ETV Bharat / bharat

ರಾಜಸ್ಥಾನದಲ್ಲಿ ಮುಂದುವರಿದ ಗದ್ದುಗೆ ಗುದ್ದಾಟ:  ಶುರುವಾಯ್ತು ರೆಸಾರ್ಟ್​ ರಾಜಕೀಯ!

author img

By

Published : Jul 15, 2020, 8:25 AM IST

ರಾಜಸ್ಥಾನ ಸರ್ಕಾರ ಕುಸಿಯುವ ಭಯ ಕಾಂಗ್ರೆಸ್​ಗೆ ಕಾಡುತ್ತಿದೆ. ಹೀಗಾಗಿ ಸಿಎಂ ಅಶೋಕ್​ ಗೆಹ್ಲೋಟ್​ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ರೆಸಾರ್ಟ್​ ರಾಜಕೀಯ ಶುರು ಮಾಡಿದ್ದಾರೆ.

Rajasthan Politics, Rajasthan political crisis, Sachin Pilot, Ashok Gehlot, Rajasthan government,  political crisis in Rajasthan, Rajasthan government, ಕುಸಿಯುವ ಭಯದಲ್ಲಿ ರಾಜಸ್ಥಾನ ಸರ್ಕಾರ, ರಾಜಸ್ಥಾನ ಸರ್ಕಾರ ಬಿಕ್ಕಟ್ಟು, ರಾಜಸ್ಥಾನ ರಾಜಕೀಯ ಬಿಕ್ಕಟ್ಟು, ರೆಸಾರ್ಟ್​ ರಾಜಕೀಯ, ರಾಜಸ್ಥಾನ ರೆಸಾರ್ಟ್​ ರಾಜಕೀಯ, ರಾಜಸ್ಥಾನ ರಾಜಕೀಯ ಸುದ್ದಿ,
ಕುಸಿಯುವ ಭಯದಲ್ಲಿ ರಾಜಸ್ಥಾನ ಸರ್ಕಾರ

ಜೈಪುರ: ರಾಜಸ್ಥಾನದಲ್ಲಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಅಶೋಕ್​ ಗೆಹ್ಲೋಟ್​​ ಹರಸಾಹಸ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಇನ್ನು ಕಾಂಗ್ರೆಸ್ ಶಾಸಕರನ್ನ ಜೈಪುರದ ಬಳಿಯ ರೆಸಾರ್ಟ್​ನಲ್ಲಿ ಹಿಡಿದಿಡಲಾಗಿದೆ. ಮತ್ತೊಂದು ಕಡೆ ಬಂಡಾಯ ಎದ್ದಿರುವ ಸಚಿನ್ ಪೈಲಟ್​​ ಮನವೊಲಿಸಲು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ, ಪಕ್ಷದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಿರಿಯ ನಾಯಕರು ಸಚಿನ್​ ಪೈಲಟ್​ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • My heartfelt thanks and gratitude to all those who have come out in my support today.
    राम राम सा !

    — Sachin Pilot (@SachinPilot) July 14, 2020 " class="align-text-top noRightClick twitterSection" data=" ">
ಕುಸಿಯುವ ಭಯದಲ್ಲಿ ರಾಜಸ್ಥಾನ ಸರ್ಕಾರ

ನಿನ್ನೆ ಎರಡನೇ ಬಾರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್​ ಸೇರಿದಂತೆ 18 ಮಂದಿ ಕಾಂಗ್ರೆಸ್​ ಬಂಡಾಯ ಶಾಸಕರು ಗೈರು ಹಾಜರಾಗಿದ್ದರು. ವಿಧಾನಸಭೆಯಲ್ಲಿ 107 ಕಾಂಗ್ರೆಸ್ ಶಾಸಕರಿದ್ದಾರೆ. 15 ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಬಂಡಾಯ ಶಾಸಕರನ್ನ ಹೊರತುಪಡಿಸಿ ಉಳಿದ ಎಲ್ಲ ಶಾಸಕರು, ಪಕ್ಷೇತರರು ನಿನ್ನೆಯ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿ, ಅಶೋಕ್​ ಗೆಹ್ಲೋಟ್​ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಿಎಂ ಹಾಗೂ ಪಕ್ಷಕ್ಕೆ ಸಭೆ ಅಂಗೀಕಾರ ನೀಡಿ, ನಿರ್ಣಯ ಕೈಗೊಂಡಿದೆ. ಸಭೆಯಲ್ಲಿ ಪಕ್ಷದ ಅಧ್ಯಕ್ಷರಾಗಿರುವ ಸಚಿನ್ ಪೈಲಟ್​ ಅವರ ಹೆಸರನ್ನು ಪ್ರಸ್ತಾಪಿಸದಿರುವುದು ಕಂಡು ಬಂತು. ಎರಡನೇ ಸಭೆ ಬಳಿಕವೂ ಎಐಸಿಸಿ ವಕ್ತಾರ ರಂದೀಪ್​ ಸುರ್ಜೆವಾಲಾ, ಬಂಡಾಯ ಎದ್ದಿರುವ ಶಾಸಕರು ಸಭೆಗೆ ಹಾಜರಾಗಲು ಈಗಲೂ ಬಾಗಿಲು ತೆರೆದಿದೆ ಎಂದು ಆಹ್ವಾನ ನೀಡಿದರು.

