ಕರ್ನಾಟಕ

karnataka

ETV Bharat / state

ಶಕ್ತಿ ಯೋಜನೆ: ದಾವಣಗೆರೆ ಕೆಎಸ್‌ಆರ್‌ಟಿಸಿ ಘಟಕಕ್ಕೆ ನಿರೀಕ್ಷೆ ಮೀರಿ ಆದಾಯ - Shakti Scheme

ಶಕ್ತಿ ಯೋಜನೆ ಜಾರಿಯಾಗಿ ಒಂದು ವರ್ಷ ಪೂರ್ಣವಾಗಿದ್ದು, ದಾವಣಗೆರೆ ಘಟಕ ನಿರೀಕ್ಷೆಗೂ ಮೀರಿ ಆದಾಯ ಗಳಿಸಿದೆ.

By ETV Bharat Karnataka Team

Published : Jul 5, 2024, 2:53 PM IST

EARNED REVENUE  WOMEN TRAVEL MORE  EXPECTATIONS  DAVANAGERE
ಶಕ್ತಿ ಯೋಜನೆ (ETV Bharat)

ಶಕ್ತಿ ಯೋಜನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಮಹಿಳೆಯರು (ETV Bharat)

ದಾವಣಗೆರೆ: ಮಹಿಳೆಯರಿಗೆ ಉಪಯೋಗವಾಗಲೆಂದು ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿ ಮಾಡಿದೆ. ಇದರಿಂದ ಸಾಕಷ್ಟು ಮಹಿಳೆಯರಿಗೆ ಉಪಯೋಗವಾಗಿದೆ. ಇಂತಹ ಮಹತ್ವಾಕಾಂಕ್ಷೆಯ ಯೋಜನೆ ಜಾರಿಯಾಗಿ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ದಾವಣಗೆರೆ ಕೆಎಸ್ಆರ್​ಟಿಸಿ ಘಟಕಕ್ಕೆ ಸಾಕಷ್ಟು ಆದಾಯ ಹರಿದು ಬಂದಿದೆ.‌

ದಾವಣಗೆರೆ ಕೆಎಸ್ಆರ್​ಟಿಸಿ ಘಟಕ ಒಟ್ಟು 90.05 ಕೋಟಿ ಆದಾಯ ಗಳಿಸಿದೆ. ಈ ವರ್ಷದಲ್ಲಿ 3 ಕೋಟಿ 28 ಲಕ್ಷ ಜನ ಪ್ರಯಾಣಿಸಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚು ಎಂಬುದು ವಿಶೇಷ. ಇದಲ್ಲದೇ ಒಂದು ದಿನಕ್ಕೆ 90 ಸಾವಿರ ಜನ ಪ್ರಯಾಣ ಮಾಡಿರುವುದು ವಿಶೇಷ ಸಾಧನೆ ಎಂದು ದಾವಣಗೆರೆ ಕೆಎಸ್ಆರ್​ಟಿಸಿ ಘಟಕದ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಎನ್.ಹೆಬ್ಬಾಳ ಹೇಳಿದರು.

ಶಕ್ತಿ ಯೋಜನೆಯಡಿ ಮಹಿಳೆಯರ ಪ್ರಯಾಣ (ETV Bharat)

ಧಾರ್ಮಿಕ ಸ್ಥಳಗಳಿಗೆ ಮಹಿಳೆಯರ ಭೇಟಿ: ದುಡಿಯುವ ವರ್ಗದ ಮಹಿಳೆಯರಿಗೆ ಈ ಯೋಜನೆ ಆಸರೆಯಾಗಿದೆ. ಅಲ್ಲದೇ ಮಹಿಳೆಯರು ಧಾರ್ಮಿಕ, ಪ್ರವಾಸಿ ತಾಣಗಳಿಗೆ ಹೆಚ್ಚು ಪ್ರಯಾಣ ಬೆಳೆಸಿದ್ದಾರೆ. ಆದಾಯ ಹೆಚ್ಚು ಹರಿದು ಬಂದಿದ್ದರಿಂದ ಟ್ರಿಪ್​ಗಳ ಸಂಖ್ಯೆ ಹಾಗು ಬಸ್ ಸಂಖ್ಯೆ ಏರಿಕೆ ಮಾಡಲಾಗುತ್ತದೆ. ಅಲ್ಲದೇ ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ ಭಾಗಕ್ಕೆ ರಾತ್ರಿ ವೇಳೆ ಹೆಚ್ಚು ಬಸ್ ಬಿಡಲಾಗುತ್ತದೆ. ಈಗಾಗಲೇ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ ಒಟ್ಟು 47 ಬಸ್‌ಗಳನ್ನು ಬಿಡಲಾಗಿದೆ. 37 ನೂತನ ಅಶ್ವಮೇಧ ಬಸ್​ಗಳು ಕೂಡ ಪ್ರಯಾಣಿಸುತ್ತಿವೆ. ಈ ಹಿಂದೆ ಸಿಬ್ಬಂದಿಗಳಿಗೂ ಇಂತಿಷ್ಟು ಟಿಕೆಟ್ ನೀಡಬೇಕೆಂಬ ಗುರಿ ಇತ್ತು. ಈಗ ಈ ತಲೆನೋವು ದೂರವಾಗಿದೆ.

ABOUT THE AUTHOR

...view details