ETV Bharat / bharat

ಹಣ ಪ್ರಾಣ ತೆಗೆಯಿತು! ಚಾಕುವಿನಿಂದ ಇರಿದು ಪತ್ರಕರ್ತನ ಕೊಲೆ

ಹಿರಿಯ ಮಾಧ್ಯಮ ಛಾಯಾಗ್ರಾಹಕ ಹಾಗೂ ವಾರಂಗಲ್ ಪ್ರೆಸ್ ಕ್ಲಬ್‌ನ ಖಜಾಂಚಿಯನ್ನು ಹಣದ ವಿಚಾರಕ್ಕೆ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ತೆಲಂಗಾಣದಲ್ಲಿ ನಡೆದಿದೆ.

author img

By

Published : Mar 3, 2020, 9:35 PM IST

Photojournalist stabbed to death
ಪರ್ತಕರ್ತನ ಕೊಲೆ

ತೆಲಂಗಾಣ: ಹಣದ ವಿಚಾರ ಸಂಬಂಧ ಮಾಧ್ಯಮ ಛಾಯಾಗ್ರಾಹಕನಿಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಹಿರಿಯ ಮಾಧ್ಯಮ ಛಾಯಾಗ್ರಾಹಕ ಹಾಗೂ ವಾರಂಗಲ್ ಪ್ರೆಸ್ ಕ್ಲಬ್‌ನ ಖಜಾಂಚಿಯಾಗಿದ್ದ ಬೊಮ್ಮಿನೇನಿ ಸುನಿಲ್​ ರೆಡ್ಡಿ (38) ಮೃತಪಟ್ಟಿದ್ದು, ಇವರ ಸ್ನೇಹಿತನಿಗೆ ಗಾಯಗಳಾಗಿವೆ.

ಘಟನೆಯ ಹಿನ್ನೆಲೆ:

ಸೋಮವಾರ ರಾತ್ರಿ ಪಾಸ್ರಾ ಗ್ರಾಮದ ಬೇಕರಿಯೊಂದರ ಮಾಲೀಕನಿಗೆ ನೀಡಿದ್ದ ಸಾಲದ ಬಾಕಿ ಹಣವನ್ನು ವಸೂಲಿ ಮಾಡಲು ಇವರಿಬ್ಬರು ಹೋದಾಗ ಮೂವರ ಮಧ್ಯೆ ಜಗಳ ಪ್ರಾರಂಭವಾಗಿದೆ. ಈ ವೇಳೆ ಬೇಕರಿ ಮಾಲೀಕನು ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪತ್ರಕರ್ತ ಹಾಗೂ ಅವರ ಸ್ನೇಹಿತನಿಗೆ ಇರಿದಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇವರಿಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೆ ಪತ್ರಕರ್ತ ಸುನಿಲ್​ ರೆಡ್ಡಿ ಮೃತಪಟ್ಟಿದ್ದು, ಅವರ ಸ್ನೇಹಿತನ ಸ್ಥಿತಿ ಗಂಭೀರವಾಗಿದೆ.

ತೆಲಂಗಾಣ: ಹಣದ ವಿಚಾರ ಸಂಬಂಧ ಮಾಧ್ಯಮ ಛಾಯಾಗ್ರಾಹಕನಿಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಹಿರಿಯ ಮಾಧ್ಯಮ ಛಾಯಾಗ್ರಾಹಕ ಹಾಗೂ ವಾರಂಗಲ್ ಪ್ರೆಸ್ ಕ್ಲಬ್‌ನ ಖಜಾಂಚಿಯಾಗಿದ್ದ ಬೊಮ್ಮಿನೇನಿ ಸುನಿಲ್​ ರೆಡ್ಡಿ (38) ಮೃತಪಟ್ಟಿದ್ದು, ಇವರ ಸ್ನೇಹಿತನಿಗೆ ಗಾಯಗಳಾಗಿವೆ.

ಘಟನೆಯ ಹಿನ್ನೆಲೆ:

ಸೋಮವಾರ ರಾತ್ರಿ ಪಾಸ್ರಾ ಗ್ರಾಮದ ಬೇಕರಿಯೊಂದರ ಮಾಲೀಕನಿಗೆ ನೀಡಿದ್ದ ಸಾಲದ ಬಾಕಿ ಹಣವನ್ನು ವಸೂಲಿ ಮಾಡಲು ಇವರಿಬ್ಬರು ಹೋದಾಗ ಮೂವರ ಮಧ್ಯೆ ಜಗಳ ಪ್ರಾರಂಭವಾಗಿದೆ. ಈ ವೇಳೆ ಬೇಕರಿ ಮಾಲೀಕನು ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪತ್ರಕರ್ತ ಹಾಗೂ ಅವರ ಸ್ನೇಹಿತನಿಗೆ ಇರಿದಿದ್ದಾನೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇವರಿಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೆ ಪತ್ರಕರ್ತ ಸುನಿಲ್​ ರೆಡ್ಡಿ ಮೃತಪಟ್ಟಿದ್ದು, ಅವರ ಸ್ನೇಹಿತನ ಸ್ಥಿತಿ ಗಂಭೀರವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.