ಮಾತುಕತೆಗೆ ಪಕ್ಷ ಸಿದ್ಧ ಇದೆ. ಸಚಿನ್​ ಸೇರಿದಂತೆ ಎಲ್ಲ ಶಾಸಕರು ತಮ್ಮ ಅಹವಾಲನ್ನು ಪಕ್ಷದ ಮುಂದಿಟ್ಟು ಪರಿಹಾರ ಕಂಡುಕೊಳ್ಳಬಹುದು ಎಂದು ಸುರ್ಜೆವಾಲಾ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಇದ್ಯಾವುದಕ್ಕೂ ಬಗ್ಗದಿದ್ದರೆ ಶಿಸ್ತುಕ್ರಮ ಅನಿವಾರ್ಯ ಎಂದು ಎಚ್ಚರಿಕೆಯನ್ನೂ ರವಾನಿಸಿದರು.

  • में @SachinPilot और उनके सभी साथी विधायकों से अपील करता हूँ की वे आज की विधायक दल की बैठक में शामिल हों। कांग्रेस की विचारधारा और मूल्यों में अपना विश्वास जताते हुए कृपया अपनी उपस्थिति निश्चित करें व श्रीमती सोनिया गांघी जी व श्री राहुल गांधी जी के हाथ मज़बूत करें।

    — Avinash Pande (@avinashpandeinc) July 14, 2020 " class="align-text-top noRightClick twitterSection" data=" ">
  • " जिंदा हो तो जिंदा नजर आना जरूरी है
    उसूलों पर आंच आए तो टकराना जरूरी है"

    कांग्रेस में निष्ठा का मतलब है अशोक गहलोत की गुलामी।
    वो हमें मंजूर नहीं।

    — Mukesh Bhakar (@MukeshBhakar_) July 13, 2020 " class="align-text-top noRightClick twitterSection" data=" ">

ಮುಂದುವರಿದ ಸಂಧಾನ:

ಒಂದು ಕಡೆ ಶಿಸ್ತುಕ್ರಮದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದು ಕಡೆ ಸಚಿನ್ ಪೈಲಟ್ ಜತೆ ಕೇಂದ್ರ ನಾಯಕರು ನಿರಂತರ ಸಂಧಾನ ಮಾತುಕತೆ ಮುಂದುವರಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲದೇ, ಅಹ್ಮದ್ ಪಟೇಲ್, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪೈಲಟ್ ಅವರೊಂದಿಗೆ ಮಾತನಾಡಿದ್ದಾರೆಂದು ತಿಳಿದುಬಂದಿದೆ.

  • सत्य को परेशान किया जा सकता है पराजित नहीं।

    — Sachin Pilot (@SachinPilot) July 14, 2020 " class="align-text-top noRightClick twitterSection" data=" ">
  • Sachin Pilot is not just a collegues but my friend. No one can take away the fact that all these years he has worked with dedication for the party. Sincerely hope the situation can still be salvaged. Sad it has come to this...

    — Jitin Prasada जितिन प्रसाद (@JitinPrasada) July 14, 2020 " class="align-text-top noRightClick twitterSection" data=" ">

ಜೈಪುರ: ರಾಜಸ್ಥಾನದಲ್ಲಿ ಸರ್ಕಾರ ಉಳಿಸಿಕೊಳ್ಳಲು ಸಿಎಂ ಅಶೋಕ್​ ಗೆಹ್ಲೋಟ್​​ ಹರಸಾಹಸ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಇನ್ನು ಕಾಂಗ್ರೆಸ್ ಶಾಸಕರನ್ನ ಜೈಪುರದ ಬಳಿಯ ರೆಸಾರ್ಟ್​ನಲ್ಲಿ ಹಿಡಿದಿಡಲಾಗಿದೆ. ಮತ್ತೊಂದು ಕಡೆ ಬಂಡಾಯ ಎದ್ದಿರುವ ಸಚಿನ್ ಪೈಲಟ್​​ ಮನವೊಲಿಸಲು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ, ಪಕ್ಷದ ಹಿರಿಯ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಿರಿಯ ನಾಯಕರು ಸಚಿನ್​ ಪೈಲಟ್​ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • My heartfelt thanks and gratitude to all those who have come out in my support today.
    राम राम सा !

