ETV Bharat / bharat

ಸಿಎಂ ಮಮತಾ ಬ್ಯಾನರ್ಜಿ ದುಬೈಗೆ ತೆರಳಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; 3 ಗಂಟೆ ವಿಳಂಬವಾದ ಪ್ರಯಾಣ

author img

By ETV Bharat Karnataka Team

Published : Sep 12, 2023, 4:47 PM IST

ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರು ವಿವಿಧ ವಾಣಿಜ್ಯ ಶೃಂಗಸಭೆಯಲ್ಲಿ ಭಾಗಿಯಾಗಲು ಸ್ಪೇನ್​ ಮತ್ತು ದುಬೈಗೆ ತೆರಳುತ್ತಿದ್ದಾರೆ. ಮಮತಾ ಜೊತೆ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್​ ಗಂಗೂಲಿ ಸಹ ಸಿಎಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

mamata-banerjee-attending-several-bossiness-summit-in-spain-and-dubai
mamata-banerjee-attending-several-bossiness-summit-in-spain-and-dubai

ಕೋಲ್ಕತ್ತಾ( ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ದುಬೈಗೆ ತೆರಳಬೇಕಿದ್ದ ವಿಮಾನವೂ ತಾಂತ್ರಿಕ ಕಾರಣಗಳಿಂದಾಗಿ ಮೂರು ಗಂಟೆ ವಿಳಂಬಗೊಂಡಿದೆ ಎಂದು ವರದಿ ಆಗಿದೆ. ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರು ವಾಣಿಜ್ಯ ಶೃಂಗಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ವಿದೇಶ ಪ್ರವಾಸ ನಡೆಸಿದ್ದರು, ದುಬೈ ಮತ್ತು ಸ್ಪೇನ್​ಗೆ 12 ದಿನದ ಪ್ರವಾಸ ನಡೆಸುವ ಉದ್ದೇಶದಿಂದ ಅವರು ಇಂದು ಬೆಳಗ್ಗೆ 8.30ಕ್ಕೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ನಡೆಸಬೇಕಿತ್ತು.

ಅವರು ಇನ್ನೇನು ಹೊರಡುವ ಮುಂದೆ ತಾಂತ್ರಿಕ ಕಾರಣದಿಂದಾಗಿ ವಿಮಾನ ಮೂರು ಗಂಟೆ ವಿಳಂಬವಾಗಿದೆ. ಮುಖ್ಯಮಂತ್ರಿಗಳು ಇಂದು ರಾತ್ರಿ ದುಬೈಗೆ ಪ್ರಯಾಣ ನಡೆಸಬೇಕಿತ್ತು. ಅಲ್ಲಿಂದ ಅಂದರೆ ದುಬೈನಿಂದು ಬುಧವಾರ ಅವರು ಸ್ಪೇನ್​ ರಾಜಧಾನಿ ಮ್ಯಾಡ್ರಿಡ್​​ಗೆ ಪ್ರಯಾಣ ನಡೆಸಬೇಕಿತು. ಇದೀಗ ವಿಮಾನ ವಿಳಂಬದಿಂದಾಗಿ ಸ್ಪೇನ್​ಗೆ ಸಂಪರ್ಕಿಸುವ ವಿಮಾನದ ಲಭ್ಯತೆ ಇಲ್ಲದ ಕಾರಣ ಇದೀಗ ಅವರು ದುಬೈನಲ್ಲಿ ಒಂದು ದಿನ ಕಳೆಯಬೇಕಿದೆ.

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ವಿದೇಶ ಪ್ರಯಾಣ ಬೆಳಸಿ ಐದು ವರ್ಷಗಳಾಗಿದೆ. ಈ ವರ್ಷ ಕೋಲ್ಕತ್ತಾ ಇಂಟರ್​ನ್ಯಾಷನ್ ಬುಕ್​ ಫೇರ್​ ಮಾದರಿ ದೇಶ ಸ್ಪೇನ್​ ಆಗಿದೆ. ಅವರು ಈ ಉದ್ಯಮದಲ್ಲಿ ಉತ್ತಮ ಉತ್ಪಾದಕರಾಗಿದ್ದು, ಅಲ್ಲಿ ನಾವು ವಾಣಿಜ್ಯ ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು

