ETV Bharat / bharat

ಲಾಲೂ ಪುತ್ರನ ಪತ್ರ ವೈರಲ್​.. ರಾಷ್ಟ್ರಪತಿಗೆ ತೇಜ್ ಪ್ರತಾಪ್ ಬರೆದ ಲೆಟರ್​ ತಪ್ಪುಗಳ ಸರಮಾಲೆ

ಜನವರಿ 25 ರಂದು ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ 6 ತಪ್ಪುಗಳು ಕಂಡುಬಂದಿವೆ. ಹಿಂದಿಯಲ್ಲಿ ಬರೆದ ಈ ಪತ್ರದಲ್ಲಿ ತಪ್ಪುಗಳಿದ್ದು, ಪತ್ರ ವೈರಲ್​ ಆಗಿದೆ.

author img

By

Published : Jan 27, 2021, 10:01 AM IST

tej pratap
ತೇಜ್ ಪ್ರತಾಪ್ ಯಾದವ್

ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರ ವೈರಲ್ ಆಗುತ್ತಿದೆ.

ತೇಜ್ ಪ್ರತಾಪ್ ಅವರ ಪತ್ರದಲ್ಲಿ 6 ತಪ್ಪುಗಳಿವೆ. ಜನವರಿ 25 ರಂದು ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ 6 ತಪ್ಪುಗಳು ಕಂಡುಬಂದಿವೆ. ಹಿಂದಿಯಲ್ಲಿ ಬರೆದ ಈ ಪತ್ರದಲ್ಲಿ ತಪ್ಪುಗಳಿದ್ದು, ಇದೇ ವಿಷಯಕ್ಕೆ ತೇಜ್​ ಪ್ರತಾಪ್​ ಅವರ ಪತ್ರ ವೈರಲ್​ ಆಗುತ್ತದೆ. ಗರಿಬೋ (गरीबों) ಎಂದು ಬರೆಯುವಲ್ಲಿ ಗರಿವೋ (गरीवों), ವಂಚಿತ (वंचित ) ಎಂಬಲ್ಲಿ ಬಂಚಿತ (बंचति), ಮಸೀಹಾ (मसीहा) ಎಂದು ಬರೆಯುವಲ್ಲಿ ಮಸಿಹಾ (मसिहा), ಆದರಣೀಯ (आदरणीय) ಎಂಬಲ್ಲಿ ಆಪರಣೀಯ (आपरणीय), ಲಾಲೂ (लालू) ಎಂಬಲ್ಲಿ ಲಾಲು (लालु), ಮೂಲ್ಯೊ (मूल्यों) ಎಂದು ಬರೆಯುವಲ್ಲಿ ಮುಲ್ಯೊ (मुल्यों) ಎಂದು ಬರೆಯಲಾಗಿದೆ.

ಇದನ್ನೂ ಓದಿ: ಪೊಲೀಸ್​​ ಅಧಿಕಾರಿಗಳ ಜೊತೆ ಅಮಿತ್​ ಶಾ ಮೀಟಿಂಗ್.. ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

ಮೇವು ಹಗರಣದಲ್ಲಿ ಬಂಧನಕ್ಕೊಳಾಗಿರುವ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದ ಕಾರಣ ದೆಹಲಿ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೇಜ್ ಪ್ರತಾಪ್ ಯಾದವ್ ಲಾಲೂ ಅವರ ಬಿಡುಗಡೆಗಾಗಿ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರ ವೈರಲ್ ಆಗುತ್ತಿದೆ.

ತೇಜ್ ಪ್ರತಾಪ್ ಅವರ ಪತ್ರದಲ್ಲಿ 6 ತಪ್ಪುಗಳಿವೆ. ಜನವರಿ 25 ರಂದು ತೇಜ್ ಪ್ರತಾಪ್ ಯಾದವ್ ಅವರು ರಾಷ್ಟ್ರಪತಿ ಅವರಿಗೆ ಬರೆದ ಪತ್ರದಲ್ಲಿ 6 ತಪ್ಪುಗಳು ಕಂಡುಬಂದಿವೆ. ಹಿಂದಿಯಲ್ಲಿ ಬರೆದ ಈ ಪತ್ರದಲ್ಲಿ ತಪ್ಪುಗಳಿದ್ದು, ಇದೇ ವಿಷಯಕ್ಕೆ ತೇಜ್​ ಪ್ರತಾಪ್​ ಅವರ ಪತ್ರ ವೈರಲ್​ ಆಗುತ್ತದೆ. ಗರಿಬೋ (गरीबों) ಎಂದು ಬರೆಯುವಲ್ಲಿ ಗರಿವೋ (गरीवों), ವಂಚಿತ (वंचित ) ಎಂಬಲ್ಲಿ ಬಂಚಿತ (बंचति), ಮಸೀಹಾ (मसीहा) ಎಂದು ಬರೆಯುವಲ್ಲಿ ಮಸಿಹಾ (मसिहा), ಆದರಣೀಯ (आदरणीय) ಎಂಬಲ್ಲಿ ಆಪರಣೀಯ (आपरणीय), ಲಾಲೂ (लालू) ಎಂಬಲ್ಲಿ ಲಾಲು (लालु), ಮೂಲ್ಯೊ (मूल्यों) ಎಂದು ಬರೆಯುವಲ್ಲಿ ಮುಲ್ಯೊ (मुल्यों) ಎಂದು ಬರೆಯಲಾಗಿದೆ.

ಇದನ್ನೂ ಓದಿ: ಪೊಲೀಸ್​​ ಅಧಿಕಾರಿಗಳ ಜೊತೆ ಅಮಿತ್​ ಶಾ ಮೀಟಿಂಗ್.. ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ

ಮೇವು ಹಗರಣದಲ್ಲಿ ಬಂಧನಕ್ಕೊಳಾಗಿರುವ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅನಾರೋಗ್ಯದ ಕಾರಣ ದೆಹಲಿ ಏಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೇಜ್ ಪ್ರತಾಪ್ ಯಾದವ್ ಲಾಲೂ ಅವರ ಬಿಡುಗಡೆಗಾಗಿ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.