ETV Bharat / bharat

ಅಸ್ಸೋಂನ ಆರು ಬಂಡುಕೋರ ಗುಂಪುಗಳೊಡನೆ ಶಾಂತಿ ಒಪ್ಪಂದ : ಗೃಹ ಸಚಿವ ಅಮಿತ್ ಶಾ

author img

By

Published : Sep 4, 2021, 6:11 PM IST

ಈಶಾನ್ಯ ರಾಜ್ಯಗಳಲ್ಲಿ ಸುಮಾರು ಎರಡು ವರ್ಷಗಳಿಂದ 3,700 ಮಂದಿ ಶಸ್ತ್ರ ಸಜ್ಜಿತ ಬಂಡುಕೋರರು ಶರಣಾಗಿದ್ದಾರೆ ಎಂದಿರುವ ಅಮಿತ್ ಶಾ, ಶಸ್ತ್ರಗಳನ್ನು ಕೆಳಗಿಳಿಸಿ ಶರಣಾಗಲು ಬಯಸುವ ಗುಂಪುಗಳೊಡನೆ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದಿದ್ದಾರೆ..

Centre to sign pact with 6 Karbi Anglong groups: Amit Shah
ಅಸ್ಸಾಂನ ಆರು ಬಂಡುಕೋರ ಗುಂಪುಗಳೊಡನೆ ಶಾಂತಿ ಒಪ್ಪಂದ: ಅಮಿತ್ ಶಾ

ನವದೆಹಲಿ : ಅಸ್ಸೋಂನ ಕರ್ಬಿ ಆ್ಯಂಗ್ಲಾಂಗ್ ಜಿಲ್ಲೆಯ ಆರು ಬಂಡುಕೋರ ಗುಂಪುಗಳೊಡನೆ ಕೇಂದ್ರ ಸರ್ಕಾರ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಶನಿವಾರ ಘೋಷಿಸಿದ್ದಾರೆ.

ಬ್ಯೂರೋ ಆಫ್​ ಪೊಲೀಸ್ ರಿಸರ್ಚ್​ ಆ್ಯಂಡ್ ಡೆವೆಲೆಪ್​​ಮೆಂಟ್​ (ಬಿಪಿಆರ್​&ಡಿ)ಯ 51ನೇ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಅಮಿತ್ ಶಾ, ಈ ಮಾಹಿತಿಯನ್ನು ನೀಡಿದ್ದಾರೆ. ಕೇಂದ್ರ ಗೃಹ ಮಂತ್ರಿ, ಅಸ್ಸೋಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರ ಹಾಜರಿಯಲ್ಲಿ ಆರು ಬಂಡುಕೋರ ಗುಂಪುಗಳ ನಡುವೆ ಶಾಂತಿ ಒಪ್ಪಂದವಾಗಲಿದೆ.

ಈಶಾನ್ಯ ರಾಜ್ಯಗಳಲ್ಲಿ ಸುಮಾರು ಎರಡು ವರ್ಷಗಳಿಂದ 3,700 ಮಂದಿ ಶಸ್ತ್ರ ಸಜ್ಜಿತ ಬಂಡುಕೋರರು ಶರಣಾಗಿದ್ದಾರೆ ಎಂದಿರುವ ಅಮಿತ್ ಶಾ, ಶಸ್ತ್ರಗಳನ್ನು ಕೆಳಗಿಳಿಸಿ ಶರಣಾಗಲು ಬಯಸುವ ಗುಂಪುಗಳೊಡನೆ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದಿದ್ದಾರೆ.

ದೇಶದ ಭದ್ರತೆಯ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಭೂ ಮತ್ತು ಜಲಗಡಿಗಳು ಸುರಕ್ಷಿತವಾಗಿವೆ. ಬಿಪಿಆರ್​&ಡಿಯು ಗಡಿ ಪಹರೆ ಕಾಯುವ ಎಲ್ಲಾ ಪಡೆಗಳಿಗೆ ತರಬೇತಿ ನೀಡುವ ಕೆಲಸ ಮಾಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

ದೇಶಕ್ಕೆ ಮುಂಬರುವ ಸವಾಲುಗಳನ್ನು ಪ್ರಸ್ತಾಪಿಸಿದ ಅಮಿತ್​ ಶಾ, ಮುಂದಿನ ದಶಕ ಆಂತರಿಕ ಭದ್ರತೆಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಜೊತೆಗೆ ಸೈಬರ್ ಬೆದರಿಕೆಗಳು, ಡ್ರೋನ್ ದಾಳಿಗಳು ಮತ್ತು ಮಾದಕ ದ್ರವ್ಯದ ಸವಾಲುಗಳಿಗೆ ನಾವು ಸಿದ್ಧರಿರಬೇಕೆಂದು ಕರೆ ನೀಡಿದರು.

