ETV Bharat / bharat

ಕೇದಾರನಾಥದಿಂದ ವಾಪಸಾಗುತ್ತಿದ್ದಾಗ ಗಂಗಾ ನದಿಗೆ ಬಿದ್ದ ನಾಲ್ವರು ಪ್ರವಾಸಿಗರಿದ್ದ ಕಾರು

author img

By

Published : Jul 13, 2022, 10:02 PM IST

ಉತ್ತರ ಪ್ರದೇಶದ ಮೀರತ್​ ಮೂಲದ ನಾಲ್ವರು ಕಾರಿನಲ್ಲಿ ಕೇದಾರನಾಥಕ್ಕೆ ಹೋಗಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ ಋಷಿಕೇಶ-ಬದರಿನಾಥ್ ಹೆದ್ದಾರಿಯಲ್ಲಿ ಗಂಗಾ ನದಿಗೆ ಬಿದ್ದಿದೆ.

Car of four tourists of Meerut falls in river Ganga in Rishikesh, search continues
ಕೇದಾರನಾಥದಿಂದ ವಾಪಸಾಗುತ್ತಿದ್ದಾಗ ಗಂಗಾ ನದಿಗೆ ಬಿದ್ದ ನಾಲ್ವರು ಪ್ರವಾಸಿಗರಿದ್ದ ಕಾರು

ಋಷಿಕೇಶ (ಉತ್ತರಾಖಂಡ): ಉತ್ತರಾಖಂಡದಲ್ಲಿ ಭಾರಿ ದುರಂತ ಸಂಭವಿಸಿದೆ. ಬುಧವಾರ ಋಷಿಕೇಶ-ಬದರಿನಾಥ್ ಹೆದ್ದಾರಿಯಲ್ಲಿ ನಾಲ್ವರು ಪ್ರವಾಸಿಗರಿದ್ದ ಕಾರು ಗಂಗಾ ನದಿಗೆ ಬಿದ್ದಿದ್ದು, ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ (ಎಸ್‌ಡಿಆರ್‌ಎಫ್) ಮತ್ತು ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಪೌರಿ ಗರ್ವಾಲ್ ಜಿಲ್ಲೆಯ ಋಷಿಕೇಶ-ಬದರಿನಾಥ್ ಹೆದ್ದಾರಿಯ ಕೌಡಿಯಾಲ ಬಳಿ ಈ ದುರ್ಘಟನೆ ನಡೆದಿದೆ. ಶೋಧ ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಹಾಗೂ ಕೆಲವು ಮೊಬೈಲ್​ಗಳು ಪತ್ತೆಯಾಗಿವೆ. ನದಿಯಲ್ಲಿ ಕಾರು ಮುಳುಗಿರುವ ಸಾಧ್ಯತೆ ಇದ್ದು, ಉತ್ತರ ಪ್ರದೇಶದ ಮೀರತ್​ ಮೂಲದ ನಾಲ್ವರು ಕಾರಿನಲ್ಲಿ ಕೇದಾರನಾಥಕ್ಕೆ ಹೋಗಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕಾರಿನ ಸಂಖ್ಯೆಯು ಮೀರತ್‌ನ ಪಂಕಜ್ ಶರ್ಮಾ ಮತ್ತು ಓಂ ಪ್ರಕಾಶ್ ಶರ್ಮಾ ಎಂಬುವರ ಹೆಸರಿನಲ್ಲಿ ರಿಜಿಸ್ಟರ್​ ಆಗಿದೆ. ಇದೇ ಮಾಹಿತಿ ಮೇರೆಗೆ ಪಂಕಜ್ ಶರ್ಮಾ ಅವರ ಸಂಬಂಧಿಕರನ್ನು ಸಂಪರ್ಕಿಸಿದಾಗ, ಜುಲೈ 10ರಂದು ಪಂಕಜ್ ಶರ್ಮಾ, ಗುಲ್ವೀರ್ ಜೈನ್, ನಿತಿನ್ ಮತ್ತು ಸಂಜಯ್ ಕೇದಾರನಾಥಕ್ಕೆ ಹೋಗಿ ವಾಪಸಾಗುತ್ತಿದ್ದರು ಎಂದು ಖಚಿತವಾಗಿದೆ. ಈ ಸಂಬಂಧ ಎಲ್ಲ ಸಂತ್ರಸ್ತರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ. ಆದರೆ, ಕಾರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿವಾದಿತ ಸ್ವಾಮಿ ನಿತ್ಯಾನಂದರ 18 ಅಡಿ ಪ್ರತಿಮೆ ಸ್ಥಾಪಿಸಿದ ಭಕ್ತ!

