ETV Bharat / bharat

ನಕ್ಸಲ್​ ದಾಳಿ: ಸಂಬಳಕ್ಕಾಗಿ ದುಡಿಯುವವರು ದಾಳಿಯಲ್ಲಿ ಮೃತಪಟ್ಟಿದ್ದಾರೆಂದ ಬರಹಗಾರ್ತಿ ಬಂಧನ

author img

By

Published : Apr 7, 2021, 7:42 PM IST

Updated : Apr 7, 2021, 7:52 PM IST

ನಕ್ಸಲರ ದಾಳಿಯಲ್ಲಿ ಹುತಾತ್ಮರಾಗಿರುವ ಯೋಧರ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಬರಹಗಾರ್ತಿ ಶಿಖಾ ಶರ್ಮಾ ಅವರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.

Sikha Sarma
Sikha Sarma

ಗುವಾಹಟಿ(ಅಸ್ಸೋಂ): ಛತ್ತೀಸ್​ಗಢದಲ್ಲಿ ನಡೆದ ನಕ್ಸಲ್​ ದಾಳಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬರಹಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಿಖಾ ಶರ್ಮಾ ಅವರನ್ನು ದಿಸ್ಪುರ್​ ಪೊಲೀಸರು ಬಂಧಿಸಿದ್ದಾರೆ.

ದಾಳಿಯಲ್ಲಿ ಒಟ್ಟು 22 ಕೋಬ್ರಾ ಪೊಲೀಸರು ಹುತಾತ್ಮರಾಗಿದ್ದರು. ಇದರಲ್ಲಿ ಅಸ್ಸೋಂ ಮೂಲದವರಾದ ಇನ್ಸ್​​ಪೆಕ್ಟರ್​ ದಿಲೀಪ್​ ಕುಮಾರ್​ ಹಾಗೂ ಪೇದೆ ಬಾಬುಲ್​ ರಭಾ ವೀರ ಮರಣವನ್ನಪ್ಪಿದ್ದರು. ಶಿಖಾ ಶರ್ಮಾ ಈ ಬಗ್ಗೆ ಸೋಮವಾರ ಫೇಸ್​ಬುಕ್​​ನಲ್ಲಿ ಕಮೆಂಟ್​ ಮಾಡಿದ್ದರು. ಸಂಬಳಕ್ಕಾಗಿ ದುಡಿಯುವವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು ಹುತಾತ್ಮರಾಗಿಲ್ಲ ಎಂದು ಹೇಳಿದ್ದರು.

ಅವರ ಈ ಹೇಳಿಕೆ ಅಸ್ಸೋಂನಲ್ಲಿ ಭಾರಿ ಸದ್ದು ಮಾಡಿತ್ತು. ಲೇಖಕಿಯ ಫೇಸ್​​ಬುಕ್​ ಪೋಸ್ಟ್​ಗಳನ್ನ ಆಧರಿಸಿ ವಕೀಲರಾದ ಉಮಿ ದೆಕಾ ಬರುವಾ ಮತ್ತು ಕಂಗಕನಾ ಗೋಸ್ವಾಮಿ, ಶರ್ಮಾ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ದಿಸ್ಪುರ್​ ಪೊಲೀಸರು ಈ ಸಂಬಂಧ ಎಫ್​ಐಆರ್ ದಾಖಲಿಸಿ, 48 ವರ್ಷದ ಬರಹಗಾರ್ತಿಯನ್ನ ಬಂಧಿಸಿದ್ದಾರೆ. ಅಷ್ಟೇ ಅಲ್ಲ ಐಪಿಸಿ ಸೆಕ್ಷನ್​​ 124 ಎ ಅನ್ವಯ ದೇಶದ್ರೋಹದ ಆರೋಪದ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯೋಧರು ದಾಳಿಗೊಳಗಾದಾಗ, ಅಮಿತ್​ ಶಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ರು: ಸುರ್ಜೇವಾಲಾ

ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್​ಗಢದ ಬಿಜಾಪುರ-ಸುಕ್ಮಾ ಗಡಿಯಲ್ಲಿ ಕೋಬ್ರಾ ಪಡೆ ಹಾಗೂ ನಕ್ಸಲರ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ 22 ಯೋಧರು ಹುತಾತ್ಮರಾಗಿ, ಅನೇಕರು ಗಾಯಗೊಂಡಿದ್ದರು.

