ETV Bharat / bharat

'ಪ್ರತ್ಯೇಕತಾವಾದಿ ಸಂಘಟನೆ ಬ್ಯಾನ್ ಮಾಡೋದು ಭೂಗತರಾಗಲು ದಾರಿ ಮಾಡಿಕೊಟ್ಟಂತೆ'

ಜಮಾತ್ ಇ ಇಸ್ಲಾಮಿ ಬ್ಯಾನ್​ ಮಾಡಿರುವ ಕೇಂದ್ರ ಮರುಪರಿಶೀಲನೆ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್​ ಅಬ್ದುಲ್ಲಾ ಒತ್ತಾಯಿಸಿದ್ದಾರೆ

author img

By

Published : Mar 3, 2019, 2:17 PM IST

ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್​ ಅಬ್ದುಲ್ಲಾ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಸಂಘಟನೆ ಜಮಾತ್ ಇ ಇಸ್ಲಾಮಿ (JeI) ಅನ್ನು ಬ್ಯಾನ್​ ಮಾಡಿರುವ ನಿರ್ಧಾರದ ಬಗ್ಗೆ ಕೇಂದ್ರ ಮರುಪರಿಶೀಲನೆ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್​ ಅಬ್ದುಲ್ಲಾ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಜೆಇಐ ನಿಷೇಧದಿಂದ ಆ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ದಾರಿ ಮಾಡಿಕೊಟ್ಟಂತಾಗಲಿದೆ ಎಂದು ನ್ಯಾಷನಲ್​ ಕಾನ್ಫರೆನ್ಸ್​ನ ಉಪಾಧ್ಯಕ್ಷರೂ ಆಗಿರುವ ಓಮರ್​ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

1996ರಿಂದ 2015ರವರೆಗೆ ಕಾಶ್ಮೀರದಲ್ಲಿ ಇಂತಹ ಸಂಘಟನೆಗಳ ನಿಷೇಧ ಪ್ರಕ್ರಿಯೆ ವ್ಯಾಪಕವಾಗಿ ನಡೆದಿದೆ. ಇದರಿಂದ ಯಾವುದೇ ಸಾಧನೆಯಾಗಿಲ್ಲ. ಈಗಿನ ಕೇಂದ್ರ ಸರ್ಕಾರ ಈ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದಿದ್ದಾರೆ.

ರಾಜಕೀಯ ನೆಲೆಯಲ್ಲಿ ಸೈದ್ಧಾಂತಿಕವಾಗಿ ನಾವು ಸಹ ಜೆಇಐ ಅನ್ನು ವಿರೋಧಿಸುತ್ತೇವೆ. ಆದರೆ ಇಡೀ ಸಂಘಟನೆಯನ್ನು ಬ್ಯಾನ್​ ಮಾಡಿದ್ದು, ಅದರ ನಾಯಕರು, ಸದಸ್ಯರ ಮನೆ ಜಪ್ತಿ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಿಂದ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಘಟನೆಯೊಂದಿಗೆ ಭಿನ್ನಾಭಿಪ್ರಾಯವಿದ್ದರೂ, ಅದರ ಮೇಲಿನ ನಿಷೇಧ ಹೇರಿರುವುದನ್ನು ನಾನು ಒಪ್ಪುವುದಿಲ್ಲ ಎಂದು ಓಮರ್​​ ಅಬ್ದುಲ್ಲಾ ಹೇಳಿದ್ದಾರೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಸಂಘಟನೆ ಜಮಾತ್ ಇ ಇಸ್ಲಾಮಿ (JeI) ಅನ್ನು ಬ್ಯಾನ್​ ಮಾಡಿರುವ ನಿರ್ಧಾರದ ಬಗ್ಗೆ ಕೇಂದ್ರ ಮರುಪರಿಶೀಲನೆ ಮಾಡಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್​ ಅಬ್ದುಲ್ಲಾ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಜೆಇಐ ನಿಷೇಧದಿಂದ ಆ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ದಾರಿ ಮಾಡಿಕೊಟ್ಟಂತಾಗಲಿದೆ ಎಂದು ನ್ಯಾಷನಲ್​ ಕಾನ್ಫರೆನ್ಸ್​ನ ಉಪಾಧ್ಯಕ್ಷರೂ ಆಗಿರುವ ಓಮರ್​ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

1996ರಿಂದ 2015ರವರೆಗೆ ಕಾಶ್ಮೀರದಲ್ಲಿ ಇಂತಹ ಸಂಘಟನೆಗಳ ನಿಷೇಧ ಪ್ರಕ್ರಿಯೆ ವ್ಯಾಪಕವಾಗಿ ನಡೆದಿದೆ. ಇದರಿಂದ ಯಾವುದೇ ಸಾಧನೆಯಾಗಿಲ್ಲ. ಈಗಿನ ಕೇಂದ್ರ ಸರ್ಕಾರ ಈ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದಿದ್ದಾರೆ.

