ETV Bharat / bharat

ಲಲಿತಾ ಸಹಸ್ರ ನಾಮದ 108 ಹೆಸರುಗಳು ರೇಷ್ಮೆ ಸೀರೆಯಲ್ಲಿ ಕಸೂತಿ : ಶ್ರೀಶೈಲ ಭ್ರಮರಾಂಬಿಕಾ ದೇವಿಗೆ ಅರ್ಪಣೆ - LALITA SAHASRA NAMA ON SILK SAREE

ಆಂಧ್ರಪ್ರದೇಶದ ಭಕ್ತೆಯೊಬ್ಬರು ರೇಷ್ಮೆ ಸೀರೆಯಲ್ಲಿ ಲಲಿತಾ ಸಹಸ್ರ ನಾಮದ 108 ಹೆಸರುಗಳನ್ನು ಕಸೂತಿ ಮಾಡುವ ಮೂಲಕ ದೇವಿಗೆ ಅರ್ಪಿಸಿದ್ದಾರೆ.

WOMAN EMBROIDERS LALITA SAHASRA NAMA ON SILK SAREE AS A UNIQUE OFFERING
ಲಲಿತಾ ಸಹಸ್ರ ನಾಮದ 108 ಹೆಸರುಗಳು ರೇಷ್ಮೆ ಸೀರೆಯಲ್ಲಿ ಕಸೂತಿ: ಶ್ರೀಶೈಲ ಭ್ರಮರಾಂಬಿಕಾ ದೇವಿಗೆ ಅರ್ಪಣೆ (ETV Bharat)
author img

By ETV Bharat Karnataka Team

Published : Feb 3, 2025, 12:55 PM IST

ಚಿರಾಲ (ಆಂಧ್ರಪ್ರದೇಶ) : ಬಾಪಟ್ಲಾ ಜಿಲ್ಲೆಯ ಚಿರಾಲದ ಚುಂಡೂರಿ ಸರಸ್ವತಿ ಎನ್ನುವ ಭಕ್ತೆ ಶ್ರೀಶೈಲ ಭ್ರಮರಾಂಬಿಕಾ ದೇವಿಗೆ ಅರ್ಪಣೆಯಾಗಿ ಲಲಿತಾ ಸಹಸ್ರ ನಾಮದಲ್ಲಿನ 108 ಹೆಸರುಗಳನ್ನು ರೇಷ್ಮೆ ಸೀರೆಯಲ್ಲಿ ಕಸೂತಿ ಮಾಡಿದ್ದಾರೆ.

ಶ್ರೀಶೈಲದಲ್ಲಿ ಭ್ರಮರಾಂಬ ಸೇವಾ ಸಮಿತಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸರಸ್ವತಿ ಅವರು ದೇವಿಗೆ ವಿಶಿಷ್ಟವಾದದ್ದನ್ನು ರಚಿಸಲು ಪ್ರೇರೇಪಣೆಗೊಳ್ಳುತ್ತಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸೀರೆಯಲ್ಲಿ ಲಲಿತಾ ಸಹಸ್ರ ನಾಮದ 108 ಹೆಸರನ್ನು ಮೊದಲು ಪೆನ್ಸಿಲ್​ನಲ್ಲಿ ಬರೆದು, ಕಸೂತಿ ಮಾಡಲು ಸರಸ್ವತಿ ಅವರು ಆರಂಭಿಸುತ್ತಾರೆ.

ಹತ್ತಿರತ್ತಿರ ಒಂದು ವರ್ಷದ ಶ್ರಮ, ಸಮರ್ಪಣೆಯ ಮೂಲಕ ಅವರು ಈಗ ಪೂರ್ಣಗೊಳಿಸಿದ್ದು, ಈ ತಿಂಗಳ ಮಾಘ ಮಾಸದ ಹುಣ್ಣಿಮೆಯ ದಿನದಂದು ಅದನ್ನು ದೇವಿಗೆ ಅರ್ಪಿಸಲು ಯೋಜಿಸಿದ್ದಾರೆ.

ಇಲ್ಲಿಗೆ ಇವರ ಭಕ್ತಿಕಾರ್ಯ ನಿಲ್ಲುವುದಿಲ್ಲ. ಸರಸ್ವತಿ ಅವರು ಈಗ ಶಿವ ಮತ್ತು ಭ್ರಮರಾಂಬಿಕಾ ದೇವಿಯ 800 ಹೆಸರುಗಳನ್ನು ಕಾಗದದ ಮೇಲೆ ಬರೆಯುತ್ತಿದ್ದು, ಅವುಗಳನ್ನು ಪವಿತ್ರ ಗೌರವವಾಗಿ ಸಲ್ಲಿಸಲು ಉದ್ದೇಶಿಸಿದ್ದಾರೆ.

