ಮಹಾರಾಷ್ಟ್ರ: ಇಲ್ಲಿನ ಪಾಲ್ಘರ್ ಜಿಲ್ಲೆಯ ಬೋಯಿಸಾರ್ ಪ್ರದೇಶದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಬೃಹತ್ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 7 ಜನರು ಮೃತಪಟ್ಟಿದ್ದಾರೆ.
ನಿನ್ನೆ ಸಂಜೆ ಸುಮಾರು 7.20 ರ ವೇಳೆ ಬೋಯಿಸಾರ್ ಪ್ರದೇಶದ ಕೊಲ್ವಾಡೆ ಗ್ರಾಮದಲ್ಲಿರುವ ಕಾರ್ಖಾನೆಯಲ್ಲಿ ಸಂಭವಿಸಿದ ಬೃಹತ್ ಸ್ಫೋಟದ ಶಬ್ದವು 15 ಕಿ.ಮೀ ವ್ಯಾಪ್ತಿಯಲ್ಲಿ ಕೇಳಿಬಂದಿದೆ ಎಂದು ಪೊಲೀಸ್ ವಕ್ತಾರ ಹೇಮಂತ್ ಕಟ್ಕರ್ ಹೇಳಿದ್ದಾರೆ.
ಎಲಿಯಾಸ್ ಅನ್ಸಾರಿ (40), ನಿಶು ರಾಹುಲ್ ಸಿಂಗ್ (26), ಮಾಧುರಿ ವಶಿಷ್ಠ ಸಿಂಗ್ (46),ಗೋಲು ಸುರೇಂದ್ರ ಯಾದವ್ (19), ರಾಜಮತಿ ದೇವಿ ಸುರೇಂದ್ರ ಯಾದವ್ ,(40) ಮೋಹನ್ ಇಂಗ್ಲೆ (45) ಮೃತಪಟದ್ಟವರು ಇನ್ನೊಬ್ಬರ ಮಾಹಿತಿ ತಿಳಿದುಬಂದಿಲ್ಲ. ಮೃತಪಟ್ಟವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ.
ಬಹದ್ದೂರ್ ಯಾದವ್ (23), ರಾಕೇಶ್ ಕುಮಾರ್ ಚೆತ್ರಮ್ ಜೈಸ್ವಾಲ್ (50), ಸಚಿನ್ ಕುಮಾರ್ ರಂಬಾಬು ಯಾದವ್ (18), ರೋಹಿತ್ ವಸಿಷ್ಠ್ ಸಿಂಗ್ (19), ನಟವರ್ಲಾಲ್ ಬಿ. ಪಟೇಲ್ (56), ಪ್ರಾಚಿ ರಾಹುಲ್ ಸಿಂಗ್ (6), ರಿಷಿಕಾ ರಾಹುಲ್ ಸಿಂಗ್ (3) ಗಂಭಿರವಾಗಿ ಗಾಯಗೊಂಡವರು.
ಎನ್ಡಿಆರ್ಎಫ್ ರಕ್ಷಣಾ ಕಾರ್ಯ ಮುಂದುವರೆಸಿದ್ದು, ಘಟನೆಯಲ್ಲಿ ಕಾಣೆಯಾದ ಓರ್ವರಿಗೆ ಹುಡುಕಾಟ ಭರದಿಂದ ಸಾಗಿದೆ.