ETV Bharat / bharat

Nepal: ಅಕ್ಕಿ, ಭತ್ತ ಮತ್ತು ಸಕ್ಕರೆ ನೀಡುವಂತೆ ಭಾರತಕ್ಕೆ ನೇಪಾಳ ಮನವಿ

Nepal-India: ತನಗೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಮನವಿ ಮಾಡಿದೆ.

author img

By

Published : Aug 16, 2023, 4:45 PM IST

ಅಕ್ಕಿ, ಭತ್ತ ಮತ್ತು ಸಕ್ಕರೆ ನೀಡುವಂತೆ ಭಾರತಕ್ಕೆ ನೇಪಾಳ ಮನವಿ
Nepal requests India to provide rice paddy and sugar

ಕಠ್ಮಂಡು (ನೇಪಾಳ) : ತನ್ನ ದೇಶಕ್ಕೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ. ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೇಪಾಳ ಭಾರತಕ್ಕೆ ಮನವಿ ಮಾಡಿದೆ. ಭಾರತವು ತನ್ನ ಅಕ್ಕಿ ರಫ್ತಿಗೆ ನಿಷೇಧ ಹೇರಿದ ಬಳಿಕ ಜಗತ್ತಿನಲ್ಲಿ ಅಕ್ಕಿಗಾಗಿ ಹಾಹಾಕಾರ ಉಂಟಾಗಿದ್ದು, ಈಗ ನೇಪಾಳ ಅಕ್ಕಿಗಾಗಿ ಭಾರತಕ್ಕೆ ಮನವಿ ಮಾಡಿರುವುದು ಗಮನಾರ್ಹ.

"1,00,000 ಟನ್ ಅಕ್ಕಿ, 50,000 ಟನ್ ಸಕ್ಕರೆ ಮತ್ತು ಒಂದು ಮಿಲಿಯನ್ ಟನ್ ಭತ್ತ ಪೂರೈಸುವಂತೆ ನಾವು ಭಾರತಕ್ಕೆ ವಿನಂತಿಸಿದ್ದೇವೆ" ಎಂದು ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಮ್ ಚಂದ್ರ ತಿವಾರಿ ತಿಳಿಸಿದ್ದಾರೆ. ಭಾರತವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಹರಡಿದೆ. ಸಾರ್ವಜನಿಕರ ಆತಂಕವನ್ನು ಹೋಗಲಾಡಿಸಲು ನಾವು ಧಾನ್ಯ ಮತ್ತು ಸಕ್ಕರೆ ಪೂರೈಸುವಂತೆ ಮನವಿ ಮಾಡಿದ್ದೇವೆ ಎಂದು ತಿವಾರಿ ಹೇಳಿದರು.

ಎಲ್ ನಿನೋ ಹವಾಮಾನದ ಅಲೆಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ಜುಲೈ 20 ರಿಂದ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲೆ ಭಾರತ ನಿರ್ಬಂಧ ವಿಧಿಸಿದೆ. ಇದನ್ನೇ ನೆಪ ಮಾಡಿಕೊಂಡಿರುವ ಕೆಲ ನೇಪಾಳಿ ವ್ಯಾಪಾರಿಗಳು ನೇಪಾಳದಲ್ಲಿ ಅಕ್ಕಿ ಮತ್ತು ಭತ್ತ ಸಂಗ್ರಹಿಸಲಾರಂಭಿಸಿದ್ದಾರೆ. ಇದರ ಪರಿಣಾಮವಾಗಿ ನೇಪಾಳದಲ್ಲಿ ಬಾಸ್ಮತಿ ಅಲ್ಲದ ಅಕ್ಕಿಯ ಬೆಲೆ ಏರಿಕೆಯಾಗಿದೆ. ಅಕ್ಕಿ ನೇಪಾಳದಲ್ಲಿ ಪ್ರಧಾನ ಆಹಾರವಾಗಿದ್ದು, ಹೆಚ್ಚಾಗಿ ಭಾರತದಿಂದ ಆಮದು ಮಾಡಿಕೊಳ್ಳುತ್ತದೆ.

