ETV Bharat / bharat

ಕೊಲ್ಹಾಪುರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಂಚಗಂಗಾ

author img

By

Published : Aug 7, 2020, 10:22 AM IST

Updated : Aug 7, 2020, 10:36 AM IST

ರಾಧನಗರಿ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದಂತೆ, ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, 23 ಹಳ್ಳಿಗಳಿಂದ ಜನರನ್ನು ಸ್ಥಳಾಂತರಿಸಲಾಗಿದೆ.

panchaganga
panchaganga

ಕೊಲ್ಹಾಪುರ (ಮಹಾರಾಷ್ಟ್ರ): ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಪಂಚಗಂಗಾ ನದಿ ಅಪಾಯದ ಮಟ್ಟ ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಧನಗರಿ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದಂತೆ, ನೀರನ್ನು ಬಿಡುಗಡೆ ಮಾಡಲಾಗಿದೆ. ಇದು ನದಿಯ ಮಟ್ಟ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಂಚಗಂಗಾ

23 ಹಳ್ಳಿಗಳಿಂದ ಸುಮಾರು 1,750 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೊಲ್ಹಾಪುರ ನಗರದ ಹೊರಗಿನ ರಾಜಾರಾಮ್ ವೀರ್‌ನಲ್ಲಿ 43 ಅಡಿಗಳಷ್ಟು ಅಂದರೆ ಅಪಾಯದ ಮಟ್ಟ ಮೀರಿ ಈ ನದಿ ಹರಿಯುತ್ತಿದೆ.

"ಗದಿಂಗ್ಲಾಸ್, ಪನ್ಹಾಲಾ, ಕಾರ್ವೀರ್, ಗಗನ್ಬಾವ್ಡಾ, ಅಜಾರಾ, ಮತ್ತು ಕೊಲ್ಹಾಪುರ ನಗರದ 23 ಗ್ರಾಮಗಳ 1,750 ಕುಟುಂಬಗಳಿಂದ ಈವರೆಗೆ 4,413 ಜನರನ್ನು ಸ್ಥಳಾಂತರಿಸಲಾಗಿದೆ" ಎಂದು ಜಿಲ್ಲಾಧಿಕಾರಿ ದೌಲತ್ ದೇಸಾಯಿ ತಿಳಿಸಿದ್ದಾರೆ. ಸುಮಾರು 1,100 ಜಾನುವಾರುಗಳನ್ನು ಕೂಡಾ ಸ್ಥಳಾಂತರಿಸಲಾಗಿದೆ.

ಕೊಲ್ಹಾಪುರ (ಮಹಾರಾಷ್ಟ್ರ): ಪಶ್ಚಿಮ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಪಂಚಗಂಗಾ ನದಿ ಅಪಾಯದ ಮಟ್ಟ ದಾಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಧನಗರಿ ಅಣೆಕಟ್ಟಿನ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದಂತೆ, ನೀರನ್ನು ಬಿಡುಗಡೆ ಮಾಡಲಾಗಿದೆ. ಇದು ನದಿಯ ಮಟ್ಟ ಏರಿಕೆಗೆ ಕಾರಣವಾಗಿದೆ ಎಂದು ಅವರು ಹೇಳಿದರು.

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪಂಚಗಂಗಾ

23 ಹಳ್ಳಿಗಳಿಂದ ಸುಮಾರು 1,750 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೊಲ್ಹಾಪುರ ನಗರದ ಹೊರಗಿನ ರಾಜಾರಾಮ್ ವೀರ್‌ನಲ್ಲಿ 43 ಅಡಿಗಳಷ್ಟು ಅಂದರೆ ಅಪಾಯದ ಮಟ್ಟ ಮೀರಿ ಈ ನದಿ ಹರಿಯುತ್ತಿದೆ.

"ಗದಿಂಗ್ಲಾಸ್, ಪನ್ಹಾಲಾ, ಕಾರ್ವೀರ್, ಗಗನ್ಬಾವ್ಡಾ, ಅಜಾರಾ, ಮತ್ತು ಕೊಲ್ಹಾಪುರ ನಗರದ 23 ಗ್ರಾಮಗಳ 1,750 ಕುಟುಂಬಗಳಿಂದ ಈವರೆಗೆ 4,413 ಜನರನ್ನು ಸ್ಥಳಾಂತರಿಸಲಾಗಿದೆ" ಎಂದು ಜಿಲ್ಲಾಧಿಕಾರಿ ದೌಲತ್ ದೇಸಾಯಿ ತಿಳಿಸಿದ್ದಾರೆ. ಸುಮಾರು 1,100 ಜಾನುವಾರುಗಳನ್ನು ಕೂಡಾ ಸ್ಥಳಾಂತರಿಸಲಾಗಿದೆ.

Last Updated : Aug 7, 2020, 10:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.