ಇದನ್ನೂ ಓದಿ: ಮ್ಯೂಸಿಯಂಗೆ ಶಿಫ್ಟ್ ಆಗಲಿದೆ ಬ್ರಿಟಿಷ್ ಆಳ್ವಿಕೆ ವೇಳೆ ವಶಪಡಿಸಿಕೊಂಡಿದ್ದ ಚಿನ್ನದ ಜಿಂಕೆ ಪ್ರತಿಮೆ

ನವದೆಹಲಿ : ಅಸ್ಸೋಂನ ಕರ್ಬಿ ಆ್ಯಂಗ್ಲಾಂಗ್ ಜಿಲ್ಲೆಯ ಆರು ಬಂಡುಕೋರ ಗುಂಪುಗಳೊಡನೆ ಕೇಂದ್ರ ಸರ್ಕಾರ ಶಾಂತಿ ಒಪ್ಪಂದ ಮಾಡಿಕೊಳ್ಳುತ್ತದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಶನಿವಾರ ಘೋಷಿಸಿದ್ದಾರೆ.

ಬ್ಯೂರೋ ಆಫ್​ ಪೊಲೀಸ್ ರಿಸರ್ಚ್​ ಆ್ಯಂಡ್ ಡೆವೆಲೆಪ್​​ಮೆಂಟ್​ (ಬಿಪಿಆರ್​&ಡಿ)ಯ 51ನೇ ಸಂಸ್ಥಾಪನಾ ದಿನದ ಅಂಗವಾಗಿ ಮಾತನಾಡಿದ ಅಮಿತ್ ಶಾ, ಈ ಮಾಹಿತಿಯನ್ನು ನೀಡಿದ್ದಾರೆ. ಕೇಂದ್ರ ಗೃಹ ಮಂತ್ರಿ, ಅಸ್ಸೋಂನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರ ಹಾಜರಿಯಲ್ಲಿ ಆರು ಬಂಡುಕೋರ ಗುಂಪುಗಳ ನಡುವೆ ಶಾಂತಿ ಒಪ್ಪಂದವಾಗಲಿದೆ.

ಈಶಾನ್ಯ ರಾಜ್ಯಗಳಲ್ಲಿ ಸುಮಾರು ಎರಡು ವರ್ಷಗಳಿಂದ 3,700 ಮಂದಿ ಶಸ್ತ್ರ ಸಜ್ಜಿತ ಬಂಡುಕೋರರು ಶರಣಾಗಿದ್ದಾರೆ ಎಂದಿರುವ ಅಮಿತ್ ಶಾ, ಶಸ್ತ್ರಗಳನ್ನು ಕೆಳಗಿಳಿಸಿ ಶರಣಾಗಲು ಬಯಸುವ ಗುಂಪುಗಳೊಡನೆ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದಿದ್ದಾರೆ.

ದೇಶದ ಭದ್ರತೆಯ ಸವಾಲುಗಳ ಬಗ್ಗೆ ಮಾತನಾಡಿದ ಅವರು, ಭೂ ಮತ್ತು ಜಲಗಡಿಗಳು ಸುರಕ್ಷಿತವಾಗಿವೆ. ಬಿಪಿಆರ್​&ಡಿಯು ಗಡಿ ಪಹರೆ ಕಾಯುವ ಎಲ್ಲಾ ಪಡೆಗಳಿಗೆ ತರಬೇತಿ ನೀಡುವ ಕೆಲಸ ಮಾಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ.

ದೇಶಕ್ಕೆ ಮುಂಬರುವ ಸವಾಲುಗಳನ್ನು ಪ್ರಸ್ತಾಪಿಸಿದ ಅಮಿತ್​ ಶಾ, ಮುಂದಿನ ದಶಕ ಆಂತರಿಕ ಭದ್ರತೆಯ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಯಾಕೆಂದರೆ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು. ಜೊತೆಗೆ ಸೈಬರ್ ಬೆದರಿಕೆಗಳು, ಡ್ರೋನ್ ದಾಳಿಗಳು ಮತ್ತು ಮಾದಕ ದ್ರವ್ಯದ ಸವಾಲುಗಳಿಗೆ ನಾವು ಸಿದ್ಧರಿರಬೇಕೆಂದು ಕರೆ ನೀಡಿದರು.

ಇದನ್ನೂ ಓದಿ: ಮ್ಯೂಸಿಯಂಗೆ ಶಿಫ್ಟ್ ಆಗಲಿದೆ ಬ್ರಿಟಿಷ್ ಆಳ್ವಿಕೆ ವೇಳೆ ವಶಪಡಿಸಿಕೊಂಡಿದ್ದ ಚಿನ್ನದ ಜಿಂಕೆ ಪ್ರತಿಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.