ETV Bharat / bharat

ಕೇರಳದ ಕೆಲ ಪ್ರದೇಶಗಳಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿದೆ: ಪಿಣರಾಯಿ ವಿಜಯನ್ - ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​

ಕೇರಳದಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿರುವ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಆತಂಕ ವ್ಯಕ್ತಪಡಿಸಿದ್ದಾರೆ.

Kerala CM Pinarayi Vijayan
Kerala CM Pinarayi Vijayan
author img

By

Published : Jul 17, 2020, 10:23 PM IST

ತಿರುವನಂತಪುರಂ: ಕಳೆದೆರಡು ತಿಂಗಳು ಕೊರೊನಾ ವೈರಸ್​ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿ ಅದರಿಂದ ಹೊರಬಂದಿದ್ದ ದೇವರ ನಾಡು ಕೇರಳದಲ್ಲಿ ಇದೀಗ ಮತ್ತೊಮ್ಮೆ ಸೋಂಕು ಅಬ್ಬರಿಸುತ್ತಿದೆ. ರಾಜ್ಯದಲ್ಲಿ ಪ್ರತಿದಿನ ನೂರಾರು ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ಇಂದು ಕೂಡ ರಾಜ್ಯದಲ್ಲಿ 791 ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 10,275 ತಲುಪಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​, ತಿರುವನಂತಪುರಂನ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದು ಸಮುದಾಯಕ್ಕೆ ಸೋಂಕು ಹಬ್ಬಿರುವ ಮುನ್ಸೂಚನೆಯಾಗಿದೆ. ಇಂತಹ ಕಠಿಣ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲ ರೀತಿಯಿಂದಲೂ ಕ್ರಮ ಕೈಗೊಳ್ಳುತ್ತಿದೆ ಎಂದಿರುವ ಅವರು ಈ ಜಿಲ್ಲೆಗಳಲ್ಲಿ ನಾಳೆಯಿಂದಲೇ ಲಾಕ್​ಡೌನ್​ ಜಾರಿಗೊಳ್ಳಲಿದೆ ಎಂದಿದ್ದಾರೆ.

  • We are moving to the next stage. There will be more restrictions in the capital district, which has a serious outbreak of the disease. A total lockdown will be implemented in the coastal areas from tomorrow: Kerala CM https://t.co/9WCfcjEiqI

    — ANI (@ANI) July 17, 2020 " class="align-text-top noRightClick twitterSection" data=" ">

ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣ ದಾಖಲಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು, ಪುಲ್ಲುವಿಲಾ ಮತ್ತು ಪೂಂಟುರಾ ಗ್ರಾಮದಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ತಿಳಿಸಿದ್ದಾರೆ. ಪುಲ್ಲುವಿಲಾ ಗ್ರಾಮದ 97 ಸ್ಯಾಂಪಲ್​​ಗಳಲ್ಲಿ 51 ಜನರಿಗೆ ಪಾಸಿಟಿವ್​ ಹಾಗೂ ಪೂಂಟುರಾದ 50 ಟೆಸ್ಟ್​​ಗಳಲ್ಲಿ 26 ಜನರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ತಿರುವನಂತಪುರಂ: ಕಳೆದೆರಡು ತಿಂಗಳು ಕೊರೊನಾ ವೈರಸ್​ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಿ ಅದರಿಂದ ಹೊರಬಂದಿದ್ದ ದೇವರ ನಾಡು ಕೇರಳದಲ್ಲಿ ಇದೀಗ ಮತ್ತೊಮ್ಮೆ ಸೋಂಕು ಅಬ್ಬರಿಸುತ್ತಿದೆ. ರಾಜ್ಯದಲ್ಲಿ ಪ್ರತಿದಿನ ನೂರಾರು ಹೊಸ ಪ್ರಕರಣಗಳು ದಾಖಲಾಗುತ್ತಿವೆ.

ಇಂದು ಕೂಡ ರಾಜ್ಯದಲ್ಲಿ 791 ಕೋವಿಡ್​ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ ಇದೀಗ 10,275 ತಲುಪಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​​, ತಿರುವನಂತಪುರಂನ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇದು ಸಮುದಾಯಕ್ಕೆ ಸೋಂಕು ಹಬ್ಬಿರುವ ಮುನ್ಸೂಚನೆಯಾಗಿದೆ. ಇಂತಹ ಕಠಿಣ ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಲ್ಲ ರೀತಿಯಿಂದಲೂ ಕ್ರಮ ಕೈಗೊಳ್ಳುತ್ತಿದೆ ಎಂದಿರುವ ಅವರು ಈ ಜಿಲ್ಲೆಗಳಲ್ಲಿ ನಾಳೆಯಿಂದಲೇ ಲಾಕ್​ಡೌನ್​ ಜಾರಿಗೊಳ್ಳಲಿದೆ ಎಂದಿದ್ದಾರೆ.

  • We are moving to the next stage. There will be more restrictions in the capital district, which has a serious outbreak of the disease. A total lockdown will be implemented in the coastal areas from tomorrow: Kerala CM https://t.co/9WCfcjEiqI

    — ANI (@ANI) July 17, 2020 " class="align-text-top noRightClick twitterSection" data=" ">

ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಕೋವಿಡ್​ ಪ್ರಕರಣ ದಾಖಲಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದ್ದು, ಪುಲ್ಲುವಿಲಾ ಮತ್ತು ಪೂಂಟುರಾ ಗ್ರಾಮದಲ್ಲಿ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ತಿಳಿಸಿದ್ದಾರೆ. ಪುಲ್ಲುವಿಲಾ ಗ್ರಾಮದ 97 ಸ್ಯಾಂಪಲ್​​ಗಳಲ್ಲಿ 51 ಜನರಿಗೆ ಪಾಸಿಟಿವ್​ ಹಾಗೂ ಪೂಂಟುರಾದ 50 ಟೆಸ್ಟ್​​ಗಳಲ್ಲಿ 26 ಜನರಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.