ETV Bharat / bharat

'ಕೈ' ಬಿಟ್ಟು ಕಪಿಲ್ ಸಿಬಲ್ 'ಸೈಕಲ್' ಬ್ಯಾಲೆನ್ಸ್!

ರಾಜ್ಯಸಭೆ ಚುನಾವಣೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾಗಿದ್ದ ಕಪಿಲ್​ ಸಿಬಲ್ ಇಂದು​ ನಾಮಪತ್ರ ಸಲ್ಲಿಸಿ ಅಚ್ಚರಿ ಹುಟ್ಟಿಸಿದರು.

author img

By

Published : May 25, 2022, 12:58 PM IST

Updated : May 25, 2022, 3:32 PM IST

Kapil Sibal files nomination for Rajya Sabha election
ರಾಜ್ಯಸಭೆ ಚುನಾವಣಾ ಕಣಕ್ಕೆ ಕಪಿಲ್ ಸಿಬಲ್

ಲಖನೌ (ಉತ್ತರ ಪ್ರದೇಶ): ಕಾಂಗ್ರೆಸ್​​ ಪಕ್ಷಕ್ಕೆ ಹಿರಿಯ ನಾಯಕ ಕಪಿಲ್​ ಸಿಬಲ್​ ಬಿಗ್​ ಶಾಕ್​ ನೀಡಿದ್ದಾರೆ. ಮೇ 16ರಂದೇ ಕೈ ಪಕ್ಷಕ್ಕೆ​​ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಅವರು, ಇದೀಗ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಇಂದು ಉತ್ತರ ಪ್ರದೇಶದ ಲಖನೌದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಸಮ್ಮುಖದಲ್ಲಿ ಸಿಬಲ್‌ ನಾಮಪತ್ರ​ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 16ರಂದೇ ಕಾಂಗ್ರೆಸ್​ ತೊರೆದಿರುವ ಬಗ್ಗೆ ಬಹಿರಂಗ ಪಡಿಸಿದರು. ಅಲ್ಲದೇ, ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿರುವೆ. ನನಗೆ ಬೆಂಬಲ ನೀಡಿರುವ ಅಖಿಲೇಶ್​ ಯಾದವ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

  • #WATCH | Uttar Pradesh: Congress leader Kapil Sibal files nomination for Rajya Sabha election, in the presence of Samajwadi Party (SP) chief Akhilesh Yadav, in Lucknow. pic.twitter.com/8yRDoSwE3g

    — ANI UP/Uttarakhand (@ANINewsUP) May 25, 2022 " class="align-text-top noRightClick twitterSection" data=" ">

ಇದೇ ವೇಳೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರಿಗೂ ಕೃತಜ್ಞತೆ ಸಲ್ಲಿಸಿರುವ ಕಪಿಲ್​ ಸಿಬಲ್, ಈಗಷ್ಟೇ ಅಲ್ಲ, ಹಲವಾರು ವರ್ಷಗಳಿಂದ ಅಜಂ ಖಾನ್ ನನಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು. ಪ್ರತಿಯೊಬ್ಬರು ಆಯಾ ಪಕ್ಷಗಳ ಸದಸ್ಯರಾಗಿ ಆ ಪಕ್ಷದ ಶಿಸ್ತನ್ನು ಪಾಲಿಸಬೇಕೆಂಬ ನಿರ್ಬಂಧಕ್ಕೆ ಒಳಗಿರುತ್ತವೆ. ಆದರೂ, ಸ್ವತಂತ್ರ ಧ್ವನಿಯನ್ನು ಹೊಂದಿರುವುದು ತುಂಬ ಮುಖ್ಯ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​ಗೆ ಕುಟುಕಿದರು.

