ETV Bharat / bharat

ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ಕೆಳಗಿಳಿಸಿದ ಅಜಿತ್ ಪವಾರ್ ಬಣ..

author img

By

Published : Jul 5, 2023, 11:01 PM IST

ಎನ್‌ಸಿಪಿ ಅಧ್ಯಕ್ಷ ಸ್ಥಾನದಿಂದ ಶರದ್ ಪವಾರ್ ಅವರನ್ನು ಅಜಿತ್ ಪವಾರ್ ಬಣ ಕೆಳಗಿಳಿಸಿದೆ.

ಶರದ್ ಪವಾರ್ -ಅಜಿತ್ ಪವಾರ್
ಶರದ್ ಪವಾರ್ -ಅಜಿತ್ ಪವಾರ್

ಮುಂಬೈ : ಅಜಿತ್ ಪವಾರ್ ಅವರು ಎನ್‌ಸಿಪಿ ಅಧ್ಯಕ್ಷರು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ ಮತ್ತು ಅಂತಹ ಪತ್ರವನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಮೂಲಗಳ ಪ್ರಕಾರ, ಶರದ್ ಪವಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಜಿತ್ ಪವಾರ್ ಅವರ ಆಯ್ಕೆಯ ನಿರ್ಣಯವನ್ನು ಪಕ್ಷದ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಇಡೀ ಎನ್​ಸಿಪಿ ವಿರುದ್ಧ ಮೊಕದ್ದಮೆ ಹೂಡಿರುವುದು ಈಗ ಸ್ಪಷ್ಟವಾಗಿದೆ.

ಅಜಿತ್ ಪವಾರ್ ಎನ್‌ಸಿಪಿ ಅಧ್ಯಕ್ಷ ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈಗ ಚುನಾವಣಾ ಆಯೋಗ ಅದರ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ. ಜೂನ್ 30 ರಂದು ಅಂದರೆ ಇಂದು ಎನ್‌ಸಿಪಿಯ 40 ಶಾಸಕರ ಸಹಿ ಪತ್ರವನ್ನು ಅಜಿತ್ ಪವಾರ್ ಕೂಡ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ ಪಕ್ಷದ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

ಎನ್‌ಸಿಪಿ ಬಂಡಾಯ ನಾಯಕರ ಪತ್ರದ ಪ್ರಕಾರ, ಅವರು ಜೂನ್ 30 ರಂದು ಅಜಿತ್ ಪವಾರ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಹೆಸರಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಅಂದರೆ ಆಡಳಿತಾರೂಢ ಮೈತ್ರಿಕೂಟ ಬೆಂಬಲ ಸೂಚಿಸುವ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕ್ರಮಕ್ಕೆ ಎರಡು ದಿನಗಳ ಮೊದಲು. ಆ ದಿನ ಸುಮಾರು 40 ಶಾಸಕರು, ಸಂಸದರು ಮತ್ತು ಎಂಎಲ್‌ಸಿಗಳು ಬಂಡಾಯ ನಾಯಕರನ್ನು ಬೆಂಬಲಿಸುವ ಅಫಿಡವಿಟ್‌ಗಳಿಗೆ ಸಹಿ ಹಾಕಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಶರದ್ ಪವಾರ್ ಅವರನ್ನು ಕೆಳಗಿಳಿಸಿ ಅದೇ ಜಾಗಕ್ಕೆ ಅಜಿತ್ ಪವಾರ್ ಅವರನ್ನು ಕೂರಿಸುವುದು ಪಕ್ಷಕ್ಕೆ ಎಫೆಕ್ಟ್ ನೀಡುತ್ತದೆ. ಆದರೆ, ಬಂಡಾಯ ಬಣವು ತಾವೇ ನಿಜವಾದ ಎನ್‌ಸಿಪಿ ಎಂದು ಪದೇ ಪದೆ ಹೇಳಿಕೊಳ್ಳುತ್ತಿದ್ದು, ಚುನಾವಣಾ ಆಯೋಗದಿಂದ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Maharashtra Politics: ಅಜಿತ್ ಸಭೆಯಲ್ಲಿ 29, ಶರದ್ ಸಭೆಯಲ್ಲಿ 11 ಶಾಸಕರ ಹಾಜರಿ: 13 ಶಾಸಕರೆಲ್ಲಿ?

