ETV Bharat / bharat

ರೈತರ ನಾಶಕ್ಕಾಗಿ ಕೇಂದ್ರ ಈ ಕೃಷಿ ಕಾನೂನುಗಳನ್ನು ತಂದಿದೆ: ಟಿಕಾಯತ್​ ಕಿಡಿ

ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಭಟನೆ ಕುರಿತಂತೆ ಕೃಷಿ ಉಪಾಜ್ ಮಂಡಿಯಲ್ಲಿ ಆಯೋಜಿಸಲಾಗಿದ್ದ ಮಹಾಪಂಚಾಯತ್‌ನಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್​ ಸೇರಿ ಅನೇಕ ರೈತ ಮುಖಂಡರು ಭಾಗವಹಿಸಿದ್ದರು. ಅನ್ನದಾತರನ್ನು ನಾಶಮಾಡಲು ಕೇಂದ್ರ ಸರ್ಕಾರ ಹೊಸ ಕೃಷಿ ಕಾನೂನನ್ನು ತಂದಿದೆ ಟಿಕಾಯತ್​ ಕಿಡಿಕಾರಿದ್ರು.

author img

By

Published : Mar 9, 2021, 10:38 AM IST

rakesh tikait
ಮಹಾಪಂಚಾಯತ್​

ಶ್ಯೋಪುರ(ಮಧ್ಯಪ್ರದೇಶ): ಯಾವ ರೈತ ಹೆದರುತ್ತಾನೋ ಅವನು ನಮ್ಮೊಂದಿಗೆ ಬರುವುದು ಬೇಡ ಎಂದು ರೈತ ಮುಖಂಡ ರಾಕೇಶ್​ ಟಿಕಾಯತ್​ ಹೇಳಿದ್ದಾರೆ.

ರಾಕೇಶ್​ ಟಿಕಾಯತ್​

ಮಧ್ಯಪ್ರದೇಶದಲ್ಲಿ ಜೈದಾ ಕೃಷಿ ಉತ್ಪನ್ನ ಮಾರುಕಟ್ಟೆಯ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್​​, ಕೇಂದ್ರದಲ್ಲಿ ಯಾವುದೇ ಸರ್ಕಾರ ನಡೆಯುತ್ತಿಲ್ಲ. ಬದಲಿಗೆ ಕಂಪನಿ ನಡೆಯುತ್ತಿದೆ. ದೊಡ್ಡ ಕೈಗಾರಿಕೆಗಳ ಉದ್ಯಮಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಂತಹ ದರೋಡೆಕೋರರ ಗುಂಪಿನಿಂದ ದೂರವಿರಬೇಕು ಎಂದು ಟಿಕಾಯತ್​ ಎಚ್ಚರಿಸಿದ್ದಾರೆ. ಅಲ್ಲದೇ, ಅಂತಹ ದರೋಡೆಕೋರರಿಂದ ದೇಶವನ್ನು ಉಳಿಸಿ ಎಂದಿದ್ದಾರೆ. ಈಗ ನಮ್ಮ ಮುಂದೆ ಮೂರು ಕಾನೂನುಗಳು ಮಾತ್ರ ಇವೆ ನಾವೇನಾದರೂ ಮೌನವಾಗಿದ್ದರೆ ಇನ್ನೂ 40 ಕಾನೂನುಗಳು ಬರಲಿವೆ ಎಂದು ರೈತರಿಗೆ ಎಚ್ಚರಿಸಿದ್ರು.

rakesh tikait
ಮಹಾಪಂಚಾಯತ್​

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವ ಬಗ್ಗೆ ಮಾತನಾಡಿದ ರಾಕೇಶ್ ಟಿಕಾಯತ್​, ಪೆಟ್ರೋಲ್ , ಡೀಸೆಲ್​ ಬೆಲೆ ಹೆಚ್ಚಿಸಿ ಅವರೇ ಬೆಂಕಿ ಹಚ್ಚುತ್ತಾರೆ. ಆದರೆ ಸಾರ್ವಜನಿಕರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಾರೆ. ಅವರು ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಅವರು ಆಲ್‌ರೌಂಡರ್‌ಗಳು. ಅವರದ್ದು ದರೋಡೆಕೋರರ ಗ್ಯಾಂಗ್ , ದೇಶವನ್ನು ಅವರಿಂದ ರಕ್ಷಿಸಬೇಕಾಗಿದೆ. ರಾಜಕೀಯ ಪಕ್ಷವೊಂದು ಸರ್ಕಾರ ನಡೆಸಿದ್ದರೆ ಹೀಗಾಗುತ್ತಿತ್ತಾ.. ಇದು ಸ್ಪಷ್ಟವಾಗಿ ದರೋಡೆಕೋರರ ಸರ್ಕಾರ ಎಂದು ಆಕ್ರೋಶ ಹೊರಹಾಕಿದ್ರು.