ಋಷಿಕೇಶ (ಉತ್ತರಾಖಂಡ): ಉತ್ತರಾಖಂಡದಲ್ಲಿ ಭಾರಿ ದುರಂತ ಸಂಭವಿಸಿದೆ. ಬುಧವಾರ ಋಷಿಕೇಶ-ಬದರಿನಾಥ್ ಹೆದ್ದಾರಿಯಲ್ಲಿ ನಾಲ್ವರು ಪ್ರವಾಸಿಗರಿದ್ದ ಕಾರು ಗಂಗಾ ನದಿಗೆ ಬಿದ್ದಿದ್ದು, ರಾಜ್ಯ ವಿಪತ್ತು ನಿರ್ವಹಣಾ ಸಿಬ್ಬಂದಿ (ಎಸ್‌ಡಿಆರ್‌ಎಫ್) ಮತ್ತು ಪೊಲೀಸರ ತಂಡವು ಸ್ಥಳಕ್ಕೆ ಧಾವಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದೆ.

ಪೌರಿ ಗರ್ವಾಲ್ ಜಿಲ್ಲೆಯ ಋಷಿಕೇಶ-ಬದರಿನಾಥ್ ಹೆದ್ದಾರಿಯ ಕೌಡಿಯಾಲ ಬಳಿ ಈ ದುರ್ಘಟನೆ ನಡೆದಿದೆ. ಶೋಧ ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಹಾಗೂ ಕೆಲವು ಮೊಬೈಲ್​ಗಳು ಪತ್ತೆಯಾಗಿವೆ. ನದಿಯಲ್ಲಿ ಕಾರು ಮುಳುಗಿರುವ ಸಾಧ್ಯತೆ ಇದ್ದು, ಉತ್ತರ ಪ್ರದೇಶದ ಮೀರತ್​ ಮೂಲದ ನಾಲ್ವರು ಕಾರಿನಲ್ಲಿ ಕೇದಾರನಾಥಕ್ಕೆ ಹೋಗಿ ದೇವರ ದರ್ಶನ ಪಡೆದು ಹಿಂತಿರುಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕಾರಿನ ಸಂಖ್ಯೆಯು ಮೀರತ್‌ನ ಪಂಕಜ್ ಶರ್ಮಾ ಮತ್ತು ಓಂ ಪ್ರಕಾಶ್ ಶರ್ಮಾ ಎಂಬುವರ ಹೆಸರಿನಲ್ಲಿ ರಿಜಿಸ್ಟರ್​ ಆಗಿದೆ. ಇದೇ ಮಾಹಿತಿ ಮೇರೆಗೆ ಪಂಕಜ್ ಶರ್ಮಾ ಅವರ ಸಂಬಂಧಿಕರನ್ನು ಸಂಪರ್ಕಿಸಿದಾಗ, ಜುಲೈ 10ರಂದು ಪಂಕಜ್ ಶರ್ಮಾ, ಗುಲ್ವೀರ್ ಜೈನ್, ನಿತಿನ್ ಮತ್ತು ಸಂಜಯ್ ಕೇದಾರನಾಥಕ್ಕೆ ಹೋಗಿ ವಾಪಸಾಗುತ್ತಿದ್ದರು ಎಂದು ಖಚಿತವಾಗಿದೆ. ಈ ಸಂಬಂಧ ಎಲ್ಲ ಸಂತ್ರಸ್ತರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ. ಆದರೆ, ಕಾರು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ವಿವಾದಿತ ಸ್ವಾಮಿ ನಿತ್ಯಾನಂದರ 18 ಅಡಿ ಪ್ರತಿಮೆ ಸ್ಥಾಪಿಸಿದ ಭಕ್ತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.