ನವದೆಹಲಿ: ಲೋಕಸಭಾ ಸಂಸದ ಚಿರಾಗ್ ಪಾಸ್ವಾನ್ ಅವರು ನವದೆಹಲಿಯ 12 ಜನಪಥ್ನಲ್ಲಿರುವ ಬಂಗಲೆಯನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ. ಈ ಬಂಗಲೆಯನ್ನು ಚಿರಾಗ್ ಅವರ ತಂದೆ ರಾಮ್ವಿಲಾಸ್ ಪಾಸ್ವಾನ್ ಅವರಿಗೆ ನೀಡಲಾಗಿತ್ತು.
ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಚಿರಾಗ್ ಪಾಸ್ವಾಲ್ ಈ ಬಂಗಲೆಯನ್ನು ಬಳಸುತ್ತಿದ್ದರು. ಈಗ ಬಂಗಲೆಯನ್ನು ತೆರವು ಮಾಡಲು ಚಿರಾಗ್ ಪಾಸ್ವಾನ್ ಮುಂದಾಗಿದ್ದಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿರುವ ಎಸ್ಟೇಟ್ ನಿರ್ದೇಶನಾಲಯದ ಹಿಂದಿನ ವರ್ಷವೇ ಬಂಗಲೆಯನ್ನು ತೆರವು ಮಾಡಲು ಚಿರಾಗ್ ಪಾಸ್ವಾನ್ಗೆ ಸೂಚನೆ ನೀಡಿತ್ತು.
ಆದರೆ, ಚಿರಾಗ್ ಈವರೆಗೂ ಬಂಗಲೆಯನ್ನು ತೆರವು ಮಾಡಿರಲಿಲ್ಲ. ಈಗ ತೆರವು ಮಾಡಲು ಮುಂದಾಗಿದ್ದು, ಲೋಡ್ ಮಾಡಿದ ಎರಡು ಟ್ರಕ್ಗಳು ಬಂಗಲೆಯಿಂದ ಹೊರಬಂದಿವೆ. ಇನ್ನೂ ಮೂರು ಟ್ರಕ್ಗಳು ಬಂಗಲೆ ಮುಂದೆ ನಿಂತಿವೆ ಎಂದು ಮೂಲಗಲೂ ತಿಳಿಸಿವೆ.
ಕೇಂದ್ರ ಸಚಿವರಿಗೆ ಈ ಬಂಗಲೆಯನ್ನು ಮೀಸಲಿಡಲಾಗಿದೆ. ಆದ್ದರಿಂದ ಚಿರಾಗ್ ಪಾಸ್ವಾನ್ ಅವರಿಗೆ ಬಂಗಲೆಯನ್ನು ವಾಪಸ್ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲೋಕ ಜನಶಕ್ತಿ ಪಕ್ಷದ ಸಾಂಸ್ಥಿಕ ಸಭೆಗಳು ಮತ್ತು ಇತರ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಬಂಗಲೆಯನ್ನು ನಿಯಮಿತವಾಗಿ ಬಳಸಲಾಗುತ್ತಿತ್ತು.
ಇದನ್ನೂ ಓದಿ: ತಪಾಸಣೆ ವೇಳೆ ಕಾರಲ್ಲಿ ಸ್ಫೋಟಕ ತುಂಬಿದ್ದ ಮೂವರು ಆರೋಪಿಗಳ ಸೆರೆ; ಉಗ್ರರ ನಂಟಿನ ಶಂಕೆ..!