್ತೀಸ್​ಗಢದ ಕೊರಿಯಾ ಜಿಲ್ಲೆಯ ರಾಮ್‌ದಾಹಾ ಜಲಪಾತದಲ್ಲಿ ಮಧ್ಯಪ್ರದೇಶದ ಆರು ಜನರು ಮೃತಪಟ್ಟಿದ್ದಾರೆ.

six-people-drowned-in-ramdaha-falls-of-korea-chhattisgarh
ಪಿಕ್ನಿಕ್​ಗೆ ಬಂದಿದ್ದ ಆರು ಜನರು ಜಲಪಾತದಲ್ಲಿ ಮುಳುಗಿ ಸಾವು

ರಾಯಪುರ (ಛತ್ತೀಸ್​ಗಢ): ಪಿಕ್ನಿಕ್​ಗೆ ಎಂದು ಬಂದ ಆರು ಜನರು ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಛತ್ತೀಸ್​ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಿಂದ 14 ಮಂದಿ ಇಲ್ಲಿನ ರಾಮ್‌ದಾಹಾ ಜಲಪಾತಕ್ಕೆ ಬಂದಿದ್ದರು.

ಇಂದು ಎರಡು ವಾಹನಗಳಲ್ಲಿ 14 ಜನರು ರಾಮ್​ದಾಹ ಜಲಪಾತಕ್ಕೆ ಬಂದಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಮ್​ದಾಹ ಜಲಪಾತದಲ್ಲಿ ಎಲ್ಲರೂ ಸ್ನಾನ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಷಯ ತಿಳಿದು ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಓಡಿ ಬಂದಿದ್ದಾರೆ. ಇತ್ತ, ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ 2 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ.

ನಾವು ದೇವಸ್ಥಾನ ನಿರ್ಮಾಣದ ಕೆಲಸಕ್ಕೆಂದು ಬಂದಿದ್ದೆವು. ಈ ವೇಳೆ ಇಲ್ಲಿ ಕೆಲವರು ಜಲಪಾತದ ಕೆಳಗೆ ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಓಡಿ ಬಂದೆವು ಎಂದು ಗ್ರಾಮಸ್ಥರಾದ ಶಿವಕುಮಾರ್ ಮತ್ತು ಗುಲ್ಶನ್ ಕುಮಾರ್ ಎಂಬುವರು ತಿಳಿಸಿದ್ದಾರೆ.

ಇನ್ನು, ಇದೇ ರಾಮದಾಹ ಜಲಪಾತದಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ಸಂಭವಿಸಿದೆ. ಸುಮಾರು ಐದು ತಿಂಗಳ ಹಿಂದೆ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ದೇವರ ದರ್ಶನಕ್ಕೆ ಟ್ರಾಕ್ಟರ್​ನಲ್ಲಿ ಹೋಗುತ್ತಿದ್ದಾಗ ಅಪಘಾತ: ಆರು ಜನರ ಸಾವು

ರಾಯಪುರ (ಛತ್ತೀಸ್​ಗಢ): ಪಿಕ್ನಿಕ್​ಗೆ ಎಂದು ಬಂದ ಆರು ಜನರು ಜಲಪಾತದಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಛತ್ತೀಸ್​ಗಢದ ಕೊರಿಯಾ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಿಂದ 14 ಮಂದಿ ಇಲ್ಲಿನ ರಾಮ್‌ದಾಹಾ ಜಲಪಾತಕ್ಕೆ ಬಂದಿದ್ದರು.

ಇಂದು ಎರಡು ವಾಹನಗಳಲ್ಲಿ 14 ಜನರು ರಾಮ್​ದಾಹ ಜಲಪಾತಕ್ಕೆ ಬಂದಿದ್ದರು. ಮಧ್ಯಾಹ್ನ 12 ಗಂಟೆ ಸುಮಾರಿಗೆ ರಾಮ್​ದಾಹ ಜಲಪಾತದಲ್ಲಿ ಎಲ್ಲರೂ ಸ್ನಾನ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಆರು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಷಯ ತಿಳಿದು ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಓಡಿ ಬಂದಿದ್ದಾರೆ. ಇತ್ತ, ಸ್ಥಳೀಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ಕೂಡ ಸ್ಥಳಕ್ಕೆ ಧಾವಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ 2 ಜನರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಇನ್ನೂ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ.

ನಾವು ದೇವಸ್ಥಾನ ನಿರ್ಮಾಣದ ಕೆಲಸಕ್ಕೆಂದು ಬಂದಿದ್ದೆವು. ಈ ವೇಳೆ ಇಲ್ಲಿ ಕೆಲವರು ಜಲಪಾತದ ಕೆಳಗೆ ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಓಡಿ ಬಂದೆವು ಎಂದು ಗ್ರಾಮಸ್ಥರಾದ ಶಿವಕುಮಾರ್ ಮತ್ತು ಗುಲ್ಶನ್ ಕುಮಾರ್ ಎಂಬುವರು ತಿಳಿಸಿದ್ದಾರೆ.

ಇನ್ನು, ಇದೇ ರಾಮದಾಹ ಜಲಪಾತದಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ಸಂಭವಿಸಿದೆ. ಸುಮಾರು ಐದು ತಿಂಗಳ ಹಿಂದೆ ಮೂವರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ದೇವರ ದರ್ಶನಕ್ಕೆ ಟ್ರಾಕ್ಟರ್​ನಲ್ಲಿ ಹೋಗುತ್ತಿದ್ದಾಗ ಅಪಘಾತ: ಆರು ಜನರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.