ETV Bharat / bharat

'ಸರ್ಕಾರದಿಂದ ಹೊರಬರಲು ಶಿವಸೇನೆ ಸಿದ್ಧ'- ರಾವುತ್​: ದಿಢೀರ್​ ಸಭೆ ಕರೆದ ಕಾಂಗ್ರೆಸ್-ಎನ್​ಸಿಪಿ

author img

By

Published : Jun 23, 2022, 5:03 PM IST

ಮಹಾರಾಷ್ಟ್ರ ರಾಜಕಾರಣ ಕ್ಷಣ ಕ್ಷಣಕ್ಕೂ ರೋಚಕ ತಿರುವು ಪಡೆಯುತ್ತಿದೆ. ಮೈತ್ರಿ ಸರ್ಕಾರದಿಂದ ಹೊರಬರುವ ಬಗ್ಗೆ ಸಂಜಯ್ ರಾವುತ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ಪಾಲುದಾರ ಪಕ್ಷಗಳಾದ ಕಾಂಗ್ರೆಸ್​ ಮತ್ತು ಎನ್​ಸಿಪಿ ಪ್ರತ್ಯೇಕ ಸಭೆ ಕರೆದಿವೆ.

Shiv Sena ready to walk out of MVA govt, but rebels should return to Mumbai in 24 hours: Sanjay Raut
ಸರ್ಕಾರದಿಂದ ಹೊರ ಬರಲು ಶಿವಸೇನೆ ಸಿದ್ಧ ಎಂದ ಸಂಜಯ್​ ರಾವುತ್​: ದಿಢೀರ್​ ಸಭೆ ಕರೆದ ಕಾಂಗ್ರೆಸ್-ಎನ್​ಸಿಪಿ

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​​ ಮೈತ್ರಿಕೂಟದ ಸರ್ಕಾರ ಪತನದಂಚಿಗೆ ತಲುಪಿದೆ. ಈ ನಡುವೆ ಶಿವಸೇನೆ ನಾಯಕ, ಸಂಸದ ಸಂಜಯ್ ರಾವುತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಹಾ ವಿಕಾಸ್ ಆಘಾಡಿ ಮೈತ್ರಿಯಿಂದ ಹೊರಬರಲು ಉದ್ಧವ್ ಠಾಕ್ರೆ ಬಣ ಸಿದ್ಧವಾಗಿದೆ. ಆದರೆ, ಪಕ್ಷದ ಬಂಡಾಯ ಶಾಸಕರು 24 ಗಂಟೆಗಳಲ್ಲಿ ಮುಂಬೈಗೆ ಬರಬೇಕೆಂದು ಷರತ್ತು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಶಾಸಕರು ಗುವಾಹಟಿಯಿಂದ ಮಾತುಕತೆ ನಡೆಸಬಾರದು. ಅವರು ಮುಂಬೈಗೆ ಬಂದು ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕು. ಇದು ಎಲ್ಲ ಶಾಸಕರ ಇಚ್ಛೆಯಾಗಿದ್ದರೆ, ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಹೊರಬರುವುದನ್ನು ಪರಿಗಣಿಸಲು ನಾವು ಸಿದ್ಧ. ಆದರೆ ಅದಕ್ಕಾಗಿ ಶಾಸಕರು ಮುಂಬೈಗೆ ಬಂದು ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಬೇಕೆಂದು ಹೇಳಿದ್ದಾರೆ.

ಇದೇ ವೇಳೆ, ಗುವಾಹಟಿಯ 21 ಶಾಸಕರು ಉದ್ಧವ್ ಠಾಕ್ರೆ ಬಣವನ್ನು ಸಂಪರ್ಕಿಸಿದ್ದಾರೆ. ಮುಂಬೈಗೆ ಮರಳಿದ ನಂತರ ಆ ಶಾಸಕರು ನಮ್ಮೊಂದಿಗೆ ಇರಲಿದ್ದಾರೆ ಎಂದು ರಾವುತ್ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ ಬಂಗಲೆ' ಅತಿ ಶೀಘ್ರದಲ್ಲಿ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ.

