ETV Bharat / bharat

ನಕ್ಸಲ್​ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ರಿಲೀಸ್​.. ಸಂತಸ ವ್ಯಕ್ತಪಡಿಸಿದ ಪತ್ನಿ!

author img

By

Published : Apr 8, 2021, 7:37 PM IST

ನಕ್ಸಲ್​ ವಿರುದ್ಧದ ಕಾರ್ಯಚರಣೆ ವೇಳೆ ಮಾವೋವಾದಿಗಳಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್​ ಇಂದು ರಿಲೀಸ್​ ಆಗಿದ್ದಾರೆ.

CRPF commando released by Naxals
CRPF commando released by Naxals

ಬಿಜಾಪುರ(ಛತ್ತೀಸ್​ಗಢ): ಏಪ್ರಿಲ್​ 3ರಂದು ನಡೆದಿದ್ದ ನಕ್ಸಲ್​ ಕಾರ್ಯಾಚರಣೆಯಲ್ಲಿ ಅಪಹರಣಗೊಂಡಿದ್ದ ಕೋಬ್ರಾ ಜವಾನ್​​ ರಾಕೇಶ್ವರ್​ ಸಿಂಗ್​ ಮನ್ಹಾಸ್​ ಇಂದು ಸುರಕ್ಷಿತವಾಗಿ ರಿಲೀಸ್​ ಆಗಿದ್ದಾರೆ.

ನಕ್ಸಲ್​ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ರಿಲೀಸ್

ಛತ್ತೀಸ್​ಗಢದ ಬಿಜಾಪುರ - ಸುಕ್ಮಾ ಗಡಿ ಪ್ರದೇಶದಲ್ಲಿ ನಕ್ಸಲರು - ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ದಾಳಿ ನಡೆದಿತ್ತು. ಕಾರ್ಯಾಚರಣೆಯಲ್ಲಿ 22 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಓರ್ವ ಯೋಧನನ್ನು ಅಪಹರಣ ಮಾಡಿದ್ದರು. ಇದೀಗ ಅವರನ್ನ ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ.

CRPF commando released by Naxals
ನಕ್ಸಲ್​ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್​​

ಇದರ ಬಗ್ಗೆ ಮಾತನಾಡಿರುವ ಬಿಜಾಪುರ ಎಸ್​ಪಿ ಸುರಕ್ಷಿತವಾಗಿ ಕೋಬ್ರಾ ಯೋಧನನ್ನ ಕರೆತರಲಾಗಿದ್ದು, ಸದ್ಯ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಕೋವಿಡ್​ ಪಾಸಿಟಿವ್​ ದೃಢ

ರಾಕೇಶ್ವರ್ ಸಿಂಗ್​ ಪತ್ನಿ ಸಂತಸ: ಇದೇ ವಿಚಾರವಾಗಿ ಮಾತನಾಡಿರುವ ರಾಕೇಶ್ವರ್​​ ಸಿಂಗ್ ಪತ್ನಿ ಮೀನು, ನನ್ನ ಜೀವನದಲ್ಲಿ ಇದು ಅತಿ ಸಂತೋಷದ ದಿನವಾಗಿದ್ದು, ಅವರು ಖಂಡಿತವಾಗಿ ವಾಪಸ್​ ಬರುತ್ತಾರೆ ಎಂಬ ಭರವಸೆ ನನ್ನಲ್ಲಿ ಇತ್ತು ಎಂದಿದ್ದಾರೆ. ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಕೋಬ್ರಾ ಯೋಧನ ಬಿಡುಗಡೆ ವಿಚಾರವಾಗಿ ಮಧ್ಯವರ್ತಿ ನಿಯೋಜನೆ ಮಾಡುವಂತೆ ನಕ್ಸಲರು ಮಾಧ್ಯಮ ಹೇಳಿಕೆ ರಿಲೀಸ್​ ಮಾಡಿತ್ತು. ಆದರೆ ಮಧ್ಯವರ್ತಿ ನಿಯೋಜನೆ ಮಾಡಿದ್ದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರ ಬೆನ್ನಲ್ಲೇ ಅವರನ್ನ ರಿಲೀಸ್ ಮಾಡಲಾಗಿದೆ.

