ETV Bharat / bharat

ರಣೋತ್ಸಾಹದಿಂದ ಮುನ್ನುಗ್ತಿದೆ ರಷ್ಯಾ ಸೇನೆ: ಕೀವ್​​ನಿಂದ ತಕ್ಷಣ ಹೊರಡುವಂತೆ ತನ್ನ ಪ್ರಜೆಗಳಿಗೆ ಭಾರತದ ತುರ್ತು ಸೂಚನೆ

author img

By

Published : Mar 1, 2022, 2:54 PM IST

ಉಕ್ರೇನ್​ ವಿರುದ್ಧ ರಷ್ಯಾ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು ಭಾರತೀಯ ರಾಯಭಾರಿ ಕಚೇರಿ ಕೀವ್​ನಲ್ಲಿರುವ ತನ್ನ ಪ್ರಜೆಗಳಿಗೆ ಮಹತ್ವದ ಸೂಚನೆ ನೀಡಿದೆ.

Russia-Ukraine war
Russia-Ukraine war

ನವದೆಹಲಿ: ರಷ್ಯಾ ಸೇನಾಪಡೆಗಳು ಉಕ್ರೇನ್​ ರಾಜಧಾನಿ ಕೀವ್​​ನಿಂದ ಸ್ವಲ್ಪವೇ ದೂರದಲ್ಲಿದ್ದು, ನಗರದ ಮೇಲೆ ಭಾರಿ ಪ್ರಮಾಣದ ದಾಳಿ ಮಾಡುವ ಸಾಧ್ಯತೆ ಇದೆ. 40 ಕಿಲೋಮೀಟರ್​ ದೂರದುದ್ದಕ್ಕೂ ರಷ್ಯಾ ಸಮರ ವಾಹನಗಳು ಯುದ್ಧ ಸನ್ನದ್ಧವಾಗಿ ನಿಂತಿರುವ ಸ್ಯಾಟಲೈಟ್​ ಫೋಟೊಗಳು ಬಿಡುಗಡೆಗೊಂಡಿದ್ದು, ದಾಳಿಯ ಭೀತಿ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಕೀವ್​​ ನಗರ ಅಪಾಯಕ್ಕೆ ಸಿಲುಕಿದೆ.

ಈ ಹಿನ್ನೆಲೆಯಲ್ಲಿ ಕೀವ್​ ನಗರದಲ್ಲಿ ಇರಬೇಡಿ. ತಕ್ಷಣವೇ ನಿರ್ಗಮಿಸುವಂತೆ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ತಿಳಿಸಿದೆ.

  • Advisory to Indians in Kyiv

    All Indian nationals including students are advised to leave Kyiv urgently today. Preferably by available trains or through any other means available.

    — India in Ukraine (@IndiainUkraine) March 1, 2022 " class="align-text-top noRightClick twitterSection" data=" ">

ರೈಲು​ ಅಥವಾ ಬೇರೆ ವಾಹನಗಳಲ್ಲಾದರೂ ಸರಿ ಭಾರತೀಯ ನಾಗರಿಕರು ತಕ್ಷಣವೇ ನಿರ್ಗಮಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಕೀವ್ ವಶಕ್ಕೆ ಅಂತಿಮ ಸಿದ್ಧತೆ: ರಷ್ಯಾದ ನೂರಾರು ಯುದ್ಧ ಟ್ಯಾಂಕ್​​ಗಳು, ಶಸ್ತ್ರಾಸ್ತ್ರ ತುಂಬಿದ ವಾಹನಗಳು ಕೀವ್​​ನ ವಾಯುವ್ಯ ದಿಕ್ಕಿನಲ್ಲಿ ಜಮಾವಣೆಗೊಂಡಿವೆ. ಉಕ್ರೇನ್​ ರಾಜಧಾನಿಯನ್ನು ವಶಪಡಿಸಲು ರಷ್ಯಾ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ಇದರ ಉಪಗ್ರಹ ಚಿತ್ರಗಳನ್ನು ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆಯೊಂದು ಬಿಡುಗಡೆ ಮಾಡಿದೆ.