ರಾಜಕೀಯ ನೆಲೆಯಲ್ಲಿ ಸೈದ್ಧಾಂತಿಕವಾಗಿ ನಾವು ಸಹ ಜೆಇಐ ಅನ್ನು ವಿರೋಧಿಸುತ್ತೇವೆ. ಆದರೆ ಇಡೀ ಸಂಘಟನೆಯನ್ನು ಬ್ಯಾನ್​ ಮಾಡಿದ್ದು, ಅದರ ನಾಯಕರು, ಸದಸ್ಯರ ಮನೆ ಜಪ್ತಿ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಿಂದ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಘಟನೆಯೊಂದಿಗೆ ಭಿನ್ನಾಭಿಪ್ರಾಯವಿದ್ದರೂ, ಅದರ ಮೇಲಿನ ನಿಷೇಧ ಹೇರಿರುವುದನ್ನು ನಾನು ಒಪ್ಪುವುದಿಲ್ಲ ಎಂದು ಓಮರ್​​ ಅಬ್ದುಲ್ಲಾ ಹೇಳಿದ್ದಾರೆ.

Intro:Body:

'ಪ್ರತ್ಯೇಕತಾವಾದಿ ಸಂಘಟನೆ ಬ್ಯಾನ್ ಮಾಡೋದು ಭೂಗತರಾಗಲು ದಾರಿ ಮಾಡಿಕೊಟ್ಟಂತೆ'   

Banning JeI will only drive their activities underground: Omar

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಸಂಘಟನೆ ಜಮಾತ್ ಇ ಇಸ್ಲಾಮಿ (JeI) ಅನ್ನು ಬ್ಯಾನ್​ ಮಾಡಿರುವ ನಿರ್ಧಾರದ ಬಗ್ಗೆ ಕೇಂದ್ರ ಮರುಪರಿಶೀಲನೆ ಮಾಡಬೇಕು  ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಓಮರ್​ ಅಬ್ದುಲ್ಲಾ ಒತ್ತಾಯಿಸಿದ್ದಾರೆ.



ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ಜೆಇಐ ನಿಷೇಧದಿಂದ ಆ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ದಾರಿ ಮಾಡಿಕೊಟ್ಟಂತಾಗಲಿದೆ ಎಂದು ನ್ಯಾಷನಲ್​ ಕಾನ್ಫರೆನ್ಸ್​ನ ಉಪಾಧ್ಯಕ್ಷರೂ ಆಗಿರುವ ಓಮರ್​ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.



1996ರಿಂದ 2015ರವರೆಗೆ ಕಾಶ್ಮೀರದಲ್ಲಿ ಇಂತಹ ಸಂಘಟನೆಗಳ ನಿಷೇಧ ಪ್ರಕ್ರಿಯೆ ವ್ಯಾಪಕವಾಗಿ ನಡೆದಿದೆ. ಇದರಿಂದ ಯಾವುದೇ ಸಾಧನೆಯಾಗಿಲ್ಲ. ಈಗಿನ ಕೇಂದ್ರ ಸರ್ಕಾರ ಈ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದಿದ್ದಾರೆ.  



ರಾಜಕೀಯ ನೆಲೆಯಲ್ಲಿ ಸೈದ್ಧಾಂತಿಕವಾಗಿ ನಾವು ಸಹ ಜೆಇಐ ಅನ್ನು ವಿರೋಧಿಸುತ್ತೇವೆ. ಆದರೆ ಇಡೀ ಸಂಘಟನೆಯನ್ನು  ಬ್ಯಾನ್​ ಮಾಡಿದ್ದು, ಅದರ ನಾಯಕರು, ಸದಸ್ಯರ ಮನೆ ಜಪ್ತಿ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರಿಂದ ಸಂಘಟನೆ ಭೂಗತವಾಗಿ ಕಾರ್ಯನಿರ್ವಹಿಸಲು ಉತ್ತೇಜನ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.



ಸಂಘಟನೆಯೊಂದಿಗೆ ಭಿನ್ನಾಭಿಪ್ರಾಯವಿದ್ದರೂ, ಅದರ ಮೇಲಿನ ನಿಷೇಧ ಹೇರಿರುವುದನ್ನು ನಾನು ಒಪ್ಪುವುದಿಲ್ಲ ಎಂದು ಓಮರ್​​ ಅಬ್ದುಲ್ಲಾ ಹೇಳಿದ್ದಾರೆ.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.