ಇತ್ತ, ಶಿವಸೇನೆಯ ಮತ್ತೊಬ್ಬ ಸಂಸದ ವಿನಾಯಕ್ ರಾವುತ್ ಸಹ ಗುವಾಹಟಿಯಲ್ಲಿರುವ ಕನಿಷ್ಠ 18 ಶಾಸಕರು ಮುಂಬೈನಲ್ಲಿರುವ ನಮ್ಮ ನಾಯಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೇ, ಅವರಲ್ಲಿ ಹಲವರು ಶೀಘ್ರದಲ್ಲೇ ಮುಂಬೈಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್-ಎನ್​ಸಿಪಿ ದಿಢೀರ್‌ ಸಭೆ: ಮೈತ್ರಿಯಿಂದ ಹೊರಬರಲು ಶಿವಸೇನೆ ಸಿದ್ಧ ಎಂಬ ಸಂಜಯ್​ ರಾವುತ್ ಹೇಳಿಕೆಯ ಬೆನ್ನಲ್ಲೇ ಪಾಲುದಾರ ಪಕ್ಷಗಳಾದ ಕಾಂಗ್ರೆಸ್​ ಮತ್ತು ಎನ್​ಸಿಪಿ ಪ್ರತ್ಯೇಕ ಸಭೆ ಕರೆದಿವೆ. ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆಯುವ ಈ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಮಹಾರಾಷ್ಟ್ರ ಉಸ್ತುವಾರಿ ಎಚ್‌.ಕೆ.ಪಾಟೀಲ್, ಬಾಳಾಸಾಹೇಬ್ ಥೋರಟ್, ನಾನಾ ಪಟೋಳೆ, ಅಶೋಕ್ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ಎನ್​ಸಿಪಿ ಕೂಡ ತನ್ನ ನಾಯಕ ಸಭೆ ಕರೆದಿದೆ. ವೈ.ಬಿ.ಚವ್ಹಾಣ್ ಸೆಂಟರ್​ನಲ್ಲಿ ಶಾಸಕರು ಸಭೆ ಸೇರಲಿದ್ದು, ಪಕ್ಷದ ವರಿಷ್ಠ ಶರದ್​ ಪವಾರ್​ ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್​ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಏಕನಾಥ್ ಶಿಂದೆ ಮುಂದಿರುವ ಆಯ್ಕೆಗಳೇನು? ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಾ ಹೊಸ ಸರ್ಕಾರ?

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​​ ಮೈತ್ರಿಕೂಟದ ಸರ್ಕಾರ ಪತನದಂಚಿಗೆ ತಲುಪಿದೆ. ಈ ನಡುವೆ ಶಿವಸೇನೆ ನಾಯಕ, ಸಂಸದ ಸಂಜಯ್ ರಾವುತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಹಾ ವಿಕಾಸ್ ಆಘಾಡಿ ಮೈತ್ರಿಯಿಂದ ಹೊರಬರಲು ಉದ್ಧವ್ ಠಾಕ್ರೆ ಬಣ ಸಿದ್ಧವಾಗಿದೆ. ಆದರೆ, ಪಕ್ಷದ ಬಂಡಾಯ ಶಾಸಕರು 24 ಗಂಟೆಗಳಲ್ಲಿ ಮುಂಬೈಗೆ ಬರಬೇಕೆಂದು ಷರತ್ತು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವುತ್, ಶಾಸಕರು ಗುವಾಹಟಿಯಿಂದ ಮಾತುಕತೆ ನಡೆಸಬಾರದು. ಅವರು ಮುಂಬೈಗೆ ಬಂದು ಮುಖ್ಯಮಂತ್ರಿಯೊಂದಿಗೆ ಚರ್ಚಿಸಬೇಕು. ಇದು ಎಲ್ಲ ಶಾಸಕರ ಇಚ್ಛೆಯಾಗಿದ್ದರೆ, ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದ ಹೊರಬರುವುದನ್ನು ಪರಿಗಣಿಸಲು ನಾವು ಸಿದ್ಧ. ಆದರೆ ಅದಕ್ಕಾಗಿ ಶಾಸಕರು ಮುಂಬೈಗೆ ಬಂದು ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಬೇಕೆಂದು ಹೇಳಿದ್ದಾರೆ.

