ETV Bharat / bharat

ಅಸಮರ್ಪಕ ಮೌಲ್ಯಮಾಪನ ಪ್ರಕರಣ.... IL&FSನ ಮಾಜಿ ಅಧ್ಯಕ್ಷ ಬಂಧನ

author img

By

Published : Apr 2, 2019, 8:33 AM IST

ಗಂಭೀರ ವಂಚನೆ ತನಿಖಾ ಕಚೇರಿಯ (ಎಸ್​​ಎಫ್​ಐಒ) ಅಧಿಕಾರಿಗಳು ಬಂಧಿಸಿ ವಿಶೇಷ ನ್ಯಾಯಾಲಯದ ಮುಂದೆ ಹಾಜರಿಪಡಿಸಿದರು. ಗುರುವಾರದವರೆಗೂ ಎಸ್​ಎಫ್​ಐಒ ತಮ್ಮ ವಶದಲ್ಲಿ ಇರಿಸಿಕೊಂಡು ವಿಚಾರಣೆ ನಡೆಸಲಿದ್ದಾರೆ.

IL&FSನ ಮಾಜಿ ಅಧ್ಯಕ್ಷ ಬಂಧನ

ಮುಂಬೈ: ಸಾಲದ ಸುಳಿಗೆ ಸಿಲುಕಿ ದಿವಾಳಿ ಅಂಚಿನಲ್ಲಿರುವ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫಿನಾನ್ಶಿಯಲ್ ಸರ್ವೀಸಸ್ (ಐಎಲ್ ಆ್ಯಂಡ್ ​ಎಫ್ಎಸ್) ಕಂಪನಿಯ ಸಾಲ ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ಮಾಜಿ ಅಧ್ಯಕ್ಷ ಹರಿ ಶಂಕರನ್​ ಅವರನ್ನು ಬಂಧಿಸಲಾಗಿದೆ.

ಐಎಲ್ಆ್ಯಂಡ್​ಎಫ್ಎಸ್ ಹಾಗೂ ಅದರ ಸಹವರ್ತಿ ಘಟಗಳಿಗೆ ಸಂಬಂಧಿಸಿದಂತೆ ಎಸ್​​ಎಫ್​ಐಒ ತನಿಖೆ ನಡೆಸುತ್ತಿದ್ದು, ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ ಆಪಾದನೆ ಮೇಲೆ ಹರಿ ಶಂಕರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಐಎಲ್ಆ್ಯಂಡ್​ಎಫ್ಎಸ್ ಈ ಹಿಂದಿನ ಕಂಪನಿಗಳ ಕಾಯ್ದೆಯ ನಿಬಂಧನೆಗಳು ಉಲ್ಲಂಘಿಸಿದೆ ಎಂದು ತನಿಖಾ ಅಧಿಕಾರಿಗಳು ಬಂಧನಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಶಂಕರ್ ತಮ್ಮ ಅಧಿಕಾರ ಅವಧಿಯಲ್ಲಿ ಅರ್ಹತೆ ಇಲ್ಲದ ಹಾಗೂ ಅನುತ್ಪಾದಕ ಆಸ್ತಿ (ಎನ್​ಪಿಎ) ಘೋಷಿಸದ ಸಂಸ್ಥೆಗಳಿಗೆ ಸಾಲವನ್ನು ನೀಡಿದ್ದರು. ಇದು ಕಂಪನಿಗೆ ಮತ್ತು ಸಾಲದಾತರಿಗೆ ಭಾರಿ ನಷ್ಟ ಉಂಟುಮಾಡಿತ್ತು. ಐಎಲ್ಆ್ಯಂಡ್​ಎಫ್ಎಸ್ ವಿವಿಧ ಬ್ಯಾಂಕ್​ಗಳಿಂದ ₹ 17 ಸಾವಿರ ಕೋಟಿ ಸಾಲ ಪಡೆದಿದೆ ಎಂದು ತಿಳಿಸಿದ್ದಾರೆ.

