ETV Bharat / bharat

ರೈತರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ.. ಸೂರ್ಯಕಾಂತಿ, ಗೋಧಿ ಸೇರಿ ಆರು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ

author img

By

Published : Oct 18, 2022, 5:12 PM IST

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಆರು ರಬಿ ಬೆಳೆಗಳ ಎಂಎಸ್‌ಪಿ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸೂರ್ಯಕಾಂತಿ, ಗೋಧಿ ಸೇರಿ ಆರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಿಸಿದ ಕೇಂದ್ರ ಸರ್ಕಾರ
ಸೂರ್ಯಕಾಂತಿ, ಗೋಧಿ ಸೇರಿ ಆರು ಬೆಳೆಗಳಿಗೆ ಎಂಎಸ್​ಪಿ ಹೆಚ್ಚಿಸಿದ ಕೇಂದ್ರ ಸರ್ಕಾರ

ನವದೆಹಲಿ: ರೈತರ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರು ರಬಿ (ಹಿಂಗಾರು) ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಪ್ರಕಟಿಸಿದೆ. ಪ್ರಸಕ್ತ ಬೆಳೆ ವರ್ಷದಲ್ಲಿ ಕ್ವಿಂಟಲ್‌ ಗೋಧಿಗೆ 110 ರೂ. ಹಾಗೂ ಸಾಸಿವೆಗೆ 400 ರೂಪಾಯಿ ಹೆಚ್ಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಆರು ರಬಿ ಬೆಳೆಗಳ ಎಂಎಸ್‌ಪಿ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಎಂಎಸ್​ಪಿ ಹೆಚ್ಚಳ ಕುರಿತಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಕ್ವಿಂಟಲ್‌ ಮಸೂರ್​ ಧಾನ್ಯಕ್ಕೆ ಗರಿಷ್ಠ 500 ರೂ. ಎಂಎಸ್​ಪಿ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಮಸೂರ್​ ಧಾನ್ಯಕ್ಕೆ 5,500 ರೂ. ನಿಗದಿ ಮಾಡಲಾಗಿತ್ತು. ಈ ವರ್ಷ 500 ರೂ. ಏರಿಕೆಯಿಂದ 6,000 ರೂ.ಗೆ ಹೆಚ್ಚಳವಾಗಿದೆ ಎಂದು ತಿಳಿಸಿದರು.

ಸಾಸಿವೆಗೆ 400 ರೂ. ಎಂಎಸ್​ಪಿ ಹೆಚ್ಚಿಸಲಾಗಿದೆ. ಕಳೆದ ವರ್ಷ 5,050 ರೂ. ಇದ್ದ, ಸಾಸಿವೆ ದರ ಈ ಬಾರಿ 5,450 ರೂ. ನಿಗದಿ ಮಾಡಲಾಗಿದೆ. ಸೂರ್ಯಕಾಂತಿಗೆ 200 ರೂ. ಎಂಎಸ್​ಪಿ ಏರಿಕೆ ಮಾಡಲಾಗಿದ್ದು, ಇದರ ದರ 5,441 ರೂ.ರಿಂದ 5,650 ರೂ.ಗೆ ಹೆಚ್ಚಳವಾಗಿದೆ. ಗೋಧಿಗೆ 110 ರೂ. ಎಂಎಸ್​ಪಿ ಹೆಚ್ಚಳ ಮಾಡಲಾಗಿದ್ದು, ಇದರ ಬೆಲೆ 2,015ರಿಂದ 2,125 ರೂ. ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ ಕ್ವಿಂಟಾಲ್‌ ಬೇಳೆ ಕಾಳುಗಳಿಗೆ 105 ರೂ. ಏರಿಕೆ ಮಾಡಲಾಗಿದೆ. ಇದರ ಬೆಲೆ 5,230ರಿಂದ 5,335 ರೂ. ಏರಿಕೆಯಾಗಿದೆ. ಬಾರ್ಲಿಯ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 100 ರೂ. ಹೆಚ್ಚಳ ಮಾಡಲಾಗಿದ್ದು, 1,635 ರೂ.ನಿಂದ 1,735 ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಕಲಿ ಗೊಬ್ಬರ ಅಂಗಡಿಗಳ ಮೇಲೆ ಕಠಿಣ ಕ್ರಮ.. ಕೃಷಿ ಇಲಾಖೆ ಅಧಿಕಾರಿಗಳಿಂದ ದಾಳಿ