ಬಂಡಾಯ ಬಣ ಇಂದು 29 ಶಾಸಕರ ಪರೇಡ್ ನಡೆಸಿದ್ದು, ಶರದ್ ಪವಾರ್ ಅವರನ್ನು ಬೆಂಬಲಿಸಲು ಕೇವಲ 11 ಮಂದಿ ಮಾತ್ರ ಬಂದಿದ್ದಾರೆ. ಆದರೆ ಕೆಲವು ಶಾಸಕರು ಎರಡೂ ಕಡೆ ಕಾಣಿಸಿಕೊಂಡಿದ್ದಾರೆ. ಮತ್ತೆ ಕೆಲವರು ಎರಡು ಕಡೆ ಹಾಜರಾಗಿಲ್ಲ.

ದಕ್ಷಿಣ ಮುಂಬೈನ ಚೌಹಾಣ್​ ಸೆಂಟರ್‌ನಲ್ಲಿ ಮಾತನಾಡಿದ್ದ ಪವಾರ್, ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿಯನ್ನು ಭ್ರಷ್ಟ ಪಕ್ಷ ಎಂದು ಕರೆದರೂ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಹೋಗುತ್ತಿದ್ದಾರೆ ಎಂದು ತಮ್ಮ ಸೋದರಳಿಯ ಅಜಿಕ್ ಪವಾರ್ ಅವರನ್ನು ಕುರಿತು ಟೀಕಿಸಿದ್ದರು.

ಇದನ್ನೂ ಓದಿ: Pawar vs Pawar: 'ಎನ್‌ಸಿಪಿ ಅಧ್ಯಕ್ಷರಾಗಿ ಅಜಿತ್ ಪವಾರ್ ಆಯ್ಕೆಗೆ ನಿರ್ಣಯ'.. ಪಕ್ಷದ ಮೇಲೆ ಹಕ್ಕು ಸಾಧಿಸಲು ಚುನಾವಣಾ ಆಯೋಗಕ್ಕೆ ಅರ್ಜಿ

ಮುಂಬೈ : ಅಜಿತ್ ಪವಾರ್ ಅವರು ಎನ್‌ಸಿಪಿ ಅಧ್ಯಕ್ಷರು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ ಮತ್ತು ಅಂತಹ ಪತ್ರವನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಮೂಲಗಳ ಪ್ರಕಾರ, ಶರದ್ ಪವಾರ್ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಅಜಿತ್ ಪವಾರ್ ಅವರ ಆಯ್ಕೆಯ ನಿರ್ಣಯವನ್ನು ಪಕ್ಷದ ಶಾಸಕರು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಇಡೀ ಎನ್​ಸಿಪಿ ವಿರುದ್ಧ ಮೊಕದ್ದಮೆ ಹೂಡಿರುವುದು ಈಗ ಸ್ಪಷ್ಟವಾಗಿದೆ.

ಅಜಿತ್ ಪವಾರ್ ಎನ್‌ಸಿಪಿ ಅಧ್ಯಕ್ಷ ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಈಗ ಚುನಾವಣಾ ಆಯೋಗ ಅದರ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ. ಜೂನ್ 30 ರಂದು ಅಂದರೆ ಇಂದು ಎನ್‌ಸಿಪಿಯ 40 ಶಾಸಕರ ಸಹಿ ಪತ್ರವನ್ನು ಅಜಿತ್ ಪವಾರ್ ಕೂಡ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ ಪಕ್ಷದ ವಿರುದ್ಧ ಮೊಕದ್ದಮೆ ಹೂಡಲಾಗಿದೆ.

