ETV Bharat / bharat

ವಿಶ್ವ ತಾಯಂದಿರ ದಿನವೇ ಅಮ್ಮ ವಿಧಿವಶ: ತಳ್ಳೋ ಗಾಡಿಯಲ್ಲಿ ಹೆತ್ತಮ್ಮನ ಶವ ಸಾಗಿಸಿ ಮಕ್ಕಳಿಂದ ಅಂತ್ಯಕ್ರಿಯೆ - ತಳ್ಳೋ ಗಾಡಿಯಲ್ಲಿ ತಾಯಿ ಮೃತದೇಹ

ವಿಶ್ವ ತಾಯಂದಿರ ದಿನವೇ ಕೋವಿಡ್​ನಿಂದ ಸಾವನ್ನಪ್ಪಿರುವ ತಾಯಿಯ ಮೃತದೇಹವನ್ನ ತಳ್ಳೋ ಗಾಡಿಯಲ್ಲಿ ಸಾಗಿಸಿ ಅಂತ್ಯಕ್ರಿಯೆ ನಡೆಸಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

mother on hand cart in jhalawar
mother on hand cart in jhalawar
author img

By

Published : May 9, 2021, 4:43 PM IST

ಜಾಲ್ವಾರ್​(ರಾಜಸ್ಥಾನ): ಇಂದು ವಿಶ್ವ ತಾಯಂದಿರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗ್ತಿದೆ. ಅಮ್ಮನ ತ್ಯಾಗ, ಸೇವೆ ಮತ್ತು ಆಕೆಯ ಸಮರ್ಪಣೆ ಭಾವದ ಬಗ್ಗೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಆದರೆ ಈ ತಾಯಂದಿರ ದಿನವೇ ಜಾಲ್ವಾರ್​​ದ ಸುನೆಲ್​ ಪಟ್ಟಣದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.

ತಳ್ಳೋ ಗಾಡಿಯಲ್ಲಿ ಹೆತ್ತಮ್ಮನ ಶವ ಸಾಗಿಸಿದ ಮಕ್ಕಳು

ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆ ಮಾಡಿರುವ ಎಡವಟ್ಟಿನಿಂದ ಪುತ್ರರಿಬ್ಬರು ಕೋವಿಡ್​ನಿಂದ ಸಾವನ್ನಪ್ಪಿರುವ ತಾಯಿಯ ಮೃತದೇಹವನ್ನ ತಳ್ಳೋ ಗಾಡಿಯಲ್ಲಿ ಸಾಗಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಅಂತ್ಯ ಸಂಸ್ಕಾರಕ್ಕೂ ಸಹ ಹೆಗಲು ನೀಡದಿದ್ದಾಗ ಮಕ್ಕಳೇ ತಳ್ಳೋ ಗಾಡಿಯಲ್ಲಿ ಮೃತದೇಹ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಸಿಗದ ಆ್ಯಂಬುಲೆನ್ಸ್: ಬಂಡಿ ಮೇಲೆ ಮಹಿಳೆ ಶವ ಸಾಗಿಸಿದ ಕುಟುಂಬ

ಅಲ್ಲಿನ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಇಬ್ಬರು ಪುತ್ರರು ತಮ್ಮ ತಾಯಿಯ ಮೃತದೇಹವನ್ನ ತಳ್ಳೋ ಗಾಡಿಯಲ್ಲಿ ತೆಗೆದುಕೊಂಡು ಹೋಗಿ, ಅಂತಿಮ ವಿಧಿ-ವಿಧಾನ ನಡೆಸಿದ್ದಾರೆ. ಕೊರೊನಾ ಸೋಂಕಿನಿಂದ ಮಹಿಳೆ ಸಾವನ್ನಪ್ಪಿದ್ದು, ಕೋವಿಡ್​​ ಮಾರ್ಗಸೂಚಿಯಂತೆ ಮೃತದೇಹದ ಅಂತ್ಯಕ್ರಿಯೆ ನಡೆಸಲು ಅಲ್ಲಿನ ಜಿಲ್ಲಾಡಳಿತ ಆ್ಯಂಬುಲೆನ್ಸ್​ ನೀಡಿಲ್ಲ. ಹೀಗಾಗಿ ಇಬ್ಬರು ಪುತ್ರರು ತಾಯಿಯ ಶವವನ್ನ ಗಾಡಿಯಲ್ಲಿಟ್ಟುಕೊಂಡು ಪಟ್ಟಣದ ಮಾರುಕಟ್ಟೆ ಮತ್ತು ಬೀದಿಗಳ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಅಂತ್ಯಕ್ರಿಯೆ ಮುಗಿಸಿದ್ದಾರೆ. ಅವರಿಗೆ ಸ್ಥಳೀಯರು ಯಾರೂ ಕೂಡ ಸಹಾಯ ಮಾಡದಿರುವುದು ಮನುಷತ್ವವನ್ನು ಪ್ರಶ್ನಿಸುವಂತಾಗಿದೆ.