ವಿದೇಶಿ ಪ್ರತಿನಿಧಿಗಳು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದಾರೆ. ಆದರೆ, ನಾವು ಅಲ್ಲಿಗೆ ಹೋಗಲು ಆಗಿರಲಿಲ್ಲ. ಇದೇ ಕಾರಣ ಇದೀಗ ಹೋಗುತ್ತಿದ್ದೇವೆ. ಇದೇ ವೇಳೆ ದುಬೈನಲ್ಲಿನ ಬ್ಯುಸಿನೆಸ್​ ಕಾನ್ಫರೆನ್ಸ್​ನಲ್ಲಿ ಭಾಗಿಯಾಗುತ್ತಿದ್ದು, ಈ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುವುದಾಗಿ ತಿಳಿಸಿದರು

ಮುಖ್ಯಮಂತ್ರಿಗಳ ಈ ವಿದೇಶಿ ಪ್ರವಾಸದ ವೇಳೆ ಮುಖ್ಯ ಕಾರ್ಯದರ್ಶಿ ಹರಿಕೃಷ್ಣ ದ್ವಿವೇದಿ ಮತ್ತು ಇತರ ಸರ್ಕಾರಿ ಅಧಿಕಾರಿಗಳು ಕೂಡ ಜೊತೆಯಾಗಲಿದ್ದಾರೆ. ಸೌರವ್​ ಗಂಗೂಲಿ ಜೊತೆಗೆ ಪೂರ್ವ ಬಂಗಾಳ ಪ್ರತಿನಿಧಿ ಮೊಹುನ್​ ಭಗನ್​ ಕೂಡ ಇರಲಿದ್ದಾರೆ. ಸೌರವ್​ ಗಂಗೂಲಿ ಲಂಡನ್​ನಿಂದ ನೇರವಾಗಿ ಮ್ಯಾಡ್ರಿಡ್​​ಗೆ ತೆರಳಲಿದ್ದಾರೆ.

ಸೋಮವಾರ ಸಿಎಂ ಅವರ ಈ ಪ್ರವಾಸ ಕುರಿತು ಸಂಪೂರ್ಣ ಮಾಹಿತಿಯನ್ನು ರಾಜ್ಯ ಕಾರ್ಯದರ್ಶಿ ನಬನ್ನ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದರು. ಸಿಎಂ ಮಮತಾ ಬ್ಯಾನರ್ಜಿ ಮೂರು ದಿನ ಮ್ಯಾಡ್ರಿಡ್​ನಲ್ಲಿ ತಂಗಲಿದ್ದು, ಅಲ್ಲಿ ಇಂಡಸ್ಟ್ರಿ ಕಾನ್ಫರೆನ್ಸ್​ನಲ್ಲಿ ಭೇಟಿಯಾಗಿದ್ದಾರೆ. ಅಲ್ಲಿಂದ ಅವರು ಬಾರ್ಸಿಲೋನಾಕ್ಕೆ ತೆರಳಿದ್ದು ಬೆಂಗಾಲ್​ ಗ್ಲೋಬಲ್​ ಬ್ಯುಸಿನೆಸ್​ ಸಮ್ಮಿಟ್​ (ಬಿಜಿಬಿಎಸ್​)ನಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿ ಅವರು ಬೆಂಗಾಲ್​ ಫುಟ್​ಬಾಲ್​ ಅಭಿವೃದ್ಧಿ ನಿಟ್ಟಿನಲ್ಲಿ ಲಾ ಲಿಂಗ ಅಧ್ಯಕ್ಷ ಜಾವೇರ್​ ಟೆಬಸ್​ ಅವರನ್ನು ಭೇಟಿಯಾಗಲಿದ್ದಾರೆ

ವಾಪಸ್​ ಬರುವ ಮಾರ್ಗದಲ್ಲಿ ದುಬೈನಲ್ಲಿ ಬಿಜಿಬಿಎಸ್​ ಸಂಬಂಧ ಕೆಲವು ಸ್ಥಳೀಯ ಇಂಡಸ್ಟ್ರಿಯನ್​ಗಳೊಂದಿಗೆ ಸಭೆಯ ನಡೆಸಲಿದ್ದು, ಸೆ. 23ಕ್ಕೆ ಅವರು ಕೋಲ್ಕತ್ತಾಗೆ ಮರಳಲಿದ್ದಾರೆ ಎಂದರು. (ಐಎಎನ್ಎಸ್​)

ಇದನ್ನೂ ಓದಿ: ವಸತಿ ಫ್ಲಾಟ್​ಗಳ ಹೆಸರಲ್ಲಿ ವಂಚನೆ ಆರೋಪ.. ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್​ ಜಹಾನ್​