ನೇಪಾಳವು ಭಾರತದಿಂದ 1.4 ಮಿಲಿಯನ್ ಟನ್ ಅಕ್ಕಿಯನ್ನು (1.38 ಮಿಲಿಯನ್ ಟನ್ ಬಾಸ್ಮತಿಯೇತರ ಮತ್ತು 19,000 ಟನ್ ಬಾಸ್ಮತಿ ಅಕ್ಕಿ) ಆಮದು ಮಾಡಿಕೊಂಡಿದೆ ಎಂದು ಭಾರತ ಸರ್ಕಾರದ ವರದಿ ತಿಳಿಸಿದೆ. ಮೌಲ್ಯದ ದೃಷ್ಟಿಯಿಂದ ನೋಡಿದರೆ 473.43 ಮಿಲಿಯನ್ ಡಾಲರ್ ಅಥವಾ 60 ಬಿಲಿಯನ್ ರೂ. ಗಳಷ್ಟು ಮೊತ್ತದ ಅಕ್ಕಿಯನ್ನು ನೇಪಾಳ ಭಾರತದಿಂದ ಆಮದು ಮಾಡಿಕೊಂಡಿದೆ. 2022-23ರಲ್ಲಿ ನೇಪಾಳದ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯ ಆಮದು 8,12,028 ಟನ್​ಗಳಿಗೆ ತೀವ್ರವಾಗಿ ಕುಸಿದಿದೆ. ಭಾರತವು ಅಕ್ಕಿ ರಫ್ತನ್ನು ನಿಲ್ಲಿಸಿದ ತಕ್ಷಣ ನೇಪಾಳದಲ್ಲಿ ಚಿಲ್ಲರೆ ಬೆಲೆಗಳು 25 ಕೆಜಿ ಚೀಲಕ್ಕೆ 200 ರೂ.ಗಳಿಂದ 250 ರೂ.ಗೆ ಏರಿದೆ ಎಂದು ನೇಪಾಳಿ ವ್ಯಾಪಾರಿಗಳು ತಿಳಿಸಿದ್ದಾರೆ.

ವಿಶೇಷವಾಗಿ, ಹಬ್ಬದ ಋತುವಿನಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಹಬ್ಬದ ಋತುವಿನಲ್ಲಿ ಅಕ್ಕಿ ಮತ್ತು ಸಕ್ಕರೆಯ ಬಳಕೆ ಹೆಚ್ಚಾಗುವುದರಿಂದ, ಭವಿಷ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ಕೊರತೆ ಎದುರಾಗದಂತೆ ಆಹಾರ ಮತ್ತು ಸಕ್ಕರೆಯಂತಹ ಅಗತ್ಯ ಉತ್ಪನ್ನಗಳ ದಾಸ್ತಾನು ಇರಿಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ನೇಪಾಳದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಯುಪಿಯಲ್ಲಿ ಹೆಚ್ಚಾದ ಫಾರಿನ್ ಬ್ರ್ಯಾಂಡ್​ ಮದ್ಯದ ಘಮಲು: 573 ವಿದೇಶಿ ಬ್ರ್ಯಾಂಡ್​​ ನೋಂದಣಿ

ಕಠ್ಮಂಡು (ನೇಪಾಳ) : ತನ್ನ ದೇಶಕ್ಕೆ ಅಕ್ಕಿ, ಸಕ್ಕರೆ ಮತ್ತು ಭತ್ತ ನೀಡುವಂತೆ ನೇಪಾಳ ಸರ್ಕಾರ ಭಾರತಕ್ಕೆ ಪತ್ರ ಬರೆದಿದೆ. ಕಳೆದ ವಾರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೇಪಾಳ ಭಾರತಕ್ಕೆ ಮನವಿ ಮಾಡಿದೆ. ಭಾರತವು ತನ್ನ ಅಕ್ಕಿ ರಫ್ತಿಗೆ ನಿಷೇಧ ಹೇರಿದ ಬಳಿಕ ಜಗತ್ತಿನಲ್ಲಿ ಅಕ್ಕಿಗಾಗಿ ಹಾಹಾಕಾರ ಉಂಟಾಗಿದ್ದು, ಈಗ ನೇಪಾಳ ಅಕ್ಕಿಗಾಗಿ ಭಾರತಕ್ಕೆ ಮನವಿ ಮಾಡಿರುವುದು ಗಮನಾರ್ಹ.

"1,00,000 ಟನ್ ಅಕ್ಕಿ, 50,000 ಟನ್ ಸಕ್ಕರೆ ಮತ್ತು ಒಂದು ಮಿಲಿಯನ್ ಟನ್ ಭತ್ತ ಪೂರೈಸುವಂತೆ ನಾವು ಭಾರತಕ್ಕೆ ವಿನಂತಿಸಿದ್ದೇವೆ" ಎಂದು ಕೈಗಾರಿಕೆ, ವಾಣಿಜ್ಯ ಮತ್ತು ಸರಬರಾಜು ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಮ್ ಚಂದ್ರ ತಿವಾರಿ ತಿಳಿಸಿದ್ದಾರೆ. ಭಾರತವು ಅಕ್ಕಿ ರಫ್ತಿನ ಮೇಲೆ ನಿಷೇಧ ಹೇರಿದ ನಂತರ ಮಾರುಕಟ್ಟೆಯಲ್ಲಿ ಅಕ್ಕಿಯ ಕೊರತೆ ಉಂಟಾಗಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಹರಡಿದೆ. ಸಾರ್ವಜನಿಕರ ಆತಂಕವನ್ನು ಹೋಗಲಾಡಿಸಲು ನಾವು ಧಾನ್ಯ ಮತ್ತು ಸಕ್ಕರೆ ಪೂರೈಸುವಂತೆ ಮನವಿ ಮಾಡಿದ್ದೇವೆ ಎಂದು ತಿವಾರಿ ಹೇಳಿದರು.