ಮೋದಿ ವಿರುದ್ಧ ವಾಗ್ದಾಳಿ: ಇದೇ ವೇಳೆ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್​ ಸಿಬಲ್, ನಾವು ಪ್ರತಿಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮೋದಿ ಸರ್ಕಾರವನ್ನು ವಿರೋಧಿಸಲು ಬಯಸುತ್ತೇವೆ. ಜೊತೆಗೆ ಬಿಜೆಪಿ ವಿರೋಧಿ ವಾತಾವರಣ ಸೃಷ್ಟಿಸಲು ಯತ್ನಿಸುತ್ತೇವೆ. ಆ ನಿಟ್ಟಿನಲ್ಲಿ ನಾನು ವೈಯಕ್ತಿಕವಾಗಿಯೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಪಿಲ್​ ಆಯ್ಕೆಯಾಗುತ್ತಾರೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಮಾತನಾಡಿ, ತಮ್ಮ ಪಕ್ಷದ ಬೆಂಬಲದಿಂದ ಕಪಿಲ್​ ಸಿಬಲ್ ಆಯ್ಕೆಯಾಗುತ್ತಾರೆ. ಅವರು ಹಿರಿಯ ವಕೀಲರು. ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಸಮರ್ಥವಾಗಿ ಮಂಡಿಸಿದ್ದಾರೆ. ಮುಂದೆ ಕೂಡ ಸಮಾಜವಾದಿ ಪಕ್ಷದ ವಿಚಾರಗಳು ಮತ್ತು ತಮ್ಮ ವಿಚಾರಗಳನ್ನು ಪ್ರಬಲವಾಗಿ ಮಂಡಿಸುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್​ ನಾಯಕತ್ವ ಟೀಕಿಸಿದ್ದ ಸಿಬಿಲ್​: 2016ರಲ್ಲಿ ಉತ್ತರ ಪ್ರದೇಶದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕಪಿಲ್​ ಸಿಬಲ್​ ಅಧಿಕಾರಾವಧಿ ಜುಲೈನಲ್ಲಿ ಮುಕ್ತಾಯವಾಗಿದೆ. ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದ ಅವರು ಕೇಂದ್ರ ಸಚಿವರಾದಿಯಾಗಿ ಅನೇಕ ಹುದ್ದೆಗಳು ಅಲಂಕರಿಸಿದ್ದರು.

ಆದರೆ, ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ನಾಯಕತ್ವದ ವಿರುದ್ಧ ಟೀಕೆ ಮಾಡಿದ್ದರು. ಭಿನ್ನಮತೀಯರ ಜಿ-23 ಗುಂಪಿನ ಸದಸ್ಯರಾಗಿದ್ದ ಸಿಬಲ್, ಪಕ್ಷದಲ್ಲಿ ಸಾಂಸ್ಥಿಕ ಸುಧಾರಣೆಗೆ ಒತ್ತಾಯಿಸಿದರು. ಗಾಂಧಿಯೇತರರನ್ನು ಪಕ್ಷದ ನೂತನ ಮುಖ್ಯಸ್ಥರನ್ನಾಗಿ ಮಾಡುವಂತೆಯೂ ಆಗ್ರಹಿಸಿದ್ದರು.

ಇದನ್ನೂ ಓದಿ: ರಾಜಕೀಯ ವ್ಯವಹಾರಗಳ ಗುಂಪು, ಟಾಸ್ಕ್​ ಫೋರ್ಸ್​​ ರಚಿಸಿದ ಸೋನಿಯಾ: ಇಬ್ಬರು ರೆಬಲ್​ಗಳಿಗೂ ಸ್ಥಾನ

ಲಖನೌ (ಉತ್ತರ ಪ್ರದೇಶ): ಕಾಂಗ್ರೆಸ್​​ ಪಕ್ಷಕ್ಕೆ ಹಿರಿಯ ನಾಯಕ ಕಪಿಲ್​ ಸಿಬಲ್​ ಬಿಗ್​ ಶಾಕ್​ ನೀಡಿದ್ದಾರೆ. ಮೇ 16ರಂದೇ ಕೈ ಪಕ್ಷಕ್ಕೆ​​ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಅವರು, ಇದೀಗ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ.

ಇಂದು ಉತ್ತರ ಪ್ರದೇಶದ ಲಖನೌದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್​ ಸಮ್ಮುಖದಲ್ಲಿ ಸಿಬಲ್‌ ನಾಮಪತ್ರ​ ಸಲ್ಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇ 16ರಂದೇ ಕಾಂಗ್ರೆಸ್​ ತೊರೆದಿರುವ ಬಗ್ಗೆ ಬಹಿರಂಗ ಪಡಿಸಿದರು. ಅಲ್ಲದೇ, ರಾಜ್ಯಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿರುವೆ. ನನಗೆ ಬೆಂಬಲ ನೀಡಿರುವ ಅಖಿಲೇಶ್​ ಯಾದವ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

  • #WATCH | Uttar Pradesh: Congress leader Kapil Sibal files nomination for Rajya Sabha election, in the presence of Samajwadi Party (SP) chief Akhilesh Yadav, in Lucknow. pic.twitter.com/8yRDoSwE3g

    — ANI UP/Uttarakhand (@ANINewsUP) May 25, 2022 " class="align-text-top noRightClick twitterSection" data=" ">

ಇದೇ ವೇಳೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರಿಗೂ ಕೃತಜ್ಞತೆ ಸಲ್ಲಿಸಿರುವ ಕಪಿಲ್​ ಸಿಬಲ್, ಈಗಷ್ಟೇ ಅಲ್ಲ, ಹಲವಾರು ವರ್ಷಗಳಿಂದ ಅಜಂ ಖಾನ್ ನನಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು. ಪ್ರತಿಯೊಬ್ಬರು ಆಯಾ ಪಕ್ಷಗಳ ಸದಸ್ಯರಾಗಿ ಆ ಪಕ್ಷದ ಶಿಸ್ತನ್ನು ಪಾಲಿಸಬೇಕೆಂಬ ನಿರ್ಬಂಧಕ್ಕೆ ಒಳಗಿರುತ್ತವೆ. ಆದರೂ, ಸ್ವತಂತ್ರ ಧ್ವನಿಯನ್ನು ಹೊಂದಿರುವುದು ತುಂಬ ಮುಖ್ಯ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್​ಗೆ ಕುಟುಕಿದರು.