ಐಎಲ್ ಆ್ಯಂಡ್ ​ಎಫ್​ಎಸ್​ನಲ್ಲಿ ₹ 13,000 ಕೋಟಿ ಮೊತ್ತ ಬಡ್ಡಿ ಅವ್ಯವಹಾರ, ಅಸಮರ್ಪಕ ಮೌಲ್ಯಮಾಪನ ಮತ್ತು ಬ್ಯಾಂಕಿಂಗ್ ನಿಯಮಗಳ ವಿಷಯಾಂತರದಂತ ಅಕ್ರಮ ವ್ಯವಹಾರ ಎಸಗಲಾಗಿದೆ ಎಂದು ಗ್ರಾಂಟ್ ಥಾರ್ನ್ಟನ್ ಇಂಡಿಯಾ ಸಂಸ್ಥೆ ತನ್ನ ಮಧ್ಯಂತರ ವರದಿಯಲ್ಲಿ ಈ ಹಿಂದೆ ತಿಳಿಸಿತ್ತು.

ಕಳೆದ ವರ್ಷ ಕೇಂದ್ರ ಸರ್ಕಾರವು ₹ 91 ಸಾವಿರ ಕೋಟಿ ಸಾಲದಲ್ಲಿರುವ ಕಂಪನಿಯ ಆಡಳಿತ ಮಂಡಳಿಯನ್ನು ತೆಗೆದು ಹಾಕುವಂತೆ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರಕ್ಕೆ (ಎನ್​ಸಿಎಲ್​ಟಿ) ಮನವಿ ಸಲ್ಲಿಸಿತ್ತು. ಸರ್ಕಾರದ ಮನವಿಯನ್ನು ಪುರಸ್ಕರಿಸಿದ ಎನ್​ಸಿಎಲ್​ಟಿ, ಕೋಟ್ಯಾಕ್ ಮಹೀಂದ್ರ ಬ್ಯಾಂಕ್​ ವ್ಯವಸ್ಥಾಪಕ ನಿರ್ದೇಶಕ/ ಸಿಇಒ ಉದಯ ಕೋಟಕ್​ ಅವರ ನೇತೃತ್ವದಲ್ಲಿ ಕಂಪನಿಯನ್ನು ಪುನಶ್ಚೇತನಗೊಳಿಸಿವಂತೆ ಆರು ಸದಸ್ಯರು ಒಳಗೊಂಡ ಸಮಿತಿಯನ್ನು ರಚಿಸುವ ಆದೇಶ ಹೊರಡಿಸಿತ್ತು.

ಮುಂಬೈ: ಸಾಲದ ಸುಳಿಗೆ ಸಿಲುಕಿ ದಿವಾಳಿ ಅಂಚಿನಲ್ಲಿರುವ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆ್ಯಂಡ್ ಫಿನಾನ್ಶಿಯಲ್ ಸರ್ವೀಸಸ್ (ಐಎಲ್ ಆ್ಯಂಡ್ ​ಎಫ್ಎಸ್) ಕಂಪನಿಯ ಸಾಲ ವಂಚನೆ ಪ್ರಕರಣಕ್ಕೆ ಸಂಬಧಿಸಿದಂತೆ ಮಾಜಿ ಅಧ್ಯಕ್ಷ ಹರಿ ಶಂಕರನ್​ ಅವರನ್ನು ಬಂಧಿಸಲಾಗಿದೆ.

