ಕರ್ನಾಟಕ

karnataka

ETV Bharat / state

ಬೆಂಗಳೂರು: ಜ್ಯುವೆಲರಿ​ ಶಾಪ್​ಗೆ ನುಗ್ಗಿದ ದರೋಡೆಕೋರರು; ಇಬ್ಬರ ಮೇಲೆ ಗುಂಡು ಹಾರಿಸಿ ಪರಾರಿ

ಕೋಡಿಗೆಹಳ್ಳಿಯಲ್ಲಿರುವ ಜ್ಯುವೆಲರಿ ಅಂಗಡಿಗೆ ಇಂದು ಬೆಳಗ್ಗೆ ದರೋಡೆಕೋರರು ನುಗ್ಗಿ ಇಬ್ಬರ ಮೇಲೆ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.

By ETV Bharat Karnataka Team

Published : Mar 14, 2024, 2:03 PM IST

Updated : Mar 14, 2024, 2:37 PM IST

Bengaluru crime
ಗುಂಡು ಹಾರಿಸಿ ದರೋಡೆಕೋರರು ಪರಾರಿ

ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಹೇಳಿಕೆ

ಬೆಂಗಳೂರು:ನಗರದ ಕೋಡಿಗೆಹಳ್ಳಿಯಲ್ಲಿರುವ ದೇವಿನಗರ ಜ್ಯುವೆಲರಿ​ ಶಾಪ್​ಗೆ ದರೋಡೆಕೋರರು ನುಗ್ಗಿ ಅಂಗಡಿ ಮಾಲೀಕ ಹಾಗೂ ಸಿಬ್ಬಂದಿ ಮೇಲೆ‌ ಪಿಸ್ತೂಲ್​ನಿಂದ ಗುಂಡು ಹಾರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ದೇವಿನಗರದಲ್ಲಿರುವ ಲಕ್ಷ್ಮೀ ಬ್ಯಾಂಕರ್ಸ್​ ಆ್ಯಂಡ್ ಜ್ಯುವೆಲರ್ಸ್​ ಮಾಲೀಕರಾದ ಅಪೂರಾಮ್​ ಹಾಗೂ ಅಂದರಾಮ್ ಎಂಬುವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಬಂದ ನಾಲ್ವರು ಮುಖ ಕಾಣದಂತೆ ಬಟ್ಟೆ ಸುತ್ತಿಕೊಂಡು ಹೆಲ್ಮೆಟ್ ಧರಿಸಿಕೊಂಡು ಶಾಪ್​ಗೆ ಎಂಟ್ರಿಯಾಗಿದ್ದರು.

ದರೋಡೆಕೋರರ ಬಳಿಯಿದ್ದ ಎರಡು ಪಿಸ್ತೂಲ್​ಗಳನ್ನು ತೋರಿಸಿ ಚಿನ್ನ ದೋಚಲು ಯತ್ನಿಸಿದ್ದಾರೆ.‌ ಈ ವೇಳೆ ಮಾತಿನ ಚಕಮಕಿ ನಡೆದು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ.‌ ಈ ವೇಳೆ ಓರ್ವನ ಕಾಲಿಗೆ ಶೂಟ್ ಮಾಡಿದರೆ, ಮತ್ತೊಬ್ಬರ ಹೊಟ್ಟೆಗೆ ಫೈರ್ ಮಾಡಿ ಎಸ್ಕೇಪ್ ಆಗಿದ್ದಾರೆ‌‌. ಗಾಯಾಳುಗಳನ್ನು ಸದ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಆಗುತ್ತಿದ್ದಂತೆ ಅಲರ್ಟ್ ಆಗಿರುವ ಪೊಲೀಸರು ಎಕ್ಸಿಟ್ ಪಾಯಿಂಟ್​ಗಳಲ್ಲಿ ನಾಕಾಬಂದಿ ಹಾಕಿ ಪರಿಶೀಲನೆ ನಡೆಸುತ್ತಿದ್ದಾರೆ‌. ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡು ಆಗಂತುಕರು ದರೋಡೆಗೆ ಸಂಚು ರೂಪಿಸಿರುವುದು ಶಂಕೆ ವ್ಯಕ್ತವಾಗಿದೆ. ಏಕಾಏಕಿ ಅಂಗಡಿಗೆ ಎಂಟ್ರಿ ಕೊಟ್ಟಿದ್ದ ನಾಲ್ವರಲ್ಲಿ ಇಬ್ಬರು ಹೊರಗಡೆ ನಿಂತು ನೋಡಿಕೊಂಡರೆ ಇನ್ನಿಬ್ಬರು ಒಳ ನುಗ್ಗಿದ್ದರು.

ಫೈರ್​ ಮಾಡಿದ ಬಳಿಕ ತಪ್ಪಿಸಿಕೊಳ್ಳುವ ಭರದಲ್ಲಿ ಪಿಸ್ತೂಲ್​ ಅಲ್ಲೇ ಬಿಟ್ಟು ಹೋಗಿದ್ದಾರೆ. ಸದ್ಯ ದರೋಡೆಗೆ ಬಂದಿದ್ದರಾ ಅಥವಾ ಕೊಲೆ ಮಾಡುವ ಉದ್ದೇಶದಿಂದ ಬಂದಿದ್ದರಾ ಎಂಬುದರ ಬಗ್ಗೆ ತನಿಖೆ‌ ನಡೆಸಲಾಗುತ್ತಿದೆ. ಜತೆಗೆ ಆರೋಪಿಗಳ ಪತ್ತೆಗೆ ತನಿಖಾ ತಂಡ ರಚಿಸಲಾಗಿದ್ದು, ಹಲವು ಕಡೆ ನಾಕಾ ಬಂದಿ ಹಾಕಿ ವಾಹನಗಳ ಪರಿಶೀಲನೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿಜಿಪಿ ಅಲೋಕ್​ ಮೋಹನ್​ ಮತ್ತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಭೇಟಿ: ಘಟನಾ ಸ್ಥಳಕ್ಕೆ ರಾಜ್ಯ ಡಿಜಿ-ಐಜಿಪಿ ಅಲೋಕ್​ ಮೋಹನ್​ ಮತ್ತು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಬಿ. ದಯಾನಂದ ಪ್ರತಿಕ್ರಿಯಿಸಿ ಬೆಳಗ್ಗೆ 11 ಗಂಟೆ ವೇಳೆಗೆ ನಾಲ್ವರು ಆರೋಪಿಗಳು ಆಗಮಿಸಿದ್ದಾರೆ. ಆರೋಪಿಗಳು ದರೋಡೆಗೆ ಬಂದ ಹಾಗೇ ಕಾಣುತ್ತಿದೆ. ಒಟ್ಟು ಇಬ್ಬರ ಮೇಲೆ ಫೈರಿಂಗ್ ಮಾಡಿದ್ದಾರೆ. ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಸದ್ಯ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ತುಕಾಲಿ ಸಂತೋಷ್ ಕಾರು ಅಪಘಾತ: ಆಟೋ ಚಾಲಕ ಸಾವು

Last Updated : Mar 14, 2024, 2:37 PM IST

ABOUT THE AUTHOR

...view details