ಕರ್ನಾಟಕ

karnataka

ETV Bharat / snippets

ಶಿವಮೊಗ್ಗ: ವಾಲಿಬಾಲ್ ತರಬೇತಿ ನೀಡುತ್ತಿದ್ದ ವೇಳೆ ಕುಸಿದುಬಿದ್ದು ಶಿಕ್ಷಕ ಸಾವು

By ETV Bharat Karnataka Team

Published : 20 hours ago

Updated : 19 hours ago

ಶಿಕ್ಷಕ ಸಾವು
ಶಿಕ್ಷಕ ಸಾವು (ETV Bharat)

ಶಿವಮೊಗ್ಗ: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್ ತರಬೇತಿ ನೀಡುವಾಗ ದೈಹಿಕ ಶಿಕ್ಷಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಸಾಗರದಲ್ಲಿ ನಡೆದಿದೆ.

ಗಜಾನನ ಹಿರೇಮಠ ಮೃತ ಶಿಕ್ಷಕ. ಗಜಾನನ ಅವರು ಸಾಗರ ಪಟ್ಟಣದ ಪ್ರಗತಿ ಸಂಯುಕ್ತ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇಂದು ಶಾಲಾ ಆವರಣದಲ್ಲಿಯೇ ಮಕ್ಕಳಿಗೆ ಕ್ರಾಫ್ಟ್ ಜೊತೆಗೆ ವಿವಿಧ ಕ್ರೀಡೆಗಳ ಕುರಿತು ತರಬೇತಿ ನೀಡುತ್ತಿದ್ದರು. ಈ ವೇಳೆ ಹಠಾತ್ ಕುಸಿದು ಬಿದ್ದಿದ್ದರು.

ತಕ್ಷಣ ಶಾಲೆಯ ಇತರೆ ಶಿಕ್ಷಕರು ಅವರನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಶಿಕ್ಷಕ ಮೃತಪಟ್ಟಿದ್ದಾರೆ. ತಮ್ಮ‌ ಕಣ್ಣು ಮುಂದೆಯೇ ಶಿಕ್ಷಕ ಕುಸಿದು ಬಿದ್ದು ಮೃತಪಟ್ಟ ದೃಶ್ಯ ವಿದ್ಯಾರ್ಥಿಗಳಿಗೆ ಗಾಬರಿಯನ್ನುಂಟು ಮಾಡಿದೆ.

ಇದನ್ನೂ ಓದಿ:ಹಾಸನ: ವಸತಿ ಗೃಹದಲ್ಲಿ ಮುಖ್ಯ ಶಿಕ್ಷಕ ಆತ್ಮಹತ್ಯೆ

Last Updated : 19 hours ago

ABOUT THE AUTHOR

...view details