ನವದೆಹಲಿ: ರೈತರ ಉತ್ಪಾದನೆ ಮತ್ತು ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಆರು ರಬಿ (ಹಿಂಗಾರು) ಬೆಳೆಗಳ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಪ್ರಕಟಿಸಿದೆ. ಪ್ರಸಕ್ತ ಬೆಳೆ ವರ್ಷದಲ್ಲಿ ಕ್ವಿಂಟಲ್‌ ಗೋಧಿಗೆ 110 ರೂ. ಹಾಗೂ ಸಾಸಿವೆಗೆ 400 ರೂಪಾಯಿ ಹೆಚ್ಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಆರು ರಬಿ ಬೆಳೆಗಳ ಎಂಎಸ್‌ಪಿ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಎಂಎಸ್​ಪಿ ಹೆಚ್ಚಳ ಕುರಿತಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಕ್ವಿಂಟಲ್‌ ಮಸೂರ್​ ಧಾನ್ಯಕ್ಕೆ ಗರಿಷ್ಠ 500 ರೂ. ಎಂಎಸ್​ಪಿ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಮಸೂರ್​ ಧಾನ್ಯಕ್ಕೆ 5,500 ರೂ. ನಿಗದಿ ಮಾಡಲಾಗಿತ್ತು. ಈ ವರ್ಷ 500 ರೂ. ಏರಿಕೆಯಿಂದ 6,000 ರೂ.ಗೆ ಹೆಚ್ಚಳವಾಗಿದೆ ಎಂದು ತಿಳಿಸಿದರು.

ಸಾಸಿವೆಗೆ 400 ರೂ. ಎಂಎಸ್​ಪಿ ಹೆಚ್ಚಿಸಲಾಗಿದೆ. ಕಳೆದ ವರ್ಷ 5,050 ರೂ. ಇದ್ದ, ಸಾಸಿವೆ ದರ ಈ ಬಾರಿ 5,450 ರೂ. ನಿಗದಿ ಮಾಡಲಾಗಿದೆ. ಸೂರ್ಯಕಾಂತಿಗೆ 200 ರೂ. ಎಂಎಸ್​ಪಿ ಏರಿಕೆ ಮಾಡಲಾಗಿದ್ದು, ಇದರ ದರ 5,441 ರೂ.ರಿಂದ 5,650 ರೂ.ಗೆ ಹೆಚ್ಚಳವಾಗಿದೆ. ಗೋಧಿಗೆ 110 ರೂ. ಎಂಎಸ್​ಪಿ ಹೆಚ್ಚಳ ಮಾಡಲಾಗಿದ್ದು, ಇದರ ಬೆಲೆ 2,015ರಿಂದ 2,125 ರೂ. ಏರಿಕೆ ಮಾಡಲಾಗಿದೆ ಎಂದು ಹೇಳಿದರು.

ಪ್ರತಿ ಕ್ವಿಂಟಾಲ್‌ ಬೇಳೆ ಕಾಳುಗಳಿಗೆ 105 ರೂ. ಏರಿಕೆ ಮಾಡಲಾಗಿದೆ. ಇದರ ಬೆಲೆ 5,230ರಿಂದ 5,335 ರೂ. ಏರಿಕೆಯಾಗಿದೆ. ಬಾರ್ಲಿಯ ಬೆಂಬಲ ಬೆಲೆಯನ್ನು ಕ್ವಿಂಟಲ್‌ಗೆ 100 ರೂ. ಹೆಚ್ಚಳ ಮಾಡಲಾಗಿದ್ದು, 1,635 ರೂ.ನಿಂದ 1,735 ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಕಲಿ ಗೊಬ್ಬರ ಅಂಗಡಿಗಳ ಮೇಲೆ ಕಠಿಣ ಕ್ರಮ.. ಕೃಷಿ ಇಲಾಖೆ ಅಧಿಕಾರಿಗಳಿಂದ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.