ಉಕ್ರೇನ್​​ನಲ್ಲಿ ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಗುರುವಾರ ದಾಳಿ ಆರಂಭವಾದ ನಂತರ ಅನೇಕ ವಿದ್ಯಾರ್ಥಿಗಳು ಬಂಕರ್​​ಗಳಲ್ಲಿ ದಿನ ಕಳೆಯುವಂತಾಗಿದೆ. ಅಲ್ಲಿಂದಲೇ ಫೋಟೊ, ವಿಡಿಯೋ ಶೇರ್​ ಮಾಡಿರುವ ವಿದ್ಯಾರ್ಥಿಗಳು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಈಗಾಗಲೇ 8,000 ಭಾರತೀಯರು ಉಕ್ರೇನ್​ ತೊರೆದಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ.. ಪುಟಿನ್​ಗೆ ನೀಡಿದ 'ಗೌರವ ಬ್ಲ್ಯಾಕ್​ ಬೆಲ್ಟ್'​ ವಾಪಸ್​ಗೆ ವಿಶ್ವ ಟೇಕ್ವಾಂಡೋ ನಿರ್ಧಾರ

ರಕ್ಷಣೆ ಕಾರ್ಯಕ್ಕೆ ವಾಯುಪಡೆ: ಭಾರತೀಯರನ್ನು ತಾಯ್ನಾಡಿಗೆ ಕರೆಯಿಸಿಕೊಳ್ಳಲು ನಡೆಸಲಾಗುತ್ತಿರುವ 'ಆಪರೇಷನ್​ ಗಂಗಾ' ಕಾರ್ಯಾಚರಣೆಯಲ್ಲಿ ಕೈಜೋಡಿಸುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಉಕ್ರೇನ್ ನೆರೆದೇಶಗಳಾಗಿರುವ ಪೊಲೆಂಡ್​, ರೊಮೇನಿಯಾ, ಹಂಗೇರಿ ಸೇರಿದಂತೆ ವಿವಿಧ ದೇಶಗಳಿಂದ ಭಾರತೀಯರನ್ನು ತೆರವು ಮಾಡಲಾಗುತ್ತಿದೆ.

ನವದೆಹಲಿ: ರಷ್ಯಾ ಸೇನಾಪಡೆಗಳು ಉಕ್ರೇನ್​ ರಾಜಧಾನಿ ಕೀವ್​​ನಿಂದ ಸ್ವಲ್ಪವೇ ದೂರದಲ್ಲಿದ್ದು, ನಗರದ ಮೇಲೆ ಭಾರಿ ಪ್ರಮಾಣದ ದಾಳಿ ಮಾಡುವ ಸಾಧ್ಯತೆ ಇದೆ. 40 ಕಿಲೋಮೀಟರ್​ ದೂರದುದ್ದಕ್ಕೂ ರಷ್ಯಾ ಸಮರ ವಾಹನಗಳು ಯುದ್ಧ ಸನ್ನದ್ಧವಾಗಿ ನಿಂತಿರುವ ಸ್ಯಾಟಲೈಟ್​ ಫೋಟೊಗಳು ಬಿಡುಗಡೆಗೊಂಡಿದ್ದು, ದಾಳಿಯ ಭೀತಿ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಕೀವ್​​ ನಗರ ಅಪಾಯಕ್ಕೆ ಸಿಲುಕಿದೆ.

ಈ ಹಿನ್ನೆಲೆಯಲ್ಲಿ ಕೀವ್​ ನಗರದಲ್ಲಿ ಇರಬೇಡಿ. ತಕ್ಷಣವೇ ನಿರ್ಗಮಿಸುವಂತೆ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ತಿಳಿಸಿದೆ.

  • Advisory to Indians in Kyiv

    All Indian nationals including students are advised to leave Kyiv urgently today. Preferably by available trains or through any other means available.

