ಲಖನೌ: ಬಂಡಾಯ ನಾಯಕ, ನಟ, ಪ್ರಧಾನಿ ಮೋದಿ ವಿರುದ್ಧ ತನ್ನ ಅಸಮಾಧಾನ ಹೊರಹಾಕುತ್ತಾ ಬಿಜೆಪಿ ತೊರೆದಿರುವ ಶತೃಘ್ನ ಸಿನ್ಹಾ ಈಗಾಗಲೇ ಕಾಂಗ್ರೆಸ್ ಸೇರಿಯಾಗಿದೆ. ಇದರ ಮಧ್ಯೆ ಅವರ ಪತ್ನಿ ಕೂಡ ಗಂಡನಿಗೆ ಸಾಥ್ ನೀಡಲು ಮುಂದಾಗಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್ ಸ್ಪರ್ಧೆ ಮಾಡುವ ಲಖನೌ ಸಂಸದೀಯ ಕ್ಷೇತ್ರದಿಂದ ಪೂನಂ ಸಿನ್ಹಾ ಸ್ಪರ್ಧೆಗಿಳಿಯಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪೂನಂ ಮುಂದಾಗಿದ್ದು, ಅವರಿಗೆ ಬಹುಜನ ಸಮಾಜವಾದಿ ಪಕ್ಷ ಕೂಡ ಸಾಥ್ ನೀಡಲಿದೆ. ಇನ್ನು ಕಾಂಗ್ರೆಸ್ ಕೂಡ ಯಾವುದೇ ಅಭ್ಯರ್ಥಿಯನ್ನ ಈ ಕ್ಷೇತ್ರದಿಂದ ಕಣಕ್ಕಿಳಿಸದಿರಲು ನಿರ್ಧರಿಸಿದೆ.
ಲಖನೌ ಪ್ರದೇಶದಲ್ಲಿ 1.3 ಲಕ್ಷ ಸಿದ್ದಿ ವೋಟರ್ಸ್ ಹಾಗೂ 3.5 ಲಕ್ಷ ಮುಸ್ಲಿಮ್ ಮತದಾರರಿದ್ದಾರೆ. ಇದು ಪೂನಂಗೆ ಫ್ಲಸ್ ಪಾಯಿಂಟ್ ಆಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಜತೆಗೆ ರಾಜನಾಥ್ ಸಿಂಗ್ಗೆ ಬಿಗ್ ಫೈಟ್ ನೀಡಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಪಾಟ್ನಾಸಾಹೀಬ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಶತೃಘ್ನ ಸಿನ್ಹಾ, ಈ ಬಾರಿ ಕಾಂಗ್ರೆಸ್ ನಿಂದ ಅಖಾಡಕ್ಕಿಳಿದಿದ್ದಾರೆ.