ಇದೇ ವೇಳೆ, ಗುವಾಹಟಿಯ 21 ಶಾಸಕರು ಉದ್ಧವ್ ಠಾಕ್ರೆ ಬಣವನ್ನು ಸಂಪರ್ಕಿಸಿದ್ದಾರೆ. ಮುಂಬೈಗೆ ಮರಳಿದ ನಂತರ ಆ ಶಾಸಕರು ನಮ್ಮೊಂದಿಗೆ ಇರಲಿದ್ದಾರೆ ಎಂದು ರಾವುತ್ ಹೇಳಿಕೆ ಕೊಟ್ಟಿದ್ದಾರೆ. ಜೊತೆಗೆ ಉದ್ಧವ್ ಠಾಕ್ರೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ 'ವರ್ಷಾ ಬಂಗಲೆ' ಅತಿ ಶೀಘ್ರದಲ್ಲಿ ಮರಳಲಿದ್ದಾರೆ ಎಂದೂ ತಿಳಿಸಿದ್ದಾರೆ.

ಇತ್ತ, ಶಿವಸೇನೆಯ ಮತ್ತೊಬ್ಬ ಸಂಸದ ವಿನಾಯಕ್ ರಾವುತ್ ಸಹ ಗುವಾಹಟಿಯಲ್ಲಿರುವ ಕನಿಷ್ಠ 18 ಶಾಸಕರು ಮುಂಬೈನಲ್ಲಿರುವ ನಮ್ಮ ನಾಯಕರನ್ನು ಸಂಪರ್ಕಿಸಿದ್ದಾರೆ. ಅಲ್ಲದೇ, ಅವರಲ್ಲಿ ಹಲವರು ಶೀಘ್ರದಲ್ಲೇ ಮುಂಬೈಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್-ಎನ್​ಸಿಪಿ ದಿಢೀರ್‌ ಸಭೆ: ಮೈತ್ರಿಯಿಂದ ಹೊರಬರಲು ಶಿವಸೇನೆ ಸಿದ್ಧ ಎಂಬ ಸಂಜಯ್​ ರಾವುತ್ ಹೇಳಿಕೆಯ ಬೆನ್ನಲ್ಲೇ ಪಾಲುದಾರ ಪಕ್ಷಗಳಾದ ಕಾಂಗ್ರೆಸ್​ ಮತ್ತು ಎನ್​ಸಿಪಿ ಪ್ರತ್ಯೇಕ ಸಭೆ ಕರೆದಿವೆ. ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆಯುವ ಈ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರಾದ ಮಹಾರಾಷ್ಟ್ರ ಉಸ್ತುವಾರಿ ಎಚ್‌.ಕೆ.ಪಾಟೀಲ್, ಬಾಳಾಸಾಹೇಬ್ ಥೋರಟ್, ನಾನಾ ಪಟೋಳೆ, ಅಶೋಕ್ ಚವ್ಹಾಣ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.

ಎನ್​ಸಿಪಿ ಕೂಡ ತನ್ನ ನಾಯಕ ಸಭೆ ಕರೆದಿದೆ. ವೈ.ಬಿ.ಚವ್ಹಾಣ್ ಸೆಂಟರ್​ನಲ್ಲಿ ಶಾಸಕರು ಸಭೆ ಸೇರಲಿದ್ದು, ಪಕ್ಷದ ವರಿಷ್ಠ ಶರದ್​ ಪವಾರ್​ ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್​ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಏಕನಾಥ್ ಶಿಂದೆ ಮುಂದಿರುವ ಆಯ್ಕೆಗಳೇನು? ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಾ ಹೊಸ ಸರ್ಕಾರ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.