ಅವರ ಭಕ್ತಿಯಲ್ಲಿ ನಂಬಿಕೆ, ತಾಳ್ಮೆ ಮತ್ತು ಪರಿಶ್ರಮ ಎಲ್ಲವೂ ಅಡಗಿದೆ. ಅದಕ್ಕೆ ಅವರ ಕೆಲಸ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮೂರನೇ ಅಮೃತ ಸ್ನಾನಕ್ಕೆ ಸಾಕ್ಷಿಯಾದ ಮಹಾಕುಂಭಮೇಳ: ವಸಂತ ಪಂಚಮಿಗೆ UP ಸರ್ಕಾರದಿಂದ ಮತ್ತಷ್ಟು ಭದ್ರತೆ

ಚಿರಾಲ (ಆಂಧ್ರಪ್ರದೇಶ) : ಬಾಪಟ್ಲಾ ಜಿಲ್ಲೆಯ ಚಿರಾಲದ ಚುಂಡೂರಿ ಸರಸ್ವತಿ ಎನ್ನುವ ಭಕ್ತೆ ಶ್ರೀಶೈಲ ಭ್ರಮರಾಂಬಿಕಾ ದೇವಿಗೆ ಅರ್ಪಣೆಯಾಗಿ ಲಲಿತಾ ಸಹಸ್ರ ನಾಮದಲ್ಲಿನ 108 ಹೆಸರುಗಳನ್ನು ರೇಷ್ಮೆ ಸೀರೆಯಲ್ಲಿ ಕಸೂತಿ ಮಾಡಿದ್ದಾರೆ.

ಶ್ರೀಶೈಲದಲ್ಲಿ ಭ್ರಮರಾಂಬ ಸೇವಾ ಸಮಿತಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಸರಸ್ವತಿ ಅವರು ದೇವಿಗೆ ವಿಶಿಷ್ಟವಾದದ್ದನ್ನು ರಚಿಸಲು ಪ್ರೇರೇಪಣೆಗೊಳ್ಳುತ್ತಾರೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸೀರೆಯಲ್ಲಿ ಲಲಿತಾ ಸಹಸ್ರ ನಾಮದ 108 ಹೆಸರನ್ನು ಮೊದಲು ಪೆನ್ಸಿಲ್​ನಲ್ಲಿ ಬರೆದು, ಕಸೂತಿ ಮಾಡಲು ಸರಸ್ವತಿ ಅವರು ಆರಂಭಿಸುತ್ತಾರೆ.

ಹತ್ತಿರತ್ತಿರ ಒಂದು ವರ್ಷದ ಶ್ರಮ, ಸಮರ್ಪಣೆಯ ಮೂಲಕ ಅವರು ಈಗ ಪೂರ್ಣಗೊಳಿಸಿದ್ದು, ಈ ತಿಂಗಳ ಮಾಘ ಮಾಸದ ಹುಣ್ಣಿಮೆಯ ದಿನದಂದು ಅದನ್ನು ದೇವಿಗೆ ಅರ್ಪಿಸಲು ಯೋಜಿಸಿದ್ದಾರೆ.

ಇಲ್ಲಿಗೆ ಇವರ ಭಕ್ತಿಕಾರ್ಯ ನಿಲ್ಲುವುದಿಲ್ಲ. ಸರಸ್ವತಿ ಅವರು ಈಗ ಶಿವ ಮತ್ತು ಭ್ರಮರಾಂಬಿಕಾ ದೇವಿಯ 800 ಹೆಸರುಗಳನ್ನು ಕಾಗದದ ಮೇಲೆ ಬರೆಯುತ್ತಿದ್ದು, ಅವುಗಳನ್ನು ಪವಿತ್ರ ಗೌರವವಾಗಿ ಸಲ್ಲಿಸಲು ಉದ್ದೇಶಿಸಿದ್ದಾರೆ.

ಅವರ ಭಕ್ತಿಯಲ್ಲಿ ನಂಬಿಕೆ, ತಾಳ್ಮೆ ಮತ್ತು ಪರಿಶ್ರಮ ಎಲ್ಲವೂ ಅಡಗಿದೆ. ಅದಕ್ಕೆ ಅವರ ಕೆಲಸ ಸಾಕ್ಷಿಯಾಗಿದೆ.

ಇದನ್ನೂ ಓದಿ: ಮೂರನೇ ಅಮೃತ ಸ್ನಾನಕ್ಕೆ ಸಾಕ್ಷಿಯಾದ ಮಹಾಕುಂಭಮೇಳ: ವಸಂತ ಪಂಚಮಿಗೆ UP ಸರ್ಕಾರದಿಂದ ಮತ್ತಷ್ಟು ಭದ್ರತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.