rakesh tikait
ಮಹಾಪಂಚಾಯತ್​

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಭಟನೆ ಕುರಿತಂತೆ ಕೃಷಿ ಉಪಾಜ್ ಮಂಡಿಯಲ್ಲಿ ರೈತರ ಮಹಾ ಪಂಚಾಯತ್ ಆಯೋಜಿಸಲಾಗಿತ್ತು. ಈ ಮಹಾ ಪಂಚಾಯತ್‌ನಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್​ ಸೇರಿ ಅನೇಕ ರೈತ ಮುಖಂಡರು ಭಾಗವಹಿಸಿದ್ದರು. ಶಿವಪುರಿ, ಮೊರೆನಾ, ಅಶೋಕ್ ನಗರ, ಬಾರನ್, ಕೋಟಾ, ರಾಜಸ್ಥಾನದ ಸವಾಯಿ ಮಾಧೋಪುರ ಸೇರಿದಂತೆ ಇತರ ರಾಜ್ಯಗಳ ರೈತರು ಈ ಮಹಾ ಪಂಚಾಯತ್ ನಲ್ಲಿ ಪಾಲ್ಗೊಂಡಿದ್ದರು. ಮಹಾ ಪಂಚಾಯತ್ ಹಿನ್ನೆಲೆ ಸುಮಾರು 600 ಸೈನಿಕರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಶ್ಯೋಪುರ(ಮಧ್ಯಪ್ರದೇಶ): ಯಾವ ರೈತ ಹೆದರುತ್ತಾನೋ ಅವನು ನಮ್ಮೊಂದಿಗೆ ಬರುವುದು ಬೇಡ ಎಂದು ರೈತ ಮುಖಂಡ ರಾಕೇಶ್​ ಟಿಕಾಯತ್​ ಹೇಳಿದ್ದಾರೆ.

ರಾಕೇಶ್​ ಟಿಕಾಯತ್​

ಮಧ್ಯಪ್ರದೇಶದಲ್ಲಿ ಜೈದಾ ಕೃಷಿ ಉತ್ಪನ್ನ ಮಾರುಕಟ್ಟೆಯ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಕೇಶ್ ಟಿಕಾಯತ್​​, ಕೇಂದ್ರದಲ್ಲಿ ಯಾವುದೇ ಸರ್ಕಾರ ನಡೆಯುತ್ತಿಲ್ಲ. ಬದಲಿಗೆ ಕಂಪನಿ ನಡೆಯುತ್ತಿದೆ. ದೊಡ್ಡ ಕೈಗಾರಿಕೆಗಳ ಉದ್ಯಮಿಗಳಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಅಂತಹ ದರೋಡೆಕೋರರ ಗುಂಪಿನಿಂದ ದೂರವಿರಬೇಕು ಎಂದು ಟಿಕಾಯತ್​ ಎಚ್ಚರಿಸಿದ್ದಾರೆ. ಅಲ್ಲದೇ, ಅಂತಹ ದರೋಡೆಕೋರರಿಂದ ದೇಶವನ್ನು ಉಳಿಸಿ ಎಂದಿದ್ದಾರೆ. ಈಗ ನಮ್ಮ ಮುಂದೆ ಮೂರು ಕಾನೂನುಗಳು ಮಾತ್ರ ಇವೆ ನಾವೇನಾದರೂ ಮೌನವಾಗಿದ್ದರೆ ಇನ್ನೂ 40 ಕಾನೂನುಗಳು ಬರಲಿವೆ ಎಂದು ರೈತರಿಗೆ ಎಚ್ಚರಿಸಿದ್ರು.

rakesh tikait
ಮಹಾಪಂಚಾಯತ್​

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುತ್ತಿರುವ ಬಗ್ಗೆ ಮಾತನಾಡಿದ ರಾಕೇಶ್ ಟಿಕಾಯತ್​, ಪೆಟ್ರೋಲ್ , ಡೀಸೆಲ್​ ಬೆಲೆ ಹೆಚ್ಚಿಸಿ ಅವರೇ ಬೆಂಕಿ ಹಚ್ಚುತ್ತಾರೆ. ಆದರೆ ಸಾರ್ವಜನಿಕರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುತ್ತಾರೆ. ಅವರು ಈ ಚುನಾವಣೆಯಲ್ಲಿ ಗೆಲ್ಲುವುದಿಲ್ಲ, ಅವರು ಆಲ್‌ರೌಂಡರ್‌ಗಳು. ಅವರದ್ದು ದರೋಡೆಕೋರರ ಗ್ಯಾಂಗ್ , ದೇಶವನ್ನು ಅವರಿಂದ ರಕ್ಷಿಸಬೇಕಾಗಿದೆ. ರಾಜಕೀಯ ಪಕ್ಷವೊಂದು ಸರ್ಕಾರ ನಡೆಸಿದ್ದರೆ ಹೀಗಾಗುತ್ತಿತ್ತಾ.. ಇದು ಸ್ಪಷ್ಟವಾಗಿ ದರೋಡೆಕೋರರ ಸರ್ಕಾರ ಎಂದು ಆಕ್ರೋಶ ಹೊರಹಾಕಿದ್ರು.

rakesh tikait
ಮಹಾಪಂಚಾಯತ್​

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳ ಪ್ರತಿಭಟನೆ ಕುರಿತಂತೆ ಕೃಷಿ ಉಪಾಜ್ ಮಂಡಿಯಲ್ಲಿ ರೈತರ ಮಹಾ ಪಂಚಾಯತ್ ಆಯೋಜಿಸಲಾಗಿತ್ತು. ಈ ಮಹಾ ಪಂಚಾಯತ್‌ನಲ್ಲಿ ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯತ್​ ಸೇರಿ ಅನೇಕ ರೈತ ಮುಖಂಡರು ಭಾಗವಹಿಸಿದ್ದರು. ಶಿವಪುರಿ, ಮೊರೆನಾ, ಅಶೋಕ್ ನಗರ, ಬಾರನ್, ಕೋಟಾ, ರಾಜಸ್ಥಾನದ ಸವಾಯಿ ಮಾಧೋಪುರ ಸೇರಿದಂತೆ ಇತರ ರಾಜ್ಯಗಳ ರೈತರು ಈ ಮಹಾ ಪಂಚಾಯತ್ ನಲ್ಲಿ ಪಾಲ್ಗೊಂಡಿದ್ದರು. ಮಹಾ ಪಂಚಾಯತ್ ಹಿನ್ನೆಲೆ ಸುಮಾರು 600 ಸೈನಿಕರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.