ETV Bharat / bharat

ರೇಷನ್​ ಕಾರ್ಡ್​ ಇಲ್ಲದವರಿಗೂ 1 ರೂ.ಗೆ ಅಕ್ಕಿ, ಗೋಧಿ, ಉಪ್ಪು, 1.5 ರೂ.ಗೆ ಸೀಮೆಎಣ್ಣೆ: ಮಧ್ಯಪ್ರದೇಶ ಸಿಎಂ ಮಹತ್ವದ ಘೋಷಣೆ!

author img

By

Published : Aug 19, 2020, 5:22 PM IST

ಮಧ್ಯಪ್ರದೇಶದಲ್ಲಿ ಬಡತನ ರೇಖೆಗಿಂತಲೂ ಕೆಳಗಿರುವ ಹಾಗೂ ಪಡಿತರ ಚೀಟಿ ಹೊಂದಿರದ ಕುಟುಂಬಗಳಿಗೆ ಮಹತ್ವದ ಯೋಜನೆ ಘೋಷಣೆ ಮಾಡಿದ್ದಾರೆ.

CM Shivraj Singh Chouhan
CM Shivraj Singh Chouhan

ಭೋಪಾಲ್​: ಇನ್ಮುಂದೆ ಸ್ಥಳೀಯರಿಗಷ್ಟೇ ಸರ್ಕಾರಿ ಹುದ್ದೆಗಳು ಎಂಬ ಕಾನೂನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಇದೀಗ ಮತ್ತೊಂದು ಮಹತ್ವದ ಯೋಜನೆ ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಮಧ್ಯಪ್ರದೇಶ ಸಿಎಂ ಮಹತ್ವದ ಘೋಷಣೆ

ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಮಧ್ಯಪ್ರದೇಶದ ಬಡವರು ಹಾಗೂ ಪಡಿತರ ಚೀಟಿ ಇಲ್ಲದವರಿಗೆ 1 ರೂಪಾಯಿಗೆ ಅಕ್ಕಿ, ಗೋಧಿ ಹಾಗೂ ಉಪ್ಪು ನೀಡಲು ನಿರ್ಧರಿಸಲಾಗಿದ್ದು, 1.5 ರೂ.ಗೆ ಸೀಮೆ ಎಣ್ಣೆ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸೆಪ್ಟೆಂಬರ್​ 1ರಿಂದ ಈ ಯೋಜನೆ ರಾಜ್ಯಾದ್ಯಂತ ಜಾರಿಗೊಳ್ಳಲಿದೆ.

ರಾಜ್ಯದ ಜನರಿಗಷ್ಟೇ ಸರ್ಕಾರಿ ಹುದ್ದೆ: ಮಧ್ಯಪ್ರದೇಶ ಸಿಎಂ ಮಹತ್ವದ ನಿರ್ಧಾರ

ಪ್ರತಿ ವ್ಯಕ್ತಿಗೂ 10 ಕೆ.ಜಿ ಧಾನ್ಯ ನೀಡಲು ನಿರ್ಧರಿಸಲಾಗಿದ್ದು, ಮನೆಯಲ್ಲಿ 5 ಸದಸ್ಯರಿದ್ದರೆ ಅವರಿಗೆ 50 ಕೆಜಿ ಧಾನ್ಯ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

  • Under the National Food Security Act, every member of a family who is poor but does not have a ration card will get wheat, salt and rice for Rs 1 and Rs 1.5 per litre of kerosene per family, from September 1: Madhya Pradesh CM Shivraj Singh Chouhan pic.twitter.com/XBE8jfEMeQ

    — ANI (@ANI) August 19, 2020 " class="align-text-top noRightClick twitterSection" data=" ">

ಮಧ್ಯಪ್ರದೇಶದಲ್ಲಿ ಕೇವಲ ರಾಜ್ಯದ ಯುವಕರಿಗೆ ಮಾತ್ರ ಸರ್ಕಾರಿ ಉದ್ಯೋಗ ಸಿಗುವ ಉದ್ದೇಶದಿಂದ ಸರ್ಕಾರಿ ಉದ್ಯೋಗ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲು ಅಲ್ಲಿನ ಸರ್ಕಾರ ಮಹತ್ವದ ಕಾನೂನು ಜಾರಿಗೊಳಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ನಿನ್ನೆ ಮಾಹಿತಿ ನೀಡಿದ್ದರು.

ಭೋಪಾಲ್​: ಇನ್ಮುಂದೆ ಸ್ಥಳೀಯರಿಗಷ್ಟೇ ಸರ್ಕಾರಿ ಹುದ್ದೆಗಳು ಎಂಬ ಕಾನೂನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಇದೀಗ ಮತ್ತೊಂದು ಮಹತ್ವದ ಯೋಜನೆ ಜಾರಿಗೊಳಿಸಲು ನಿರ್ಧರಿಸಿದ್ದಾರೆ.

ಮಧ್ಯಪ್ರದೇಶ ಸಿಎಂ ಮಹತ್ವದ ಘೋಷಣೆ

ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯಡಿ ಮಧ್ಯಪ್ರದೇಶದ ಬಡವರು ಹಾಗೂ ಪಡಿತರ ಚೀಟಿ ಇಲ್ಲದವರಿಗೆ 1 ರೂಪಾಯಿಗೆ ಅಕ್ಕಿ, ಗೋಧಿ ಹಾಗೂ ಉಪ್ಪು ನೀಡಲು ನಿರ್ಧರಿಸಲಾಗಿದ್ದು, 1.5 ರೂ.ಗೆ ಸೀಮೆ ಎಣ್ಣೆ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಸೆಪ್ಟೆಂಬರ್​ 1ರಿಂದ ಈ ಯೋಜನೆ ರಾಜ್ಯಾದ್ಯಂತ ಜಾರಿಗೊಳ್ಳಲಿದೆ.

ರಾಜ್ಯದ ಜನರಿಗಷ್ಟೇ ಸರ್ಕಾರಿ ಹುದ್ದೆ: ಮಧ್ಯಪ್ರದೇಶ ಸಿಎಂ ಮಹತ್ವದ ನಿರ್ಧಾರ

ಪ್ರತಿ ವ್ಯಕ್ತಿಗೂ 10 ಕೆ.ಜಿ ಧಾನ್ಯ ನೀಡಲು ನಿರ್ಧರಿಸಲಾಗಿದ್ದು, ಮನೆಯಲ್ಲಿ 5 ಸದಸ್ಯರಿದ್ದರೆ ಅವರಿಗೆ 50 ಕೆಜಿ ಧಾನ್ಯ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

  • Under the National Food Security Act, every member of a family who is poor but does not have a ration card will get wheat, salt and rice for Rs 1 and Rs 1.5 per litre of kerosene per family, from September 1: Madhya Pradesh CM Shivraj Singh Chouhan pic.twitter.com/XBE8jfEMeQ

    — ANI (@ANI) August 19, 2020 " class="align-text-top noRightClick twitterSection" data=" ">

ಮಧ್ಯಪ್ರದೇಶದಲ್ಲಿ ಕೇವಲ ರಾಜ್ಯದ ಯುವಕರಿಗೆ ಮಾತ್ರ ಸರ್ಕಾರಿ ಉದ್ಯೋಗ ಸಿಗುವ ಉದ್ದೇಶದಿಂದ ಸರ್ಕಾರಿ ಉದ್ಯೋಗ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲು ಅಲ್ಲಿನ ಸರ್ಕಾರ ಮಹತ್ವದ ಕಾನೂನು ಜಾರಿಗೊಳಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ನಿನ್ನೆ ಮಾಹಿತಿ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.