ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನತೆ ತತ್ತರಿಸಿದರೆ, ಇತ್ತ ಕಳ್ಳರು ತಮ್ಮ ಕಸುಬು ಮುಂದುವರೆಸಿದ್ದಾರೆ. ನಗರದ ಬಿಬಿಎಂಪಿ ಪಾರ್ಕ್ವೊಂದರಲ್ಲಿದ್ದ ಗಂಧದ ಮರ ಕಳುವಾಗಿದೆ.
ಯಲಹಂಕ ಜುಡಿಷಿಯಲ್ ಲೇಔಟ್ನ ಬಿಬಿಎಂಪಿ ಪಾರ್ಕ್ನಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಮಳೆಯ ನಡುವೆಯೇ ಶ್ರೀಗಂಧದ ಮರವನ್ನು ಕಳ್ಳರು ಕತ್ತರಿಸಿ ಹೊತ್ತೊಯ್ದಿದ್ದಾರೆ. ಬೆಳಗ್ಗೆ ಸ್ಥಳೀಯರು ವಾಕಿಂಗ್ಗೆ ಹೋದಾಗ ಮರ ಕಳ್ಳತನವಾಗಿರುವುದನ್ನು ಗಮನಿಸಿದ್ದಾರೆ.