ETV Bharat / bharat

ಮಂಚಕ್ಕೆ ಹಗ್ಗ ಕಟ್ಟಿ ರೋಗಿಯನ್ನ ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು.. 8 ಕಿ.ಮೀ ಯಾತನಾ ಯಾತ್ರೆ ಹೀಗಿತ್ತು! - ಮಿರ್ಜಾಪುರ ಆಸ್ಪತ್ರೆ ವ್ಯವಸ್ಥೆ

ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ, ಕೃತಕ ಸ್ಟ್ರೆಚರ್ ನಿರ್ಮಿಸಿದ ಕಟುಂಬಸ್ಥರು, ಅದನ್ನು ಹೊತ್ತೊಯ್ದು ಕಾಲ್ನಡಿಗೆ ಮೂಲಕವೇ ಆಸ್ಪತ್ರೆ ತಲುಪಿರುವ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.

patient reached hospital on cot
ಮಂಚಕ್ಕೆ ಹಗ್ಗ ಕಟ್ಟಿ ರೋಗಿಯನ್ನು ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!
author img

By

Published : Jun 12, 2021, 7:20 PM IST

ಮಿರ್ಜಾಪುರ: ಸರ್ಕಾರವು ಆರೋಗ್ಯ ಸೇವೆಗಾಗಿ ಪ್ರತಿ ವರ್ಷ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ ಅದು ಗ್ರಾಮೀಣ ಪ್ರದೇಶಕ್ಕೆ ತಲುಪುತ್ತಿಲ್ಲವೋ ಅಥವಾ ಜನರೇ ಆ ಸೇವೆಯನ್ನು ಬಳಸಿಕೊಳ್ಳುತ್ತಿಲ್ಲವೋ ಎನ್ನುವ ಅನುಮಾನ ಉದ್ಭವಿಸಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ, ಕೃತಕ ಸ್ಟ್ರೆಚರ್ (ಮಂಚಕ್ಕೆ ಹಗ್ಗ ಕಟ್ಟಿ ಹೊತ್ತೊಯ್ದಿದ್ದಾರೆ)​ ನಿರ್ಮಿಸಿದ ಕಟುಂಬಸ್ಥರು, ಅದನ್ನು ಹೊತ್ತೊಯ್ದು ಕಾಲ್ನಡಿಗೆ ಮೂಲಕ ಆಸ್ಪತ್ರೆ ತಲುಪಿರುವ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.

patient reached hospital on cot
ಮಂಚಕ್ಕೆ ಹಗ್ಗ ಕಟ್ಟಿ ರೋಗಿಯನ್ನು ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!

ತಿಲಾಂವ್​​​ ಗ್ರಾಮದ ಸತ್ತು ಮುಸಾಹರ್ ಅವರಿಗೆ ಶುಕ್ರವಾರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ನೋವು ಹೆಚ್ಚಾಗಿದೆ. ಈ ಕಾರಣದಿಂದಾಗಿ, ಸಾಟ್ಟು ಅವರ ಜೀವವನ್ನು ಉಳಿಸಲು, ಕುಟುಂಬ ಸದಸ್ಯರು ಹಗ್ಗ ಕಟ್ಟಿ ಅದನ್ನು ಹೊತ್ತು ನಡೆದಿದ್ದಾರೆ. ಬಿಸಿಲಿನಲ್ಲೇ ಎಂಟು ಕಿಲೋ ಮೀಟರ್ ದೂರದಲ್ಲಿರುವ ಲಾಲ್‌ಗಂಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಕುರಿತು ಸಂಬಂಧಿಕರು ಪ್ರತಿಕ್ರಿಯಿಸಿದ್ದು, ನಮ್ಮ ಬಳಿ ಫೋನ್​ ಇರಲಿಲ್ಲ. ಉಚಿತ ಆ್ಯಂಬುಲೆನ್ಸ್​ ಸೇವೆ ಇದೆಯೆಂಬುದು ಕೂಡ ನಮಗೆ ತಿಳಿದಿಲ್ಲ. ಯಾರೂ ಕೂಡ ಆ್ಯಂಬುಲೆನ್ಸ್​ಗೆ ಕರೆ ಮಾಡಲಿಲ್ಲ ಮತ್ತು ನಮಗೆ ಸಹಾಯ ಹಸ್ತ ಚಾಚಲಿಲ್ಲ. ಬಿಸಿಲಿನಲ್ಲೇ 8 ಕಿ.ಮೀ ಸಂಚರಿಸಿದೆವು ಎಂದು ತಿಳಿಸಿದರು.

