ಲಖನೌ: ಜನರ ಆಶೀರ್ವಾದದಿಂದ ದೇಶದಲ್ಲಿ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆಯುತ್ತಿದ್ದು, ಪ್ರಪಂಚದಾದ್ಯಂತ ಭಾರತದ ಪ್ರತಿಷ್ಠೆ ಹೆಚ್ಚಾಗಲು ಕಾರಣವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಔಟರ್ರಿಂಗ್ ರೋಡ್ ಮತ್ತು ವಿಕ್ಟೋರಿಯಾ ಸ್ಟ್ರೀಟ್ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಪರಿಶೀಲಿಸಲು ಲಖನೌಗೆ ಭೇಟಿ ನೀಡಿದ್ದ ರಾಜನಾಥ್ ಸಿಂಗ್, ದೇಶದ ಮೂರು ಪ್ರಮುಖ ನಗರಗಳಲ್ಲಿ ಲಖನೌ ಕೂಡ ಇರಬೇಕು ಎಂದು ಹೇಳಿದರು.
‘ಇಂದು ನಾವು ನೋಡುತ್ತಿರುವ ಅಭಿವೃದ್ಧಿ ರಾಜ್ಯದ ಎಲ್ಲ ನಾಯಕರು ಮತ್ತು ಅಧಿಕಾರಿಗಳ ಪ್ರಯತ್ನದಿಂದ ಮಾತ್ರ ಸಾಧ್ಯ. ಯಾವ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಇರುತ್ತೋ, ಅಲ್ಲಿ ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಇರಾನ್ನಲ್ಲಿ ಪೇಚಿಗೆ ಸಿಲುಕಿದ ಐವರು ಭಾರತೀಯರು.. ತವರಿಗೆ ಮರಳಲು ಸಹಾಯ ಮಾಡುವಂತೆ ಕೇಂದ್ರಕ್ಕೆ ಮನವಿ
ನಮ್ಮ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಅಭಿವೃದ್ಧಿ ಕಾರ್ಯಗಳು ಒಂದು ಪವಾಡದಂತಿವೆ. ಜಗತ್ತಿನಾದ್ಯಂತ ಭಾರತದ ಪ್ರತಿಷ್ಠೆ ಹೆಚ್ಚಾಗಿದೆ. ನಾವು ವಿದೇಶಕ್ಕೆ ಹೋಗಿ ಪ್ರಶಂಸೆ ಪಡೆದಾಗ ನಮ್ಮ ದೇಶದ ಬಗ್ಗೆ ಹೆಮ್ಮೆಯಾಗುತ್ತದೆ. ತಮ್ಮ ತವರು ಕ್ಷೇತ್ರವಾದ ಲಖನೌನಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿ ಪಡಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜನಾಥ್ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
-
आज लखनऊ में चल रहे कुछ विकास कार्यों की प्रगति को मौक़े पर पहुँच कर देखा। नगर में आधारभूत संरचना को मज़बूत करने की दिशा में लगातार प्रयास जारी हैं। इन सभी कार्यों को एक तय समय सीमा में पूरा किया जाएगा। pic.twitter.com/h9gC8WHV5k
— Rajnath Singh (@rajnathsingh) July 4, 2021 " class="align-text-top noRightClick twitterSection" data="
">आज लखनऊ में चल रहे कुछ विकास कार्यों की प्रगति को मौक़े पर पहुँच कर देखा। नगर में आधारभूत संरचना को मज़बूत करने की दिशा में लगातार प्रयास जारी हैं। इन सभी कार्यों को एक तय समय सीमा में पूरा किया जाएगा। pic.twitter.com/h9gC8WHV5k
— Rajnath Singh (@rajnathsingh) July 4, 2021आज लखनऊ में चल रहे कुछ विकास कार्यों की प्रगति को मौक़े पर पहुँच कर देखा। नगर में आधारभूत संरचना को मज़बूत करने की दिशा में लगातार प्रयास जारी हैं। इन सभी कार्यों को एक तय समय सीमा में पूरा किया जाएगा। pic.twitter.com/h9gC8WHV5k
— Rajnath Singh (@rajnathsingh) July 4, 2021