ಖರಗ್ಪುರ (ಪ.ಬಂ): ಹವಾಮಾನ ವೈಪರಿತ್ಯ ಹಾಗೂ ನೈಸರ್ಗಿಕ ವಿಕೋಪಗಳು ಇಂದು ವಿಶ್ವಕ್ಕೆ ಬಹುದೊಡ್ಡ ಸವಾಲಾಗಿವೆ. ಇವುಗಳನ್ನು ಸಮರ್ಥವಾಗಿ ಎದುರಿಸಲು ಐಐಟಿ ಸಂಸ್ಥೆಗಳ ಸಂಶೋಧನೆ ಹಾಗೂ ಅಭಿವೃದ್ಧಿ ಪಡಿಸಲು ಹೋರಾಡುತ್ತಿವೆ ಎಂದು ಪ್ರಧಾನಿ ಮೋದಿ ಖರಗ್ಪುರದ ಐಐಟಿಯ 66ನೇ ಘಟಿಕೋತ್ಸವ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.
ಭಾರತವು ತನ್ನ ಸೌರಶಕ್ತಿ ವಲಯದ ಒಕ್ಕೂಟ ವ್ಯವಸ್ಥೆ ಕೈಗೆಟುಕುವ ಪರಿಸರ ಸ್ನೇಹಿ ವಲಯವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತುತಪಡಿಸಿದೆ ಎಂದಿದ್ದಾರೆ. ಹವಾಮಾನ ಬದಲಾವಣೆಯು ಪ್ರಪಂಚದ ಮುಂದೆ ದೊಡ್ಡ ಸವಾಲಾಗಿದೆ. ವಿಪತ್ತು ನಿರ್ವಹಣೆಯ ವಿಷಯದಲ್ಲಿ ಭಾರತ ವಿಶ್ವದ ಗಮನ ಸೆಳೆಯುತ್ತಿದೆ.
ಇತ್ತೀಚಿಗೆ ಉತ್ತರಾಖಂಡ್ನಲ್ಲಿ ಏನಾಯಿತು ಎಂಬುದನ್ನು ನೀವು ನೋಡಬಹುದು. ನೈಸರ್ಗಿಕ ವಿಪತ್ತುಗಳನ್ನು ತಡೆದುಕೊಳ್ಳಬಲ್ಲ ವಿಪತ್ತು-ಸ್ಥಿತಿಸ್ಥಾಪಕ ಮೂಲಸೌಕರ್ಯಗಳನ್ನು ಸುಧಾರಿಸುವತ್ತ ನಾವು ಗಮನ ಹರಿಸಬೇಕಿದೆ ಎಂದಿದ್ದಾರೆ.
ಕೋವಿಡ್ ಹರಡದಂತೆ ತಡೆಯುವಲ್ಲಿನ ಹೋರಾಟದಲ್ಲಿ ಐಐಟಿಯ ಶ್ರಮ ನೆನೆದು ಮೋದಿ ಹೊಗಳಿದ್ದಾರೆ. ನೀವು 130 ಕೋಟಿ ಭಾರತೀಯರ ಆಕಾಂಕ್ಷೆಯನ್ನು ಜಗತ್ತಿನ ಮುಂದೆ ಪ್ರತಿನಿಧಿಸುತ್ತೀರಿ ಎಂದರು.
ಇದನ್ನೂ ಓದಿ: ವಿಜಯವಾಡ ದುರ್ಗಾ ದೇವಸ್ಥಾನದಲ್ಲಿ ಅಕ್ರಮ : 15 ಮಂದಿ ಉದ್ಯೋಗಿಗಳು ಅಮಾನತು