ಕೋವಿಡ್​ನಿಂದ ಸಾವನ್ನಪ್ಪಿರುವ ತಾಯಿಯ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಆ್ಯಂಬುಲೆನ್ಸ್ ನೀಡದ ಕಾರಣ ವಿಧಿಯಿಲ್ಲದೆ ಈ ರೀತಿಯಾಗಿ ಮಾಡಿದ್ದೇವೆ ಎಂದು ಮೃತ ಅಪರ್ಣಾ ಅವರ ಮಗ ದಿನೇಶ್ ಕುಮಾರ್​ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಜಾಲ್ವಾರ್​(ರಾಜಸ್ಥಾನ): ಇಂದು ವಿಶ್ವ ತಾಯಂದಿರ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗ್ತಿದೆ. ಅಮ್ಮನ ತ್ಯಾಗ, ಸೇವೆ ಮತ್ತು ಆಕೆಯ ಸಮರ್ಪಣೆ ಭಾವದ ಬಗ್ಗೆ ಸಾಕಷ್ಟು ಜನರು ಮಾತನಾಡುತ್ತಿದ್ದಾರೆ. ಆದರೆ ಈ ತಾಯಂದಿರ ದಿನವೇ ಜಾಲ್ವಾರ್​​ದ ಸುನೆಲ್​ ಪಟ್ಟಣದಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ.

ತಳ್ಳೋ ಗಾಡಿಯಲ್ಲಿ ಹೆತ್ತಮ್ಮನ ಶವ ಸಾಗಿಸಿದ ಮಕ್ಕಳು

ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆ ಮಾಡಿರುವ ಎಡವಟ್ಟಿನಿಂದ ಪುತ್ರರಿಬ್ಬರು ಕೋವಿಡ್​ನಿಂದ ಸಾವನ್ನಪ್ಪಿರುವ ತಾಯಿಯ ಮೃತದೇಹವನ್ನ ತಳ್ಳೋ ಗಾಡಿಯಲ್ಲಿ ಸಾಗಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಅಂತ್ಯ ಸಂಸ್ಕಾರಕ್ಕೂ ಸಹ ಹೆಗಲು ನೀಡದಿದ್ದಾಗ ಮಕ್ಕಳೇ ತಳ್ಳೋ ಗಾಡಿಯಲ್ಲಿ ಮೃತದೇಹ ಸಾಗಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಸಿಗದ ಆ್ಯಂಬುಲೆನ್ಸ್: ಬಂಡಿ ಮೇಲೆ ಮಹಿಳೆ ಶವ ಸಾಗಿಸಿದ ಕುಟುಂಬ

ಅಲ್ಲಿನ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಇಬ್ಬರು ಪುತ್ರರು ತಮ್ಮ ತಾಯಿಯ ಮೃತದೇಹವನ್ನ ತಳ್ಳೋ ಗಾಡಿಯಲ್ಲಿ ತೆಗೆದುಕೊಂಡು ಹೋಗಿ, ಅಂತಿಮ ವಿಧಿ-ವಿಧಾನ ನಡೆಸಿದ್ದಾರೆ. ಕೊರೊನಾ ಸೋಂಕಿನಿಂದ ಮಹಿಳೆ ಸಾವನ್ನಪ್ಪಿದ್ದು, ಕೋವಿಡ್​​ ಮಾರ್ಗಸೂಚಿಯಂತೆ ಮೃತದೇಹದ ಅಂತ್ಯಕ್ರಿಯೆ ನಡೆಸಲು ಅಲ್ಲಿನ ಜಿಲ್ಲಾಡಳಿತ ಆ್ಯಂಬುಲೆನ್ಸ್​ ನೀಡಿಲ್ಲ. ಹೀಗಾಗಿ ಇಬ್ಬರು ಪುತ್ರರು ತಾಯಿಯ ಶವವನ್ನ ಗಾಡಿಯಲ್ಲಿಟ್ಟುಕೊಂಡು ಪಟ್ಟಣದ ಮಾರುಕಟ್ಟೆ ಮತ್ತು ಬೀದಿಗಳ ಮೂಲಕ ಸ್ಮಶಾನಕ್ಕೆ ತೆಗೆದುಕೊಂಡು ಹೋಗಿ, ಅಂತ್ಯಕ್ರಿಯೆ ಮುಗಿಸಿದ್ದಾರೆ. ಅವರಿಗೆ ಸ್ಥಳೀಯರು ಯಾರೂ ಕೂಡ ಸಹಾಯ ಮಾಡದಿರುವುದು ಮನುಷತ್ವವನ್ನು ಪ್ರಶ್ನಿಸುವಂತಾಗಿದೆ.

ಕೋವಿಡ್​ನಿಂದ ಸಾವನ್ನಪ್ಪಿರುವ ತಾಯಿಯ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಆ್ಯಂಬುಲೆನ್ಸ್ ನೀಡದ ಕಾರಣ ವಿಧಿಯಿಲ್ಲದೆ ಈ ರೀತಿಯಾಗಿ ಮಾಡಿದ್ದೇವೆ ಎಂದು ಮೃತ ಅಪರ್ಣಾ ಅವರ ಮಗ ದಿನೇಶ್ ಕುಮಾರ್​ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.