ETV Bharat / bharat

ಹವಾಮಾನ ವೈಪರೀತ್ಯ: ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್​ ದ್ರಾಸ್‌ ಭೇಟಿ ರದ್ದು

author img

By

Published : Jul 26, 2021, 10:33 AM IST

'ಕಾರ್ಗಿಲ್ ವಿಜಯ್​​ ದಿವಸ್'​ ಹಿನ್ನೆಲೆ ಇಂದು ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರು, ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ಆದ್ರೀಗ ಹವಾಮಾನ ವೈಪರೀತ್ಯದಿಂದಾಗಿ ಅವರ ಭೇಟಿ ರದ್ದಾಗಿದೆ.

Ram Nath Kovind
ರಾಷ್ಟ್ರಪತಿ ​ ದ್ರಾಸ್‌ ಭೇಟಿ ರದ್ದು

ಶ್ರೀನಗರ: ಹವಾಮಾನ ವೈಪರೀತ್ಯ ಕಾರಣದಿಂದಾಗಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರ ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್​ ಯುದ್ಧ ಸ್ಮಾರಕ ಭೇಟಿ ರದ್ದಾಗಿದೆ.

ಕೆಟ್ಟ ಹವಾಮಾನದ ಪರಿಣಾಮ ರಾಮ್​ನಾಥ್ ಕೋವಿಂದ್ ಅವರ ವಿಮಾನ ಶ್ರೀನಗರದಿಂದ ಹೊರಹೋಗಲು ಸಾಧ್ಯವಿಲ್ಲ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಆದ್ದರಿಂದ ರಾಷ್ಟ್ರಪತಿ ಅವರ ಲಡಾಖ್​ ಭೇಟಿ ರದ್ದಾಗಿದೆ. ಹೀಗಾಗಿ, ಕೋವಿಂದ್ ಅವರು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಕಾಶ್ಮೀರದ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಶಾಲೆಯಲ್ಲಿ 1999ರ ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಹಿರಿಯ ಅಧಿಕಾರಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಭಾರತ 1999ರ ಜುಲೈ 26ರಂದು ಪಾಕ್ ವಿರುದ್ಧ​ ಕಾರ್ಗಿಲ್​ ಯುದ್ಧವನ್ನು ಗೆದ್ದಿದೆ. ಅಂದು ಭಾರತದ ಅದೆಷ್ಟೋ ವೀರ ಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ವಿಜಯದ ಸಂಭ್ರಮ ನೆನಪಿಸಿಕೊಳ್ಳುವ ನಿಮಿತ್ತ ಪ್ರತಿ ವರ್ಷವೂ ಜುಲೈ 26ರಂದು 'ಕಾರ್ಗಿಲ್ ವಿಜಯ್​ ದಿವಸ್'​ ಆಚರಿಸಲಾಗುತ್ತದೆ. ಹೀಗಾಗಿ, ಇಂದು ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಕಾರ್ಗಿಲ್​ ಯುದ್ಧದ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು.

ಇದನ್ನು ಓದಿ: ಕಾರ್ಗಿಲ್‌ ವಿಜಯ್ ದಿವಸ್: ಸೈನಿಕ್ ಶಾಲೆಗೆ ಹುತಾತ್ಮ ಯೋಧ ಮನೋಜ್ ಪಾಂಡೆ ಹೆಸರು ಮರು ನಾಮಕರಣ

ಶ್ರೀನಗರ: ಹವಾಮಾನ ವೈಪರೀತ್ಯ ಕಾರಣದಿಂದಾಗಿ ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಅವರ ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್​ ಯುದ್ಧ ಸ್ಮಾರಕ ಭೇಟಿ ರದ್ದಾಗಿದೆ.

ಕೆಟ್ಟ ಹವಾಮಾನದ ಪರಿಣಾಮ ರಾಮ್​ನಾಥ್ ಕೋವಿಂದ್ ಅವರ ವಿಮಾನ ಶ್ರೀನಗರದಿಂದ ಹೊರಹೋಗಲು ಸಾಧ್ಯವಿಲ್ಲ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಆದ್ದರಿಂದ ರಾಷ್ಟ್ರಪತಿ ಅವರ ಲಡಾಖ್​ ಭೇಟಿ ರದ್ದಾಗಿದೆ. ಹೀಗಾಗಿ, ಕೋವಿಂದ್ ಅವರು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರೊಂದಿಗೆ ಕಾಶ್ಮೀರದ ಹೈ ಆಲ್ಟಿಟ್ಯೂಡ್ ವಾರ್‌ಫೇರ್ ಶಾಲೆಯಲ್ಲಿ 1999ರ ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ ಎಂದು ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತದ ಹಿರಿಯ ಅಧಿಕಾರಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಭಾರತ 1999ರ ಜುಲೈ 26ರಂದು ಪಾಕ್ ವಿರುದ್ಧ​ ಕಾರ್ಗಿಲ್​ ಯುದ್ಧವನ್ನು ಗೆದ್ದಿದೆ. ಅಂದು ಭಾರತದ ಅದೆಷ್ಟೋ ವೀರ ಯೋಧರು ಹುತಾತ್ಮರಾಗಿದ್ದಾರೆ. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಮತ್ತು ವಿಜಯದ ಸಂಭ್ರಮ ನೆನಪಿಸಿಕೊಳ್ಳುವ ನಿಮಿತ್ತ ಪ್ರತಿ ವರ್ಷವೂ ಜುಲೈ 26ರಂದು 'ಕಾರ್ಗಿಲ್ ವಿಜಯ್​ ದಿವಸ್'​ ಆಚರಿಸಲಾಗುತ್ತದೆ. ಹೀಗಾಗಿ, ಇಂದು ರಾಷ್ಟ್ರಪತಿ ರಾಮ್​ನಾಥ್ ಕೋವಿಂದ್ ಕಾರ್ಗಿಲ್​ ಯುದ್ಧದ ಸ್ಮಾರಕಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು.

ಇದನ್ನು ಓದಿ: ಕಾರ್ಗಿಲ್‌ ವಿಜಯ್ ದಿವಸ್: ಸೈನಿಕ್ ಶಾಲೆಗೆ ಹುತಾತ್ಮ ಯೋಧ ಮನೋಜ್ ಪಾಂಡೆ ಹೆಸರು ಮರು ನಾಮಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.