ಅಲೀಗಢ(ಉತ್ತರ ಪ್ರದೇಶ): ಚಳಿಗೆ ಉತ್ತರದ ಹಲವು ರಾಜ್ಯಗಳು ಪತರಗುಟ್ಟಿ ಹೋಗಿವೆ. ಶೀತ ಹವಾಮಾನವು ಉತ್ತರ ಭಾರತದ ಮೇಲೆ ತನ್ನ ಹಿಡಿತ ಬಿಗಿಗೊಳಿಸುತ್ತಿದೆ.
ಈ ಕಠಿಣ ಹವಾಮಾನ ಪರಿಸ್ಥಿತಿಯ ಮಧ್ಯೆ, ಅಲೀಗಢದಲ್ಲಿ ಪೊಲೀಸ್ ಅಧಿಕಾರಿಗಳು ಅಶಕ್ತರಿಗೆ ಸಹಾಯ ಮಾಡುವ ಉದ್ದೇಶದಿಂದ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಸಮಾಜದ ಕೆಳ ವರ್ಗದಲ್ಲಿರುವ ಬಡವರು, ನಿರ್ಗತಿಕರು ಹಾಗೂ ವೃದ್ಧರಿಗೆ ಕಂಬಳಿಗಳನ್ನು ನೀಡುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮೂಲಕ ವೃದ್ಧರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.