ಎನ್‌ಸಿಪಿ ಬಂಡಾಯ ನಾಯಕರ ಪತ್ರದ ಪ್ರಕಾರ, ಅವರು ಜೂನ್ 30 ರಂದು ಅಜಿತ್ ಪವಾರ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಹೆಸರಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಅಂದರೆ ಆಡಳಿತಾರೂಢ ಮೈತ್ರಿಕೂಟ ಬೆಂಬಲ ಸೂಚಿಸುವ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕ್ರಮಕ್ಕೆ ಎರಡು ದಿನಗಳ ಮೊದಲು. ಆ ದಿನ ಸುಮಾರು 40 ಶಾಸಕರು, ಸಂಸದರು ಮತ್ತು ಎಂಎಲ್‌ಸಿಗಳು ಬಂಡಾಯ ನಾಯಕರನ್ನು ಬೆಂಬಲಿಸುವ ಅಫಿಡವಿಟ್‌ಗಳಿಗೆ ಸಹಿ ಹಾಕಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಶರದ್ ಪವಾರ್ ಅವರನ್ನು ಕೆಳಗಿಳಿಸಿ ಅದೇ ಜಾಗಕ್ಕೆ ಅಜಿತ್ ಪವಾರ್ ಅವರನ್ನು ಕೂರಿಸುವುದು ಪಕ್ಷಕ್ಕೆ ಎಫೆಕ್ಟ್ ನೀಡುತ್ತದೆ. ಆದರೆ, ಬಂಡಾಯ ಬಣವು ತಾವೇ ನಿಜವಾದ ಎನ್‌ಸಿಪಿ ಎಂದು ಪದೇ ಪದೆ ಹೇಳಿಕೊಳ್ಳುತ್ತಿದ್ದು, ಚುನಾವಣಾ ಆಯೋಗದಿಂದ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Maharashtra Politics: ಅಜಿತ್ ಸಭೆಯಲ್ಲಿ 29, ಶರದ್ ಸಭೆಯಲ್ಲಿ 11 ಶಾಸಕರ ಹಾಜರಿ: 13 ಶಾಸಕರೆಲ್ಲಿ?

ಬಂಡಾಯ ಬಣ ಇಂದು 29 ಶಾಸಕರ ಪರೇಡ್ ನಡೆಸಿದ್ದು, ಶರದ್ ಪವಾರ್ ಅವರನ್ನು ಬೆಂಬಲಿಸಲು ಕೇವಲ 11 ಮಂದಿ ಮಾತ್ರ ಬಂದಿದ್ದಾರೆ. ಆದರೆ ಕೆಲವು ಶಾಸಕರು ಎರಡೂ ಕಡೆ ಕಾಣಿಸಿಕೊಂಡಿದ್ದಾರೆ. ಮತ್ತೆ ಕೆಲವರು ಎರಡು ಕಡೆ ಹಾಜರಾಗಿಲ್ಲ.

ದಕ್ಷಿಣ ಮುಂಬೈನ ಚೌಹಾಣ್​ ಸೆಂಟರ್‌ನಲ್ಲಿ ಮಾತನಾಡಿದ್ದ ಪವಾರ್, ಪ್ರಧಾನಿ ನರೇಂದ್ರ ಮೋದಿ ಎನ್‌ಸಿಪಿಯನ್ನು ಭ್ರಷ್ಟ ಪಕ್ಷ ಎಂದು ಕರೆದರೂ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಹೋಗುತ್ತಿದ್ದಾರೆ ಎಂದು ತಮ್ಮ ಸೋದರಳಿಯ ಅಜಿಕ್ ಪವಾರ್ ಅವರನ್ನು ಕುರಿತು ಟೀಕಿಸಿದ್ದರು.

ಇದನ್ನೂ ಓದಿ: Pawar vs Pawar: 'ಎನ್‌ಸಿಪಿ ಅಧ್ಯಕ್ಷರಾಗಿ ಅಜಿತ್ ಪವಾರ್ ಆಯ್ಕೆಗೆ ನಿರ್ಣಯ'.. ಪಕ್ಷದ ಮೇಲೆ ಹಕ್ಕು ಸಾಧಿಸಲು ಚುನಾವಣಾ ಆಯೋಗಕ್ಕೆ ಅರ್ಜಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.