ETV Bharat / bharat

ವಲಸೆ ಕಾರ್ಮಿಕರನ್ನು ಭೇಟಿಯಾಗದಂತೆ ಸೋನು ಸೂದ್​ಗೆ ತಡೆ

author img

By

Published : Jun 9, 2020, 4:14 PM IST

ಮುಂಬೈನಲ್ಲಿನ ವಲಸೆ ಕಾರ್ಮಿಕರು ಉತ್ತರ ಪ್ರದೇಶದ ಅಝಮಗಡ್​ಗೆ ತೆರಳಲು ಅನುಕೂಲವಾಗುವಂತೆ ಸೂದ್,​ ಅವರಿಗಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಸೋಮವಾರ ರಾತ್ರಿ ವಲಸೆ ಕಾರ್ಮಿಕರನ್ನು ಭೇಟಿಯಾಗಲು ಮುಂಬೈನ ಬಾಂದ್ರಾ ರೈಲು ನಿಲ್ದಾಣಕ್ಕೆ ಅವರು ತೆರಳಿದ್ದರು. ಆದರೆ ಅಲ್ಲಿ ಕಾವಲಿದ್ದ ರೈಲ್ವೆ ಸುರಕ್ಷಾ ದಳದ ಸಿಬ್ಬಂದಿ ಸೂದ್​ ಅವರನ್ನು ಪ್ಲಾಟ್​ಫಾರ್ಮ್ ಒಳಗೆ ಬಿಡಲಿಲ್ಲ.

sonu sood denied entry at bandra terminus
sonu sood denied entry at bandra terminus

ಮುಂಬೈ: ಲಾಕ್​ಡೌನ್​ನಿಂದಾಗಿ ಮುಂಬೈನಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ಶ್ರಮಿಸುತ್ತಿರುವ ನಟ ಸೋನು ಸೂದ್ ಅವರು ವಲಸೆ ಕಾರ್ಮಿಕರನ್ನು ಭೇಟಿಯಾಗದಂತೆ ಮಹಾರಾಷ್ಟ್ರ ಸರಕಾರ ತಡೆ ಒಡ್ಡಿದೆ.

ಮುಂಬೈನಲ್ಲಿನ ವಲಸೆ ಕಾರ್ಮಿಕರು ಉತ್ತರ ಪ್ರದೇಶದ ಅಝಮಗಡ್​ಗೆ ತೆರಳಲು ಅನುಕೂಲವಾಗುವಂತೆ ಸೂದ್,​ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಸೋಮವಾರ ರಾತ್ರಿ ವಲಸೆ ಕಾರ್ಮಿಕರನ್ನು ಭೇಟಿಯಾಗಲು ಮುಂಬೈನ ಬಾಂದ್ರಾ ರೈಲು ನಿಲ್ದಾಣಕ್ಕೆ ಅವರು ತೆರಳಿದ್ದರು. ಆದರೆ ಅಲ್ಲಿ ಕಾವಲಿದ್ದ ರೈಲ್ವೆ ಸುರಕ್ಷಾ ದಳದ ಸಿಬ್ಬಂದಿ ಸೂದ್​ ಅವರನ್ನು ಪ್ಲಾಟ್​ಫಾರ್ಮ್ ಒಳಗೆ ಬಿಡಲಿಲ್ಲ. ಸುಮಾರು 45 ನಿಮಿಷ ಆರ್​ಪಿಎಫ್​ ಕಚೇರಿ ಎದುರು ಕಾದ ಸೂದ್ ಕಾರ್ಮಿಕರನ್ನು ಭೇಟಿಯಾಗದೆ ವಾಪಸ್ ತೆರಳಬೇಕಾಯಿತು.

"ನನಗೆ ಪ್ಲಾಟ್​ಫಾರ್ಮ್ ಪ್ರವೇಶಿಸುವ ಹಕ್ಕು ಇದೆ ಅಥವಾ ಇಲ್ಲ ಎಂಬುದು ಮುಖ್ಯವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಸುರಕ್ಷಿತವಾಗಿ ಅವರ ಊರುಗಳಿಗೆ ತೆರಳಿದರೆ ಅಷ್ಟೇ ಸಾಕು. ನಾನು ಅವರಿಗೆ ಶುಭಾಶಯ ಹೇಳಲು ಮಾತ್ರ ಬಂದಿದ್ದೆ." ಎಂದು ಈ ಸಂದರ್ಭದಲ್ಲಿ ಸೂದ್ ಹೇಳಿದರು.

ಮುಂಬೈ ರೈಲ್ವೆ ವಿಭಾಗದ ವ್ಯವಸ್ಥಾಪಕರ ಅನುಮತಿ ಇಲ್ಲದ ಕಾರಣ ಸೂದ್ ಅವರನ್ನು ಪ್ಲಾಟ್​ಫಾರ್ಮ್​ ಮೇಲೆ ಬಿಡಲಿಲ್ಲ ಎಂದು ಆರ್​ಪಿಎಫ್​ ಮೂಲಗಳು ತಿಳಿಸಿವೆ.