ಗುವಾಹಟಿ(ಅಸ್ಸೋಂ): ಛತ್ತೀಸ್​ಗಢದಲ್ಲಿ ನಡೆದ ನಕ್ಸಲ್​ ದಾಳಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬರಹಗಾರ್ತಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಿಖಾ ಶರ್ಮಾ ಅವರನ್ನು ದಿಸ್ಪುರ್​ ಪೊಲೀಸರು ಬಂಧಿಸಿದ್ದಾರೆ.

ದಾಳಿಯಲ್ಲಿ ಒಟ್ಟು 22 ಕೋಬ್ರಾ ಪೊಲೀಸರು ಹುತಾತ್ಮರಾಗಿದ್ದರು. ಇದರಲ್ಲಿ ಅಸ್ಸೋಂ ಮೂಲದವರಾದ ಇನ್ಸ್​​ಪೆಕ್ಟರ್​ ದಿಲೀಪ್​ ಕುಮಾರ್​ ಹಾಗೂ ಪೇದೆ ಬಾಬುಲ್​ ರಭಾ ವೀರ ಮರಣವನ್ನಪ್ಪಿದ್ದರು. ಶಿಖಾ ಶರ್ಮಾ ಈ ಬಗ್ಗೆ ಸೋಮವಾರ ಫೇಸ್​ಬುಕ್​​ನಲ್ಲಿ ಕಮೆಂಟ್​ ಮಾಡಿದ್ದರು. ಸಂಬಳಕ್ಕಾಗಿ ದುಡಿಯುವವರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಅವರು ಹುತಾತ್ಮರಾಗಿಲ್ಲ ಎಂದು ಹೇಳಿದ್ದರು.

ಅವರ ಈ ಹೇಳಿಕೆ ಅಸ್ಸೋಂನಲ್ಲಿ ಭಾರಿ ಸದ್ದು ಮಾಡಿತ್ತು. ಲೇಖಕಿಯ ಫೇಸ್​​ಬುಕ್​ ಪೋಸ್ಟ್​ಗಳನ್ನ ಆಧರಿಸಿ ವಕೀಲರಾದ ಉಮಿ ದೆಕಾ ಬರುವಾ ಮತ್ತು ಕಂಗಕನಾ ಗೋಸ್ವಾಮಿ, ಶರ್ಮಾ ವಿರುದ್ಧ ಎಫ್​ಐಆರ್​ ದಾಖಲಿಸಿದ್ದರು. ದಿಸ್ಪುರ್​ ಪೊಲೀಸರು ಈ ಸಂಬಂಧ ಎಫ್​ಐಆರ್ ದಾಖಲಿಸಿ, 48 ವರ್ಷದ ಬರಹಗಾರ್ತಿಯನ್ನ ಬಂಧಿಸಿದ್ದಾರೆ. ಅಷ್ಟೇ ಅಲ್ಲ ಐಪಿಸಿ ಸೆಕ್ಷನ್​​ 124 ಎ ಅನ್ವಯ ದೇಶದ್ರೋಹದ ಆರೋಪದ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯೋಧರು ದಾಳಿಗೊಳಗಾದಾಗ, ಅಮಿತ್​ ಶಾ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ರು: ಸುರ್ಜೇವಾಲಾ

ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್​ಗಢದ ಬಿಜಾಪುರ-ಸುಕ್ಮಾ ಗಡಿಯಲ್ಲಿ ಕೋಬ್ರಾ ಪಡೆ ಹಾಗೂ ನಕ್ಸಲರ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ 22 ಯೋಧರು ಹುತಾತ್ಮರಾಗಿ, ಅನೇಕರು ಗಾಯಗೊಂಡಿದ್ದರು.

Last Updated : Apr 7, 2021, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.