ಮೋದಿ ವಿರುದ್ಧ ವಾಗ್ದಾಳಿ: ಇದೇ ವೇಳೆ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕಪಿಲ್​ ಸಿಬಲ್, ನಾವು ಪ್ರತಿಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಮೋದಿ ಸರ್ಕಾರವನ್ನು ವಿರೋಧಿಸಲು ಬಯಸುತ್ತೇವೆ. ಜೊತೆಗೆ ಬಿಜೆಪಿ ವಿರೋಧಿ ವಾತಾವರಣ ಸೃಷ್ಟಿಸಲು ಯತ್ನಿಸುತ್ತೇವೆ. ಆ ನಿಟ್ಟಿನಲ್ಲಿ ನಾನು ವೈಯಕ್ತಿಕವಾಗಿಯೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಕಪಿಲ್​ ಆಯ್ಕೆಯಾಗುತ್ತಾರೆ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​ ಯಾದವ್ ಮಾತನಾಡಿ, ತಮ್ಮ ಪಕ್ಷದ ಬೆಂಬಲದಿಂದ ಕಪಿಲ್​ ಸಿಬಲ್ ಆಯ್ಕೆಯಾಗುತ್ತಾರೆ. ಅವರು ಹಿರಿಯ ವಕೀಲರು. ಸಂಸತ್ತಿನಲ್ಲಿ ತಮ್ಮ ಅಭಿಪ್ರಾಯಗಳನ್ನು ಸಮರ್ಥವಾಗಿ ಮಂಡಿಸಿದ್ದಾರೆ. ಮುಂದೆ ಕೂಡ ಸಮಾಜವಾದಿ ಪಕ್ಷದ ವಿಚಾರಗಳು ಮತ್ತು ತಮ್ಮ ವಿಚಾರಗಳನ್ನು ಪ್ರಬಲವಾಗಿ ಮಂಡಿಸುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್​ ನಾಯಕತ್ವ ಟೀಕಿಸಿದ್ದ ಸಿಬಿಲ್​: 2016ರಲ್ಲಿ ಉತ್ತರ ಪ್ರದೇಶದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕಪಿಲ್​ ಸಿಬಲ್​ ಅಧಿಕಾರಾವಧಿ ಜುಲೈನಲ್ಲಿ ಮುಕ್ತಾಯವಾಗಿದೆ. ಕಾಂಗ್ರೆಸ್​ನ ಹಿರಿಯ ನಾಯಕರಾಗಿದ್ದ ಅವರು ಕೇಂದ್ರ ಸಚಿವರಾದಿಯಾಗಿ ಅನೇಕ ಹುದ್ದೆಗಳು ಅಲಂಕರಿಸಿದ್ದರು.

ಆದರೆ, ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ನಾಯಕತ್ವದ ವಿರುದ್ಧ ಟೀಕೆ ಮಾಡಿದ್ದರು. ಭಿನ್ನಮತೀಯರ ಜಿ-23 ಗುಂಪಿನ ಸದಸ್ಯರಾಗಿದ್ದ ಸಿಬಲ್, ಪಕ್ಷದಲ್ಲಿ ಸಾಂಸ್ಥಿಕ ಸುಧಾರಣೆಗೆ ಒತ್ತಾಯಿಸಿದರು. ಗಾಂಧಿಯೇತರರನ್ನು ಪಕ್ಷದ ನೂತನ ಮುಖ್ಯಸ್ಥರನ್ನಾಗಿ ಮಾಡುವಂತೆಯೂ ಆಗ್ರಹಿಸಿದ್ದರು.

ಇದನ್ನೂ ಓದಿ: ರಾಜಕೀಯ ವ್ಯವಹಾರಗಳ ಗುಂಪು, ಟಾಸ್ಕ್​ ಫೋರ್ಸ್​​ ರಚಿಸಿದ ಸೋನಿಯಾ: ಇಬ್ಬರು ರೆಬಲ್​ಗಳಿಗೂ ಸ್ಥಾನ

Last Updated : May 25, 2022, 3:32 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.