ಭಿವಾನಿ(ಹರಿಯಾಣ): ಜಿಲ್ಲೆಯಲ್ಲಿ ಅಮಾನವೀಯ ದುಷ್ಕೃತ್ಯವೊಂದು ನಡೆದಿರುವುದು ಬೆಳಕಿಗೆ ಬಂದಿದ್ದು, ಯುವಕನೋರ್ವ ಆರು ತಿಂಗಳ ಕರುವಿನ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಅದರ ಮಾಲೀಕ ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ಬಂಧನ ಮಾಡಿದ್ದಾರೆ.
ಭಿವಾನಿ ಜಿಲ್ಲೆಯ ಹಲುವಾಸ್ ಗ್ರಾಮದಲ್ಲಿ ಈ ಕೃತ್ಯ ನಡೆದಿದ್ದು, ಆಕಳ ಕರುವಿನ ಮೇಲೆ ಕಾಮುಕ ಅತ್ಯಾಚಾರವೆಸಗಿದ್ದಾನೆ. ಇದರ ಬಗ್ಗೆ ಮಾಲೀಕನಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಒಪ್ಪಿಸಲಾಗಿದೆ. ಈ ವೇಳೆ ತಾನು ಮಾಡಿರುವ ತಪ್ಪು ಒಪ್ಪಿಕೊಂಡಿದ್ದಾನೆ. ಕತೆಗೆ ಈ ಹಿಂದೆ ಕೂಡ ಹಂದಿ ಜೊತೆ ಈ ರೀತಿಯಾಗಿ ನಡೆದುಕೊಂಡಿದ್ದಾಗಿ ಹೇಳಿದ್ದಾನೆ. ಈತ ಮೂಲತಃ ಬಿಹಾರ ರಾಜ್ಯದ ಯುವಕನಾಗಿದ್ದು, ಹಳ್ಳಿಯ ಹೋಟೆಲ್ವೊಂದರಲ್ಲಿ ಕೆಲಸ ಮಾಡ್ತಿದ್ದನು. ಇದರ ಪಕ್ಕದಲ್ಲಿನ ಮನೆಯಲ್ಲಿ ಹಸು ಹಾಗೂ ಅದರ ಕರುವಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಡಿಎಸ್ಪಿ ವೀರೇಂದ್ರ ಸಿಂಗ್, ಹಸುವಿನ ಮಾಲೀಕ ನೀಡಿರುವ ದೂರಿನ ಮೇರೆಗೆ ಬಿಹಾರ ಮೂಲದ ವ್ಯಕ್ತಿಯ ಬಂಧನ ಮಾಡಲಾಗಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಭಿವಾನಿ ಜಿಲ್ಲೆಯಲ್ಲಿ ಇಂತಹ ದುಷ್ಕೃತ್ಯ ನಡೆದಿರುವುದು ಇದೇ ಮೊದಲ ಸಲ ಎಂದು ತಿಳಿಸಿದ್ದಾರೆ.