ಮಂಗಳೂರು: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಿಗಲಿದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕೋಟ ಶ್ರೀನಿವಾಸ್ ಪೂಜಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. "ಮಾಧ್ಯಮದಲ್ಲಿ ಈ ಬಗ್ಗೆ ಸುದ್ದಿ ಬಿತ್ತರವಾಗಿದ್ದನ್ನು ನಾನು ಗಮನಿಸಿದೆ. ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೋ ಎಂದು ಯೋಚನೆ ಮಾಡುತ್ತಿದ್ದೇನೆ" ಎಂದು ಹೇಳಿದರು.
"ರಾತ್ರಿಯಿಂದ ಒಂದಷ್ಟು ವಿಚಾರದಲ್ಲಿ ಬ್ಯುಸಿಯಾಗಿದ್ದೆ. ಬರುವಾಗ ತಡವಾಗಿತ್ತು. ಆದರೆ ಈವರೆಗೆ ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಸಂಘಟನಾತ್ಮಕ ವಿಚಾರವಾಗಿ ಬೆಂಗಳೂರು, ದೆಹಲಿ ಕಚೇರಿಗಳಿಂದ ಕರೆಗಳು ಬರುತ್ತಿರುತ್ತದೆ. ಏನೆಂದು ಗೊತ್ತಿಲ್ಲ, ನೋಡಿ ಆಮೇಲೆ ನಿಮಗೆ ಹೇಳ್ತೇನೆ." ಎಂದು ಹೇಳಿದರು.