ETV Bharat / bharat

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಕಾನ್ಸ್​​ಟೇಬಲ್​​: ವಿಡಿಯೋ

author img

By

Published : Aug 20, 2021, 8:08 PM IST

Updated : Aug 20, 2021, 11:18 PM IST

ಯುವಕನೊಬ್ಬ ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದನು. ಇದನ್ನು ಕಂಡ ಕಾನ್ಸ್​​ಟೇಬಲ್​​​ ಆತನನ್ನು ರಕ್ಷಿಸಿರುವ ಘಟನೆ ಕೊಡೆರ್ಮ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

Constable saved a youth who jumped in front of running train in koderma
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಕಾನ್ಸ್​ಸ್ಟೇಬಲ್​

ಕೊಡೆರ್ಮ(ಜಾರ್ಖಂಡ್): ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಪ್ರಾಣದ ಹಂಗು ತೆರೆದು ಕಾನ್ಸ್​​ಟೇಬಲ್​​​ ರಕ್ಷಿಸಿರುವ ಘಟನೆ ಕೊಡೆರ್ಮ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬಿಹಾರದ ಫತೇಪುರ್ ನಿವಾಸಿಯಾದ ಬಜರಂಗಿ ಮಾಂಝಿ ಎಂದು ಗುರುತಿಸಲಾಗಿದೆ. ಈತ ರೈಲ್ವೆ ಹಳಿ ಬಳಿ ಹೋಗಿ ಎದುರಿನಿಂದ ಬರುತ್ತಿದ್ದ ರೈಲಿಗಾಗಿ ಕಾಯುತ್ತಿದ್ದನು. ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಕಾನ್ಸ್​​ಟೇಬಲ್

ಇದನ್ನು ಗಮನಿಸಿದ ಪಪ್ಪು ಯಾದವ್ ಎಂಬ ಕಾನ್ಸ್​​ಟೇಬಲ್​​​​ಕೂಡಲೇ ಹಳಿಯ ಬಳಿ ಹೋಗಿ ಯುವಕನ್ನು ಪಕ್ಕಕ್ಕೆ ಎಳೆದು ರಕ್ಷಿಸಿದ್ದಾನೆ. ರೈಲು ಹೋಗುವವರಗೂ ಯುವಕನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು. ಘಟನೆ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Constable saved a youth who jumped in front of running train in koderma
ಕಾನ್ಸ್​ಟೇಬಲ್​ನಿಂದ ರಕ್ಷಿಸಲ್ಪಟ್ಟ ಯುವಕ

ಇನ್ನು ಕಾನ್ಸ್​​ಟೇಬಲ್​​​​ ಕೆಲಸಕ್ಕೆ ರೈಲ್ವೆ ಅಧಿಕಾರಿಗಳು ಸೇರಿದಂತೆ ನಿಲ್ದಾಣದಲ್ಲಿದ್ದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರೈಲ್ವೆ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಓದಿ: ಆರು ಮದುವೆಯಾಗಿದ್ದ ಮಾಜಿ ಸಚಿವನನ್ನು ಜೈಲಿಗಟ್ಟಿದ 4ನೇ ಹೆಂಡತಿ : ಮೋದಿಗೆ ಥ್ಯಾಂಕ್ಸ್​ ಹೇಳಿದ ನಗ್ಮಾ

ಕೊಡೆರ್ಮ(ಜಾರ್ಖಂಡ್): ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನನ್ನು ಪ್ರಾಣದ ಹಂಗು ತೆರೆದು ಕಾನ್ಸ್​​ಟೇಬಲ್​​​ ರಕ್ಷಿಸಿರುವ ಘಟನೆ ಕೊಡೆರ್ಮ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬಿಹಾರದ ಫತೇಪುರ್ ನಿವಾಸಿಯಾದ ಬಜರಂಗಿ ಮಾಂಝಿ ಎಂದು ಗುರುತಿಸಲಾಗಿದೆ. ಈತ ರೈಲ್ವೆ ಹಳಿ ಬಳಿ ಹೋಗಿ ಎದುರಿನಿಂದ ಬರುತ್ತಿದ್ದ ರೈಲಿಗಾಗಿ ಕಾಯುತ್ತಿದ್ದನು. ಬಳಿಕ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು.

ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಿಸಿದ ಕಾನ್ಸ್​​ಟೇಬಲ್

ಇದನ್ನು ಗಮನಿಸಿದ ಪಪ್ಪು ಯಾದವ್ ಎಂಬ ಕಾನ್ಸ್​​ಟೇಬಲ್​​​​ಕೂಡಲೇ ಹಳಿಯ ಬಳಿ ಹೋಗಿ ಯುವಕನ್ನು ಪಕ್ಕಕ್ಕೆ ಎಳೆದು ರಕ್ಷಿಸಿದ್ದಾನೆ. ರೈಲು ಹೋಗುವವರಗೂ ಯುವಕನನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು. ಘಟನೆ ಕುರಿತಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Constable saved a youth who jumped in front of running train in koderma
ಕಾನ್ಸ್​ಟೇಬಲ್​ನಿಂದ ರಕ್ಷಿಸಲ್ಪಟ್ಟ ಯುವಕ

ಇನ್ನು ಕಾನ್ಸ್​​ಟೇಬಲ್​​​​ ಕೆಲಸಕ್ಕೆ ರೈಲ್ವೆ ಅಧಿಕಾರಿಗಳು ಸೇರಿದಂತೆ ನಿಲ್ದಾಣದಲ್ಲಿದ್ದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತ್ತ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರೈಲ್ವೆ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.

ಓದಿ: ಆರು ಮದುವೆಯಾಗಿದ್ದ ಮಾಜಿ ಸಚಿವನನ್ನು ಜೈಲಿಗಟ್ಟಿದ 4ನೇ ಹೆಂಡತಿ : ಮೋದಿಗೆ ಥ್ಯಾಂಕ್ಸ್​ ಹೇಳಿದ ನಗ್ಮಾ

Last Updated : Aug 20, 2021, 11:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.