ಕೋಲ್ಕತ್ತಾ( ಪಶ್ಚಿಮ ಬಂಗಾಳ): ಮಮತಾ ಬ್ಯಾನರ್ಜಿ ದುಬೈಗೆ ತೆರಳಬೇಕಿದ್ದ ವಿಮಾನವೂ ತಾಂತ್ರಿಕ ಕಾರಣಗಳಿಂದಾಗಿ ಮೂರು ಗಂಟೆ ವಿಳಂಬಗೊಂಡಿದೆ ಎಂದು ವರದಿ ಆಗಿದೆ. ಪಶ್ಚಿಮ ಬಂಗಾಳಕ್ಕೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅವರು ವಾಣಿಜ್ಯ ಶೃಂಗಸಭೆಯಲ್ಲಿ ಭಾಗಿಯಾಗುವ ಉದ್ದೇಶದಿಂದ ವಿದೇಶ ಪ್ರವಾಸ ನಡೆಸಿದ್ದರು, ದುಬೈ ಮತ್ತು ಸ್ಪೇನ್​ಗೆ 12 ದಿನದ ಪ್ರವಾಸ ನಡೆಸುವ ಉದ್ದೇಶದಿಂದ ಅವರು ಇಂದು ಬೆಳಗ್ಗೆ 8.30ಕ್ಕೆ ನೇತಾಜಿ ಸುಭಾಷ್​ ಚಂದ್ರ ಬೋಸ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ನಡೆಸಬೇಕಿತ್ತು.

ಅವರು ಇನ್ನೇನು ಹೊರಡುವ ಮುಂದೆ ತಾಂತ್ರಿಕ ಕಾರಣದಿಂದಾಗಿ ವಿಮಾನ ಮೂರು ಗಂಟೆ ವಿಳಂಬವಾಗಿದೆ. ಮುಖ್ಯಮಂತ್ರಿಗಳು ಇಂದು ರಾತ್ರಿ ದುಬೈಗೆ ಪ್ರಯಾಣ ನಡೆಸಬೇಕಿತ್ತು. ಅಲ್ಲಿಂದ ಅಂದರೆ ದುಬೈನಿಂದು ಬುಧವಾರ ಅವರು ಸ್ಪೇನ್​ ರಾಜಧಾನಿ ಮ್ಯಾಡ್ರಿಡ್​​ಗೆ ಪ್ರಯಾಣ ನಡೆಸಬೇಕಿತು. ಇದೀಗ ವಿಮಾನ ವಿಳಂಬದಿಂದಾಗಿ ಸ್ಪೇನ್​ಗೆ ಸಂಪರ್ಕಿಸುವ ವಿಮಾನದ ಲಭ್ಯತೆ ಇಲ್ಲದ ಕಾರಣ ಇದೀಗ ಅವರು ದುಬೈನಲ್ಲಿ ಒಂದು ದಿನ ಕಳೆಯಬೇಕಿದೆ.

ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ವಿದೇಶ ಪ್ರಯಾಣ ಬೆಳಸಿ ಐದು ವರ್ಷಗಳಾಗಿದೆ. ಈ ವರ್ಷ ಕೋಲ್ಕತ್ತಾ ಇಂಟರ್​ನ್ಯಾಷನ್ ಬುಕ್​ ಫೇರ್​ ಮಾದರಿ ದೇಶ ಸ್ಪೇನ್​ ಆಗಿದೆ. ಅವರು ಈ ಉದ್ಯಮದಲ್ಲಿ ಉತ್ತಮ ಉತ್ಪಾದಕರಾಗಿದ್ದು, ಅಲ್ಲಿ ನಾವು ವಾಣಿಜ್ಯ ಸಭೆಯಲ್ಲಿ ಭಾಗಿಯಾಗುವುದಾಗಿ ತಿಳಿಸಿದರು

ವಿದೇಶಿ ಪ್ರತಿನಿಧಿಗಳು ಆಗಾಗ್ಗೆ ಇಲ್ಲಿಗೆ ಬರುತ್ತಿದ್ದಾರೆ. ಆದರೆ, ನಾವು ಅಲ್ಲಿಗೆ ಹೋಗಲು ಆಗಿರಲಿಲ್ಲ. ಇದೇ ಕಾರಣ ಇದೀಗ ಹೋಗುತ್ತಿದ್ದೇವೆ. ಇದೇ ವೇಳೆ ದುಬೈನಲ್ಲಿನ ಬ್ಯುಸಿನೆಸ್​ ಕಾನ್ಫರೆನ್ಸ್​ನಲ್ಲಿ ಭಾಗಿಯಾಗುತ್ತಿದ್ದು, ಈ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡುವುದಾಗಿ ತಿಳಿಸಿದರು

