ETV Bharat / bharat

ಹೊಲ ಉಳುಮೆ ವೇಳೆ ಟ್ರ್ಯಾಕ್ಟರ್​ನಡಿ ಸಿಲುಕಿ ರೈತನ ದಾರುಣ ಸಾವು: ವಿಡಿಯೋ

ಆಂಧ್ರಪ್ರದೇಶದ ಕಡಪ ಜಿಲ್ಲೆಯ ವೆಂಚುರ್ಲಾ ಗ್ರಾಮದಲ್ಲಿ ಹೊಲ ಊಳುತ್ತಿದ್ದ ರೈತನೋರ್ವ ಅಚಾನಕ್‌ ಆಗಿ ಟ್ರ್ಯಾಕ್ಟರ್​ನಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

author img

By

Published : Aug 11, 2020, 5:30 PM IST

Updated : Aug 11, 2020, 6:10 PM IST

tractor overturned
ಟ್ರ್ಯಾಕ್ಟರ್​ನಡಿ ಸಿಲುಕಿ ಸಾವನ್ನಪ್ಪಿದ ರೈತ

ಕಡಪ (ಆಂಧ್ರಪ್ರದೇಶ): ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ರೈತನೋರ್ವ ಆಕಸ್ಮಿಕವಾಗಿ ಟ್ರ್ಯಾಕ್ಟರ್​​ನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಕಡಪ ಜಿಲ್ಲೆಯ ಚಿನ್ನ ವೆಂಚುರ್ಲಾ ಗ್ರಾಮದಲ್ಲಿ ನಡೆದಿದೆ.

ಟ್ರ್ಯಾಕ್ಟರ್​ನಡಿ ಸಿಲುಕಿ ಸಾವನ್ನಪ್ಪಿದ ರೈತ

ಆಂಧ್ರಪ್ರದೇಶದ ಚಿನ್ನ ವೆಂಚುರ್ಲಾ ಗ್ರಾಮದ ರೈತ ಸಂಜೀವ್ ಖನ್ನಾ, ಭತ್ತದ ಕೆಲಸಕ್ಕಾಗಿ ಟ್ರ್ಯಾಕ್ಟರ್​ ಮೂಲಕ ಹೊಲ ಹಸನು ಮಾಡುತ್ತಿದ್ದ. ಈ ವೇಳೆ ಟ್ರ್ಯಾಕ್ಟರ್‌ನ ಚಕ್ರಗಳು​ ಕೆಸರಿನಲ್ಲಿ ಸಿಲುಕಿಕೊಂಡಿವೆ. ಚಕ್ರಗಳನ್ನು ಹೂಳಿನಿಂದ ಮೇಲೆತ್ತಲು ಯತ್ನಿಸಿದಾಗ ಏಕಾಏಕಿಯಾಗಿ ವಾಹನ ಪಲ್ಟಿಯಾಗಿದೆ. ಈ ವೇಳೆ ರೈತ ಟ್ರ್ಯಾಕ್ಟರ್​ ಕೆಳಗೆ ರೈತ ಸಿಲುಕಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಸ್ಥಳದಲ್ಲಿದ್ದ ಇತರರು ನೋಡು ನೋಡುತ್ತಲೇ ಈ ಘಟನೆ ನಡೆದಿದೆ. ಕೂಡಲೇ ಸಂಜೀವ್​ ಖನ್ನಾರ ಪ್ರಾಣ ರಕ್ಷಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಆತ​ ಟ್ರ್ಯಾಕ್ಟರ್​ ಪಲ್ಟಿಯಾಗುತ್ತಿದ್ದಂತೆ ಅಸುನೀಗಿದ್ದ.

ದುರ್ಘಟನೆಯ ದೃಶ್ಯ ಸ್ಥಳದಲ್ಲಿದ್ದ ವ್ಯಕ್ತಿಯೋರ್ವನ ಮೊಬೈಲ್​ನಲ್ಲಿ ಸೆರೆಯಾಗಿದೆ.

ಕಡಪ (ಆಂಧ್ರಪ್ರದೇಶ): ಕೃಷಿ ಕಾರ್ಯದಲ್ಲಿ ನಿರತರಾಗಿದ್ದ ರೈತನೋರ್ವ ಆಕಸ್ಮಿಕವಾಗಿ ಟ್ರ್ಯಾಕ್ಟರ್​​ನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಕಡಪ ಜಿಲ್ಲೆಯ ಚಿನ್ನ ವೆಂಚುರ್ಲಾ ಗ್ರಾಮದಲ್ಲಿ ನಡೆದಿದೆ.

ಟ್ರ್ಯಾಕ್ಟರ್​ನಡಿ ಸಿಲುಕಿ ಸಾವನ್ನಪ್ಪಿದ ರೈತ

ಆಂಧ್ರಪ್ರದೇಶದ ಚಿನ್ನ ವೆಂಚುರ್ಲಾ ಗ್ರಾಮದ ರೈತ ಸಂಜೀವ್ ಖನ್ನಾ, ಭತ್ತದ ಕೆಲಸಕ್ಕಾಗಿ ಟ್ರ್ಯಾಕ್ಟರ್​ ಮೂಲಕ ಹೊಲ ಹಸನು ಮಾಡುತ್ತಿದ್ದ. ಈ ವೇಳೆ ಟ್ರ್ಯಾಕ್ಟರ್‌ನ ಚಕ್ರಗಳು​ ಕೆಸರಿನಲ್ಲಿ ಸಿಲುಕಿಕೊಂಡಿವೆ. ಚಕ್ರಗಳನ್ನು ಹೂಳಿನಿಂದ ಮೇಲೆತ್ತಲು ಯತ್ನಿಸಿದಾಗ ಏಕಾಏಕಿಯಾಗಿ ವಾಹನ ಪಲ್ಟಿಯಾಗಿದೆ. ಈ ವೇಳೆ ರೈತ ಟ್ರ್ಯಾಕ್ಟರ್​ ಕೆಳಗೆ ರೈತ ಸಿಲುಕಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಸ್ಥಳದಲ್ಲಿದ್ದ ಇತರರು ನೋಡು ನೋಡುತ್ತಲೇ ಈ ಘಟನೆ ನಡೆದಿದೆ. ಕೂಡಲೇ ಸಂಜೀವ್​ ಖನ್ನಾರ ಪ್ರಾಣ ರಕ್ಷಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಆತ​ ಟ್ರ್ಯಾಕ್ಟರ್​ ಪಲ್ಟಿಯಾಗುತ್ತಿದ್ದಂತೆ ಅಸುನೀಗಿದ್ದ.

ದುರ್ಘಟನೆಯ ದೃಶ್ಯ ಸ್ಥಳದಲ್ಲಿದ್ದ ವ್ಯಕ್ತಿಯೋರ್ವನ ಮೊಬೈಲ್​ನಲ್ಲಿ ಸೆರೆಯಾಗಿದೆ.

Last Updated : Aug 11, 2020, 6:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.