ಐಎಲ್ಆ್ಯಂಡ್​ಎಫ್ಎಸ್ ಹಾಗೂ ಅದರ ಸಹವರ್ತಿ ಘಟಗಳಿಗೆ ಸಂಬಂಧಿಸಿದಂತೆ ಎಸ್​​ಎಫ್​ಐಒ ತನಿಖೆ ನಡೆಸುತ್ತಿದ್ದು, ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಧಿಕಾರ ದುರುಪಯೋಗ ಆಪಾದನೆ ಮೇಲೆ ಹರಿ ಶಂಕರ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಐಎಲ್ಆ್ಯಂಡ್​ಎಫ್ಎಸ್ ಈ ಹಿಂದಿನ ಕಂಪನಿಗಳ ಕಾಯ್ದೆಯ ನಿಬಂಧನೆಗಳು ಉಲ್ಲಂಘಿಸಿದೆ ಎಂದು ತನಿಖಾ ಅಧಿಕಾರಿಗಳು ಬಂಧನಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಶಂಕರ್ ತಮ್ಮ ಅಧಿಕಾರ ಅವಧಿಯಲ್ಲಿ ಅರ್ಹತೆ ಇಲ್ಲದ ಹಾಗೂ ಅನುತ್ಪಾದಕ ಆಸ್ತಿ (ಎನ್​ಪಿಎ) ಘೋಷಿಸದ ಸಂಸ್ಥೆಗಳಿಗೆ ಸಾಲವನ್ನು ನೀಡಿದ್ದರು. ಇದು ಕಂಪನಿಗೆ ಮತ್ತು ಸಾಲದಾತರಿಗೆ ಭಾರಿ ನಷ್ಟ ಉಂಟುಮಾಡಿತ್ತು. ಐಎಲ್ಆ್ಯಂಡ್​ಎಫ್ಎಸ್ ವಿವಿಧ ಬ್ಯಾಂಕ್​ಗಳಿಂದ ₹ 17 ಸಾವಿರ ಕೋಟಿ ಸಾಲ ಪಡೆದಿದೆ ಎಂದು ತಿಳಿಸಿದ್ದಾರೆ.

ಐಎಲ್ ಆ್ಯಂಡ್ ​ಎಫ್​ಎಸ್​ನಲ್ಲಿ ₹ 13,000 ಕೋಟಿ ಮೊತ್ತ ಬಡ್ಡಿ ಅವ್ಯವಹಾರ, ಅಸಮರ್ಪಕ ಮೌಲ್ಯಮಾಪನ ಮತ್ತು ಬ್ಯಾಂಕಿಂಗ್ ನಿಯಮಗಳ ವಿಷಯಾಂತರದಂತ ಅಕ್ರಮ ವ್ಯವಹಾರ ಎಸಗಲಾಗಿದೆ ಎಂದು ಗ್ರಾಂಟ್ ಥಾರ್ನ್ಟನ್ ಇಂಡಿಯಾ ಸಂಸ್ಥೆ ತನ್ನ ಮಧ್ಯಂತರ ವರದಿಯಲ್ಲಿ ಈ ಹಿಂದೆ ತಿಳಿಸಿತ್ತು.

ಕಳೆದ ವರ್ಷ ಕೇಂದ್ರ ಸರ್ಕಾರವು ₹ 91 ಸಾವಿರ ಕೋಟಿ ಸಾಲದಲ್ಲಿರುವ ಕಂಪನಿಯ ಆಡಳಿತ ಮಂಡಳಿಯನ್ನು ತೆಗೆದು ಹಾಕುವಂತೆ ರಾಷ್ಟ್ರೀಯ ಕಂಪನಿ ಕಾನೂನು ಪ್ರಾಧಿಕಾರಕ್ಕೆ (ಎನ್​ಸಿಎಲ್​ಟಿ) ಮನವಿ ಸಲ್ಲಿಸಿತ್ತು. ಸರ್ಕಾರದ ಮನವಿಯನ್ನು ಪುರಸ್ಕರಿಸಿದ ಎನ್​ಸಿಎಲ್​ಟಿ, ಕೋಟ್ಯಾಕ್ ಮಹೀಂದ್ರ ಬ್ಯಾಂಕ್​ ವ್ಯವಸ್ಥಾಪಕ ನಿರ್ದೇಶಕ/ ಸಿಇಒ ಉದಯ ಕೋಟಕ್​ ಅವರ ನೇತೃತ್ವದಲ್ಲಿ ಕಂಪನಿಯನ್ನು ಪುನಶ್ಚೇತನಗೊಳಿಸಿವಂತೆ ಆರು ಸದಸ್ಯರು ಒಳಗೊಂಡ ಸಮಿತಿಯನ್ನು ರಚಿಸುವ ಆದೇಶ ಹೊರಡಿಸಿತ್ತು.

Intro:Body:

ಅಸಮರ್ಪಕ ಮೌಲ್ಯಮಾಪನ ಪ್ರಕರಣ.... IL&FSನ ಮಾಜಿ ಅಧ್ಯಕ್ಷ ಬಂಧನ


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.