ಕರ್ನಾಟಕ

karnataka

ETV Bharat / snippets

ಕಾವೇರಿ ನೀರು 5ನೇ ಹಂತದ ಯೋಜನೆ ಅನುಷ್ಠಾನ: ಜೂ. 6, 7 ರಂದು ನೀರು ಸರಬರಾಜಿನಲ್ಲಿ ಉಂಟಾಗಲಿದೆ ವ್ಯತ್ಯಯ

By ETV Bharat Karnataka Team

Published : Jun 1, 2024, 7:54 PM IST

CAUVERY PROJECT IMPLEMENTATION
ಸಂಗ್ರಹ ಚಿತ್ರ (ETV Bharat)

ಬೆಂಗಳೂರು: ಕಾವೇರಿ ನೀರು ಸರಬರಾಜು 5ನೇ ಹಂತದ ಯೋಜನೆಯ ಅನುಷ್ಠಾನಕ್ಕೆ ಸಂಪರ್ಕ ಸೇರಿದಂತೆ ಹಲವು ಕಾಮಗಾರಿಗಳು ನಡೆಯಲಿರುವುದರಿಂದ ಜೂ. 6 ಮತ್ತು 7 ರಂದು ನಗರಕ್ಕೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಕಾವೇರಿ 5ನೇ ಹಂತದ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಜೂ. 6 ರಂದು ಕಾವೇರಿ 1, 2 ಮತ್ತು 3ನೇ ಹಂತಗಳ ನೀರು ಸರಬರಾಜು ಘಟಕಗಳನ್ನು 12 ಘಂಟೆಗಳ ಕಾಲ (ಬೆ. 6ರಿಂದ ಸಂಜೆ 6ರವರೆಗೆ) ಹಾಗೂ ಕಾವೇರಿ 4ನೇ ಹಂತ, 1ನೇ ಮತ್ತು 2ನೇ ಘಟ್ಟಗಳ ನೀರು ಸರಬರಾಜು ಘಟಕಗಳನ್ನು 4 ಗಂಟೆಗಳ ಕಾಲ (ಬೆ. 10ರಿಂದ ಮಧ್ಯಾಹ್ನ 2ರವರೆಗೆ) ಸ್ಥಗಿತಗೊಳಿಸಲು ತೀರ್ಮಾನಿಸಿದೆ.

ಈ ಹಿನ್ನೆಲೆ ಜೂ. 6 ಮತ್ತು 7ರಂದು ಎರಡು ದಿನಗಳ ಕಾಲ ನಗರಕ್ಕೆ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಪ್ರದೇಶದಲ್ಲಿರುವ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಲು ಹಾಗೂ ಅಗತ್ಯವಿರುವ ನೀರನ್ನು ಶೇಖರಿಸಿಟ್ಟುಕೊಳ್ಳುವಂತೆ ಕೋರಲಾಗಿದೆ.

ABOUT THE AUTHOR

...view details