    — India in Ukraine (@IndiainUkraine) March 1, 2022 " class="align-text-top noRightClick twitterSection" data=" ">

ರೈಲು​ ಅಥವಾ ಬೇರೆ ವಾಹನಗಳಲ್ಲಾದರೂ ಸರಿ ಭಾರತೀಯ ನಾಗರಿಕರು ತಕ್ಷಣವೇ ನಿರ್ಗಮಿಸಬೇಕು ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

ಕೀವ್ ವಶಕ್ಕೆ ಅಂತಿಮ ಸಿದ್ಧತೆ: ರಷ್ಯಾದ ನೂರಾರು ಯುದ್ಧ ಟ್ಯಾಂಕ್​​ಗಳು, ಶಸ್ತ್ರಾಸ್ತ್ರ ತುಂಬಿದ ವಾಹನಗಳು ಕೀವ್​​ನ ವಾಯುವ್ಯ ದಿಕ್ಕಿನಲ್ಲಿ ಜಮಾವಣೆಗೊಂಡಿವೆ. ಉಕ್ರೇನ್​ ರಾಜಧಾನಿಯನ್ನು ವಶಪಡಿಸಲು ರಷ್ಯಾ ಅಂತಿಮ ಸಿದ್ಧತೆ ಮಾಡಿಕೊಂಡಿದ್ದು, ಇದರ ಉಪಗ್ರಹ ಚಿತ್ರಗಳನ್ನು ಅಮೆರಿಕ ಮೂಲದ ಬಾಹ್ಯಾಕಾಶ ಸಂಸ್ಥೆಯೊಂದು ಬಿಡುಗಡೆ ಮಾಡಿದೆ.

ಉಕ್ರೇನ್​​ನಲ್ಲಿ ಇನ್ನೂ ಸುಮಾರು 16,000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಗುರುವಾರ ದಾಳಿ ಆರಂಭವಾದ ನಂತರ ಅನೇಕ ವಿದ್ಯಾರ್ಥಿಗಳು ಬಂಕರ್​​ಗಳಲ್ಲಿ ದಿನ ಕಳೆಯುವಂತಾಗಿದೆ. ಅಲ್ಲಿಂದಲೇ ಫೋಟೊ, ವಿಡಿಯೋ ಶೇರ್​ ಮಾಡಿರುವ ವಿದ್ಯಾರ್ಥಿಗಳು ತಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಈಗಾಗಲೇ 8,000 ಭಾರತೀಯರು ಉಕ್ರೇನ್​ ತೊರೆದಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ರಷ್ಯಾ ವಿರುದ್ಧ ಹೆಚ್ಚಿದ ಆಕ್ರೋಶ.. ಪುಟಿನ್​ಗೆ ನೀಡಿದ 'ಗೌರವ ಬ್ಲ್ಯಾಕ್​ ಬೆಲ್ಟ್'​ ವಾಪಸ್​ಗೆ ವಿಶ್ವ ಟೇಕ್ವಾಂಡೋ ನಿರ್ಧಾರ

ರಕ್ಷಣೆ ಕಾರ್ಯಕ್ಕೆ ವಾಯುಪಡೆ: ಭಾರತೀಯರನ್ನು ತಾಯ್ನಾಡಿಗೆ ಕರೆಯಿಸಿಕೊಳ್ಳಲು ನಡೆಸಲಾಗುತ್ತಿರುವ 'ಆಪರೇಷನ್​ ಗಂಗಾ' ಕಾರ್ಯಾಚರಣೆಯಲ್ಲಿ ಕೈಜೋಡಿಸುವಂತೆ ಭಾರತೀಯ ವಾಯುಪಡೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಉಕ್ರೇನ್ ನೆರೆದೇಶಗಳಾಗಿರುವ ಪೊಲೆಂಡ್​, ರೊಮೇನಿಯಾ, ಹಂಗೇರಿ ಸೇರಿದಂತೆ ವಿವಿಧ ದೇಶಗಳಿಂದ ಭಾರತೀಯರನ್ನು ತೆರವು ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.