    — Sachin Pilot (@SachinPilot) July 14, 2020 " class="align-text-top noRightClick twitterSection" data=" ">
ಕುಸಿಯುವ ಭಯದಲ್ಲಿ ರಾಜಸ್ಥಾನ ಸರ್ಕಾರ

ನಿನ್ನೆ ಎರಡನೇ ಬಾರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್​ ಸೇರಿದಂತೆ 18 ಮಂದಿ ಕಾಂಗ್ರೆಸ್​ ಬಂಡಾಯ ಶಾಸಕರು ಗೈರು ಹಾಜರಾಗಿದ್ದರು. ವಿಧಾನಸಭೆಯಲ್ಲಿ 107 ಕಾಂಗ್ರೆಸ್ ಶಾಸಕರಿದ್ದಾರೆ. 15 ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಬಂಡಾಯ ಶಾಸಕರನ್ನ ಹೊರತುಪಡಿಸಿ ಉಳಿದ ಎಲ್ಲ ಶಾಸಕರು, ಪಕ್ಷೇತರರು ನಿನ್ನೆಯ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿ, ಅಶೋಕ್​ ಗೆಹ್ಲೋಟ್​ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಿಎಂ ಹಾಗೂ ಪಕ್ಷಕ್ಕೆ ಸಭೆ ಅಂಗೀಕಾರ ನೀಡಿ, ನಿರ್ಣಯ ಕೈಗೊಂಡಿದೆ. ಸಭೆಯಲ್ಲಿ ಪಕ್ಷದ ಅಧ್ಯಕ್ಷರಾಗಿರುವ ಸಚಿನ್ ಪೈಲಟ್​ ಅವರ ಹೆಸರನ್ನು ಪ್ರಸ್ತಾಪಿಸದಿರುವುದು ಕಂಡು ಬಂತು. ಎರಡನೇ ಸಭೆ ಬಳಿಕವೂ ಎಐಸಿಸಿ ವಕ್ತಾರ ರಂದೀಪ್​ ಸುರ್ಜೆವಾಲಾ, ಬಂಡಾಯ ಎದ್ದಿರುವ ಶಾಸಕರು ಸಭೆಗೆ ಹಾಜರಾಗಲು ಈಗಲೂ ಬಾಗಿಲು ತೆರೆದಿದೆ ಎಂದು ಆಹ್ವಾನ ನೀಡಿದರು.

ಮಾತುಕತೆಗೆ ಪಕ್ಷ ಸಿದ್ಧ ಇದೆ. ಸಚಿನ್​ ಸೇರಿದಂತೆ ಎಲ್ಲ ಶಾಸಕರು ತಮ್ಮ ಅಹವಾಲನ್ನು ಪಕ್ಷದ ಮುಂದಿಟ್ಟು ಪರಿಹಾರ ಕಂಡುಕೊಳ್ಳಬಹುದು ಎಂದು ಸುರ್ಜೆವಾಲಾ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಇದ್ಯಾವುದಕ್ಕೂ ಬಗ್ಗದಿದ್ದರೆ ಶಿಸ್ತುಕ್ರಮ ಅನಿವಾರ್ಯ ಎಂದು ಎಚ್ಚರಿಕೆಯನ್ನೂ ರವಾನಿಸಿದರು.

  • में @SachinPilot और उनके सभी साथी विधायकों से अपील करता हूँ की वे आज की विधायक दल की बैठक में शामिल हों। कांग्रेस की विचारधारा और मूल्यों में अपना विश्वास जताते हुए कृपया अपनी उपस्थिति निश्चित करें व श्रीमती सोनिया गांघी जी व श्री राहुल गांधी जी के हाथ मज़बूत करें।

    — Avinash Pande (@avinashpandeinc) July 14, 2020 " class="align-text-top noRightClick twitterSection" data=" ">
  • " जिंदा हो तो जिंदा नजर आना जरूरी है
    उसूलों पर आंच आए तो टकराना जरूरी है"

    कांग्रेस में निष्ठा का मतलब है अशोक गहलोत की गुलामी।
    वो हमें मंजूर नहीं।

    — Mukesh Bhakar (@MukeshBhakar_) July 13, 2020 " class="align-text-top noRightClick twitterSection" data=" ">

ಮುಂದುವರಿದ ಸಂಧಾನ:

ಒಂದು ಕಡೆ ಶಿಸ್ತುಕ್ರಮದ ಬಗ್ಗೆ ಮಾತನಾಡುತ್ತಿದ್ದರೆ, ಇನ್ನೊಂದು ಕಡೆ ಸಚಿನ್ ಪೈಲಟ್ ಜತೆ ಕೇಂದ್ರ ನಾಯಕರು ನಿರಂತರ ಸಂಧಾನ ಮಾತುಕತೆ ಮುಂದುವರಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರಲ್ಲದೇ, ಅಹ್ಮದ್ ಪಟೇಲ್, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಪೈಲಟ್ ಅವರೊಂದಿಗೆ ಮಾತನಾಡಿದ್ದಾರೆಂದು ತಿಳಿದುಬಂದಿದೆ.

  • सत्य को परेशान किया जा सकता है पराजित नहीं।

    — Sachin Pilot (@SachinPilot) July 14, 2020 " class="align-text-top noRightClick twitterSection" data=" ">
  • Sachin Pilot is not just a collegues but my friend. No one can take away the fact that all these years he has worked with dedication for the party. Sincerely hope the situation can still be salvaged. Sad it has come to this...

    — Jitin Prasada जितिन प्रसाद (@JitinPrasada) July 14, 2020 " class="align-text-top noRightClick twitterSection" data=" ">
ETV Bharat Logo

Copyright © 2024 Ushodaya Enterprises Pvt. Ltd., All Rights Reserved.