ವಲಸೆ ಕಾರ್ಮಿಕರಿಗೆ ಸೋನು ಸೂದ್ ಅವರು ಸಹಾಯ ಮಾಡುತ್ತಿರುವ ವಿಷಯ ಈಗ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಶಿವಸೇನೆ ಎರಡೂ ಪಕ್ಷಗಳು ಈ ವಿಷಯದಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿವೆ ಎನ್ನಲಾಗಿದೆ.

ಮುಂಬೈ: ಲಾಕ್​ಡೌನ್​ನಿಂದಾಗಿ ಮುಂಬೈನಲ್ಲಿ ಸಿಕ್ಕಿಬಿದ್ದಿರುವ ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಲು ಶ್ರಮಿಸುತ್ತಿರುವ ನಟ ಸೋನು ಸೂದ್ ಅವರು ವಲಸೆ ಕಾರ್ಮಿಕರನ್ನು ಭೇಟಿಯಾಗದಂತೆ ಮಹಾರಾಷ್ಟ್ರ ಸರಕಾರ ತಡೆ ಒಡ್ಡಿದೆ.

ಮುಂಬೈನಲ್ಲಿನ ವಲಸೆ ಕಾರ್ಮಿಕರು ಉತ್ತರ ಪ್ರದೇಶದ ಅಝಮಗಡ್​ಗೆ ತೆರಳಲು ಅನುಕೂಲವಾಗುವಂತೆ ಸೂದ್,​ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಸೋಮವಾರ ರಾತ್ರಿ ವಲಸೆ ಕಾರ್ಮಿಕರನ್ನು ಭೇಟಿಯಾಗಲು ಮುಂಬೈನ ಬಾಂದ್ರಾ ರೈಲು ನಿಲ್ದಾಣಕ್ಕೆ ಅವರು ತೆರಳಿದ್ದರು. ಆದರೆ ಅಲ್ಲಿ ಕಾವಲಿದ್ದ ರೈಲ್ವೆ ಸುರಕ್ಷಾ ದಳದ ಸಿಬ್ಬಂದಿ ಸೂದ್​ ಅವರನ್ನು ಪ್ಲಾಟ್​ಫಾರ್ಮ್ ಒಳಗೆ ಬಿಡಲಿಲ್ಲ. ಸುಮಾರು 45 ನಿಮಿಷ ಆರ್​ಪಿಎಫ್​ ಕಚೇರಿ ಎದುರು ಕಾದ ಸೂದ್ ಕಾರ್ಮಿಕರನ್ನು ಭೇಟಿಯಾಗದೆ ವಾಪಸ್ ತೆರಳಬೇಕಾಯಿತು.

"ನನಗೆ ಪ್ಲಾಟ್​ಫಾರ್ಮ್ ಪ್ರವೇಶಿಸುವ ಹಕ್ಕು ಇದೆ ಅಥವಾ ಇಲ್ಲ ಎಂಬುದು ಮುಖ್ಯವಲ್ಲ. ಸದ್ಯದ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಸುರಕ್ಷಿತವಾಗಿ ಅವರ ಊರುಗಳಿಗೆ ತೆರಳಿದರೆ ಅಷ್ಟೇ ಸಾಕು. ನಾನು ಅವರಿಗೆ ಶುಭಾಶಯ ಹೇಳಲು ಮಾತ್ರ ಬಂದಿದ್ದೆ." ಎಂದು ಈ ಸಂದರ್ಭದಲ್ಲಿ ಸೂದ್ ಹೇಳಿದರು.

ಮುಂಬೈ ರೈಲ್ವೆ ವಿಭಾಗದ ವ್ಯವಸ್ಥಾಪಕರ ಅನುಮತಿ ಇಲ್ಲದ ಕಾರಣ ಸೂದ್ ಅವರನ್ನು ಪ್ಲಾಟ್​ಫಾರ್ಮ್​ ಮೇಲೆ ಬಿಡಲಿಲ್ಲ ಎಂದು ಆರ್​ಪಿಎಫ್​ ಮೂಲಗಳು ತಿಳಿಸಿವೆ.

ವಲಸೆ ಕಾರ್ಮಿಕರಿಗೆ ಸೋನು ಸೂದ್ ಅವರು ಸಹಾಯ ಮಾಡುತ್ತಿರುವ ವಿಷಯ ಈಗ ರಾಜಕೀಯ ರಂಗು ಪಡೆದುಕೊಳ್ಳುತ್ತಿದೆ. ಬಿಜೆಪಿ ಹಾಗೂ ಶಿವಸೇನೆ ಎರಡೂ ಪಕ್ಷಗಳು ಈ ವಿಷಯದಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿವೆ ಎನ್ನಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.