ಬಿಜಾಪುರ(ಛತ್ತೀಸ್​ಗಢ): ಏಪ್ರಿಲ್​ 3ರಂದು ನಡೆದಿದ್ದ ನಕ್ಸಲ್​ ಕಾರ್ಯಾಚರಣೆಯಲ್ಲಿ ಅಪಹರಣಗೊಂಡಿದ್ದ ಕೋಬ್ರಾ ಜವಾನ್​​ ರಾಕೇಶ್ವರ್​ ಸಿಂಗ್​ ಮನ್ಹಾಸ್​ ಇಂದು ಸುರಕ್ಷಿತವಾಗಿ ರಿಲೀಸ್​ ಆಗಿದ್ದಾರೆ.

ನಕ್ಸಲ್​ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ರಿಲೀಸ್

ಛತ್ತೀಸ್​ಗಢದ ಬಿಜಾಪುರ - ಸುಕ್ಮಾ ಗಡಿ ಪ್ರದೇಶದಲ್ಲಿ ನಕ್ಸಲರು - ಭದ್ರತಾ ಪಡೆ ಸಿಬ್ಬಂದಿ ನಡುವೆ ಗುಂಡಿನ ದಾಳಿ ನಡೆದಿತ್ತು. ಕಾರ್ಯಾಚರಣೆಯಲ್ಲಿ 22 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಓರ್ವ ಯೋಧನನ್ನು ಅಪಹರಣ ಮಾಡಿದ್ದರು. ಇದೀಗ ಅವರನ್ನ ಸುರಕ್ಷಿತವಾಗಿ ಮರಳಿ ಕರೆತರಲಾಗಿದೆ.

CRPF commando released by Naxals
ನಕ್ಸಲ್​ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್​​

ಇದರ ಬಗ್ಗೆ ಮಾತನಾಡಿರುವ ಬಿಜಾಪುರ ಎಸ್​ಪಿ ಸುರಕ್ಷಿತವಾಗಿ ಕೋಬ್ರಾ ಯೋಧನನ್ನ ಕರೆತರಲಾಗಿದ್ದು, ಸದ್ಯ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳ ಸಿಎಂ ಪಿಣರಾಯಿ ವಿಜಯನ್​ಗೆ ಕೋವಿಡ್​ ಪಾಸಿಟಿವ್​ ದೃಢ

ರಾಕೇಶ್ವರ್ ಸಿಂಗ್​ ಪತ್ನಿ ಸಂತಸ: ಇದೇ ವಿಚಾರವಾಗಿ ಮಾತನಾಡಿರುವ ರಾಕೇಶ್ವರ್​​ ಸಿಂಗ್ ಪತ್ನಿ ಮೀನು, ನನ್ನ ಜೀವನದಲ್ಲಿ ಇದು ಅತಿ ಸಂತೋಷದ ದಿನವಾಗಿದ್ದು, ಅವರು ಖಂಡಿತವಾಗಿ ವಾಪಸ್​ ಬರುತ್ತಾರೆ ಎಂಬ ಭರವಸೆ ನನ್ನಲ್ಲಿ ಇತ್ತು ಎಂದಿದ್ದಾರೆ. ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.

ಕೋಬ್ರಾ ಯೋಧನ ಬಿಡುಗಡೆ ವಿಚಾರವಾಗಿ ಮಧ್ಯವರ್ತಿ ನಿಯೋಜನೆ ಮಾಡುವಂತೆ ನಕ್ಸಲರು ಮಾಧ್ಯಮ ಹೇಳಿಕೆ ರಿಲೀಸ್​ ಮಾಡಿತ್ತು. ಆದರೆ ಮಧ್ಯವರ್ತಿ ನಿಯೋಜನೆ ಮಾಡಿದ್ದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರ ಬೆನ್ನಲ್ಲೇ ಅವರನ್ನ ರಿಲೀಸ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.