ಆಗ್ರಾ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಉದ್ದೇಶದಿಂದ ಮಾದರಿ ಶಿಕ್ಷಕಿವೋರ್ವರು ತೆಲಂಗಾಣದ ರಾಜಧಾನಿ ಹೈದರಾಬಾದ್ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಸೈಕಲ್ನಲ್ಲೇ ಪ್ರಯಾಣ ಬೆಳೆಸಿದ್ದಾರೆ. ಶಿಕ್ಷಕಿ ಮಾಧವಿ ಲತಾ ಅವರನ್ನು ಆಗ್ರಾದ ಗೋರಕ್ಷ ಕ್ರಾಂತಿ ಸದಸ್ಯರು ಸ್ವಾಗತಿಸಿದ್ದಾರೆ.
ಮಹಿಳೆಯರ ರಕ್ಷಣೆ ಮತ್ತು ಗೋ ಮಾತೆಯ ರಕ್ಷಣೆ ಸಂಬಂಧ ಕಾನೂನು ರೂಪಿಸುವಂತೆ ಮನವಿ ಮಾಡಲು ಪ್ರಧಾನಿ ಭೇಟಿಗೆ ಬಂದಿದ್ದೇನೆ ಎಂದು ಮಾಧವಿ ಹೇಳಿದ್ದಾರೆ.
ನವೆಂಬರ್ 12 ರಂದು ಏಕಾಂಗಿಯಾಗಿ ಸೈಕಲ್ ಮೂಲಕ ಸವಾರಿ ಪ್ರಾರಂಭಿಸಿದ್ದಾರೆ. ಸುಮಾರು 2000 ಕಿ.ಮೀ. ಸೈಕಲ್ ಮೂಲಕವೇ ಪ್ರಯಾಣ ಬೆಳೆಸಿದ ಮಾಧವಿಯವರನ್ನು ಅಲ್ಲಿನ ಗೋರಕ್ಷ ಕ್ರಾಂತಿಯ ರಾಷ್ಟ್ರೀಯ ಅಧ್ಯಕ್ಷ ಜ್ಞಾನೇಂದ್ರ ಸಿಂಗ್ ಮುಖಿಯಾ, ನೀರಜ್ ಶರ್ಮಾ, ಪ್ರಮೋದ್ ಲವಾನಿಯಾ, ರಾಮು ಫೌಜ್ದಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸ್ವಾಗತಿಸಿ, ಅವರಿಗೆ ಬೆಂಬಲ ಸೂಚಿಸಿದರು.