ಮುಖ್ಯಮಂತ್ರಿಗಳ ಈ ವಿದೇಶಿ ಪ್ರವಾಸದ ವೇಳೆ ಮುಖ್ಯ ಕಾರ್ಯದರ್ಶಿ ಹರಿಕೃಷ್ಣ ದ್ವಿವೇದಿ ಮತ್ತು ಇತರ ಸರ್ಕಾರಿ ಅಧಿಕಾರಿಗಳು ಕೂಡ ಜೊತೆಯಾಗಲಿದ್ದಾರೆ. ಸೌರವ್​ ಗಂಗೂಲಿ ಜೊತೆಗೆ ಪೂರ್ವ ಬಂಗಾಳ ಪ್ರತಿನಿಧಿ ಮೊಹುನ್​ ಭಗನ್​ ಕೂಡ ಇರಲಿದ್ದಾರೆ. ಸೌರವ್​ ಗಂಗೂಲಿ ಲಂಡನ್​ನಿಂದ ನೇರವಾಗಿ ಮ್ಯಾಡ್ರಿಡ್​​ಗೆ ತೆರಳಲಿದ್ದಾರೆ.

ಸೋಮವಾರ ಸಿಎಂ ಅವರ ಈ ಪ್ರವಾಸ ಕುರಿತು ಸಂಪೂರ್ಣ ಮಾಹಿತಿಯನ್ನು ರಾಜ್ಯ ಕಾರ್ಯದರ್ಶಿ ನಬನ್ನ ಪತ್ರಿಕಾಗೋಷ್ಠಿಯಲ್ಲಿ ನೀಡಿದ್ದರು. ಸಿಎಂ ಮಮತಾ ಬ್ಯಾನರ್ಜಿ ಮೂರು ದಿನ ಮ್ಯಾಡ್ರಿಡ್​ನಲ್ಲಿ ತಂಗಲಿದ್ದು, ಅಲ್ಲಿ ಇಂಡಸ್ಟ್ರಿ ಕಾನ್ಫರೆನ್ಸ್​ನಲ್ಲಿ ಭೇಟಿಯಾಗಿದ್ದಾರೆ. ಅಲ್ಲಿಂದ ಅವರು ಬಾರ್ಸಿಲೋನಾಕ್ಕೆ ತೆರಳಿದ್ದು ಬೆಂಗಾಲ್​ ಗ್ಲೋಬಲ್​ ಬ್ಯುಸಿನೆಸ್​ ಸಮ್ಮಿಟ್​ (ಬಿಜಿಬಿಎಸ್​)ನಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿ ಅವರು ಬೆಂಗಾಲ್​ ಫುಟ್​ಬಾಲ್​ ಅಭಿವೃದ್ಧಿ ನಿಟ್ಟಿನಲ್ಲಿ ಲಾ ಲಿಂಗ ಅಧ್ಯಕ್ಷ ಜಾವೇರ್​ ಟೆಬಸ್​ ಅವರನ್ನು ಭೇಟಿಯಾಗಲಿದ್ದಾರೆ

ವಾಪಸ್​ ಬರುವ ಮಾರ್ಗದಲ್ಲಿ ದುಬೈನಲ್ಲಿ ಬಿಜಿಬಿಎಸ್​ ಸಂಬಂಧ ಕೆಲವು ಸ್ಥಳೀಯ ಇಂಡಸ್ಟ್ರಿಯನ್​ಗಳೊಂದಿಗೆ ಸಭೆಯ ನಡೆಸಲಿದ್ದು, ಸೆ. 23ಕ್ಕೆ ಅವರು ಕೋಲ್ಕತ್ತಾಗೆ ಮರಳಲಿದ್ದಾರೆ ಎಂದರು. (ಐಎಎನ್ಎಸ್​)

ಇದನ್ನೂ ಓದಿ: ವಸತಿ ಫ್ಲಾಟ್​ಗಳ ಹೆಸರಲ್ಲಿ ವಂಚನೆ ಆರೋಪ.. ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್​ ಜಹಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.