ಕರ್ನಾಟಕ

karnataka

ಚಿಕಿತ್ಸೆಗೆಂದು ಬಂದು ವೈದ್ಯರ ಮೇಲೆ ಗುಂಡು ಹಾರಿಸಿದ ಬಂದೂಕುಧಾರಿಗಳು

By ETV Bharat Karnataka Team

Published : 20 hours ago

Published : 20 hours ago

Doctor Shot Dead Inside Hospital In Delhi
ಚಿಕಿತ್ಸೆಗೆಂದು ಬಂದು ವೈದ್ಯರ ಮೇಲೆ ಗುಂಡು ಹಾರಿಸಿದ ಬಂದೂಕುಧಾರಿಗಳು (ETV Bharat)

ನವದೆಹಲಿ: ದೆಹಲಿಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಚಿಕಿತ್ಸೆಗೆ ಬಂದಿದ್ದ ಇಬ್ಬರು ವೈದ್ಯರ ಮೇಲೆ ಗುಂಡು ಹಾರಿಸಿದ್ದಾರೆ. ಕಾಳಿಂದಿ ಕುಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಜೈತ್‌ಪುರದ ನಿಮಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಜಾವೇದ್ ಅಖ್ತರ್ ಎಂದು ಗುರುತಿಸಲಾಗಿದೆ. ಇಬ್ಬರು ಗಾಯಗೊಂಡು ಆಸ್ಪತ್ರೆಗೆ ಬಂದಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಮೃತ ವೈದ್ಯರಿಗೆ ತಿಳಿಸಿದ್ದರು. ಗಾಯಗಳನ್ನು ಡ್ರೆಸ್ ಮಾಡಿದ ನಂತರ, ತಾವು ವೈದ್ಯರನ್ನು ನೋಡಬೇಕು ಎಂದು ಗಾಯಾಳುಗಳು ಮನವಿ ಮಾಡಿದ್ದರು. ಡ್ರೆಸಿಂಗ್​ ಮಾಡಿಸಿಕೊಂಡ ಬಳಿಕ ವೈದ್ಯರ ಕ್ಯಾಬಿನ್‌ಗೆ ನುಗ್ಗಿದ ಇವರು ವೈದ್ಯನಿಗೆ ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಿದೆ.

ಇದನ್ನು ಓದಿ:ಜಾರ್ಖಂಡ್​ನಲ್ಲಿ ರೈಲು ಹಳಿ ಸ್ಫೋಟಿಸಿದ ದುಷ್ಕರ್ಮಿಗಳು: ಯಾರದೀ ಕೈವಾಡ? - Explosion on railway track

ABOUT THE AUTHOR

...view details