ಎಲ್ ನಿನೋ ಹವಾಮಾನದ ಅಲೆಗಳ ಸಾಧ್ಯತೆಯ ಹಿನ್ನೆಲೆಯಲ್ಲಿ ಜುಲೈ 20 ರಿಂದ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತಿನ ಮೇಲೆ ಭಾರತ ನಿರ್ಬಂಧ ವಿಧಿಸಿದೆ. ಇದನ್ನೇ ನೆಪ ಮಾಡಿಕೊಂಡಿರುವ ಕೆಲ ನೇಪಾಳಿ ವ್ಯಾಪಾರಿಗಳು ನೇಪಾಳದಲ್ಲಿ ಅಕ್ಕಿ ಮತ್ತು ಭತ್ತ ಸಂಗ್ರಹಿಸಲಾರಂಭಿಸಿದ್ದಾರೆ. ಇದರ ಪರಿಣಾಮವಾಗಿ ನೇಪಾಳದಲ್ಲಿ ಬಾಸ್ಮತಿ ಅಲ್ಲದ ಅಕ್ಕಿಯ ಬೆಲೆ ಏರಿಕೆಯಾಗಿದೆ. ಅಕ್ಕಿ ನೇಪಾಳದಲ್ಲಿ ಪ್ರಧಾನ ಆಹಾರವಾಗಿದ್ದು, ಹೆಚ್ಚಾಗಿ ಭಾರತದಿಂದ ಆಮದು ಮಾಡಿಕೊಳ್ಳುತ್ತದೆ.

ನೇಪಾಳವು ಭಾರತದಿಂದ 1.4 ಮಿಲಿಯನ್ ಟನ್ ಅಕ್ಕಿಯನ್ನು (1.38 ಮಿಲಿಯನ್ ಟನ್ ಬಾಸ್ಮತಿಯೇತರ ಮತ್ತು 19,000 ಟನ್ ಬಾಸ್ಮತಿ ಅಕ್ಕಿ) ಆಮದು ಮಾಡಿಕೊಂಡಿದೆ ಎಂದು ಭಾರತ ಸರ್ಕಾರದ ವರದಿ ತಿಳಿಸಿದೆ. ಮೌಲ್ಯದ ದೃಷ್ಟಿಯಿಂದ ನೋಡಿದರೆ 473.43 ಮಿಲಿಯನ್ ಡಾಲರ್ ಅಥವಾ 60 ಬಿಲಿಯನ್ ರೂ. ಗಳಷ್ಟು ಮೊತ್ತದ ಅಕ್ಕಿಯನ್ನು ನೇಪಾಳ ಭಾರತದಿಂದ ಆಮದು ಮಾಡಿಕೊಂಡಿದೆ. 2022-23ರಲ್ಲಿ ನೇಪಾಳದ ಬಾಸ್ಮತಿ ಮತ್ತು ಬಾಸ್ಮತಿಯೇತರ ಅಕ್ಕಿಯ ಆಮದು 8,12,028 ಟನ್​ಗಳಿಗೆ ತೀವ್ರವಾಗಿ ಕುಸಿದಿದೆ. ಭಾರತವು ಅಕ್ಕಿ ರಫ್ತನ್ನು ನಿಲ್ಲಿಸಿದ ತಕ್ಷಣ ನೇಪಾಳದಲ್ಲಿ ಚಿಲ್ಲರೆ ಬೆಲೆಗಳು 25 ಕೆಜಿ ಚೀಲಕ್ಕೆ 200 ರೂ.ಗಳಿಂದ 250 ರೂ.ಗೆ ಏರಿದೆ ಎಂದು ನೇಪಾಳಿ ವ್ಯಾಪಾರಿಗಳು ತಿಳಿಸಿದ್ದಾರೆ.

ವಿಶೇಷವಾಗಿ, ಹಬ್ಬದ ಋತುವಿನಲ್ಲಿ ಬೆಲೆಗಳು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಹಬ್ಬದ ಋತುವಿನಲ್ಲಿ ಅಕ್ಕಿ ಮತ್ತು ಸಕ್ಕರೆಯ ಬಳಕೆ ಹೆಚ್ಚಾಗುವುದರಿಂದ, ಭವಿಷ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ಕೊರತೆ ಎದುರಾಗದಂತೆ ಆಹಾರ ಮತ್ತು ಸಕ್ಕರೆಯಂತಹ ಅಗತ್ಯ ಉತ್ಪನ್ನಗಳ ದಾಸ್ತಾನು ಇರಿಸಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ನೇಪಾಳದ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಯುಪಿಯಲ್ಲಿ ಹೆಚ್ಚಾದ ಫಾರಿನ್ ಬ್ರ್ಯಾಂಡ್​ ಮದ್ಯದ ಘಮಲು: 573 ವಿದೇಶಿ ಬ್ರ್ಯಾಂಡ್​​ ನೋಂದಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.