ಮಿರ್ಜಾಪುರ: ಸರ್ಕಾರವು ಆರೋಗ್ಯ ಸೇವೆಗಾಗಿ ಪ್ರತಿ ವರ್ಷ ಕೋಟಿ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ ಅದು ಗ್ರಾಮೀಣ ಪ್ರದೇಶಕ್ಕೆ ತಲುಪುತ್ತಿಲ್ಲವೋ ಅಥವಾ ಜನರೇ ಆ ಸೇವೆಯನ್ನು ಬಳಸಿಕೊಳ್ಳುತ್ತಿಲ್ಲವೋ ಎನ್ನುವ ಅನುಮಾನ ಉದ್ಭವಿಸಿದೆ. ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗಿ, ಕೃತಕ ಸ್ಟ್ರೆಚರ್ (ಮಂಚಕ್ಕೆ ಹಗ್ಗ ಕಟ್ಟಿ ಹೊತ್ತೊಯ್ದಿದ್ದಾರೆ)​ ನಿರ್ಮಿಸಿದ ಕಟುಂಬಸ್ಥರು, ಅದನ್ನು ಹೊತ್ತೊಯ್ದು ಕಾಲ್ನಡಿಗೆ ಮೂಲಕ ಆಸ್ಪತ್ರೆ ತಲುಪಿರುವ ಘಟನೆ ಮಿರ್ಜಾಪುರದಲ್ಲಿ ನಡೆದಿದೆ.

patient reached hospital on cot
ಮಂಚಕ್ಕೆ ಹಗ್ಗ ಕಟ್ಟಿ ರೋಗಿಯನ್ನು ಆಸ್ಪತ್ರೆಗೆ ಹೊತ್ತೊಯ್ದ ಸಂಬಂಧಿಕರು!

ತಿಲಾಂವ್​​​ ಗ್ರಾಮದ ಸತ್ತು ಮುಸಾಹರ್ ಅವರಿಗೆ ಶುಕ್ರವಾರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ನೋವು ಹೆಚ್ಚಾಗಿದೆ. ಈ ಕಾರಣದಿಂದಾಗಿ, ಸಾಟ್ಟು ಅವರ ಜೀವವನ್ನು ಉಳಿಸಲು, ಕುಟುಂಬ ಸದಸ್ಯರು ಹಗ್ಗ ಕಟ್ಟಿ ಅದನ್ನು ಹೊತ್ತು ನಡೆದಿದ್ದಾರೆ. ಬಿಸಿಲಿನಲ್ಲೇ ಎಂಟು ಕಿಲೋ ಮೀಟರ್ ದೂರದಲ್ಲಿರುವ ಲಾಲ್‌ಗಂಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ಕುರಿತು ಸಂಬಂಧಿಕರು ಪ್ರತಿಕ್ರಿಯಿಸಿದ್ದು, ನಮ್ಮ ಬಳಿ ಫೋನ್​ ಇರಲಿಲ್ಲ. ಉಚಿತ ಆ್ಯಂಬುಲೆನ್ಸ್​ ಸೇವೆ ಇದೆಯೆಂಬುದು ಕೂಡ ನಮಗೆ ತಿಳಿದಿಲ್ಲ. ಯಾರೂ ಕೂಡ ಆ್ಯಂಬುಲೆನ್ಸ್​ಗೆ ಕರೆ ಮಾಡಲಿಲ್ಲ ಮತ್ತು ನಮಗೆ ಸಹಾಯ ಹಸ್ತ ಚಾಚಲಿಲ್ಲ. ಬಿಸಿಲಿನಲ್ಲೇ 8 ಕಿ.ಮೀ ಸಂಚರಿಸಿದೆವು ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.