ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಬೆಂಗಳೂರು: ಕಾರು ಚಾಲಕನ ಅಡ್ಡಗಟ್ಟಲು ಯತ್ನಿಸಿದ ಖದೀಮ - ವಿಡಿಯೋ ಸೆರೆ - MAN ATTEMPTS TO STOP CAR

ಕಾರು ಚಾಲಕನನ್ನು ಅಡ್ಡಗಟ್ಟಿ ನಿಲ್ಲಿಸಲು ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಡ್ಯಾಶ್ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ.

bengaluru
ಕಾರು ಚಾಲಕನ ಅಡ್ಡಗಟ್ಟಲು ಯತ್ನ (KB Shreedharan X Post)

ಬೆಂಗಳೂರು:ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ಕಾರು ಚಾಲಕನೊಬ್ಬನನ್ನು ಖದೀಮನೊಬ್ಬ ಅಡ್ಡಗಟ್ಟಲು ಯತ್ನಿಸಿರುವ ಘಟನೆ ಶನಿವಾರ ನಗರದ ರಾತ್ರಿ ಜಕ್ಕೂರು ಅಂಡರ್​​​ಪಾಸ್ ಬಳಿ ನಡೆದಿದೆ.

ರಾತ್ರಿ 8.30ರ ಸುಮಾರಿಗೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರು ಬಳಿ ಸಾಗುತ್ತಿದ್ದ ವ್ಯಕ್ತಿಯೊಬ್ಬರ ಕಾರಿಗೆ ಕಳ್ಳನೊಬ್ಬ ಏಕಾಏಕಿ ಅಡ್ಡಬಂದಿದ್ದ. ಈ ವೇಳೆ ಎಚ್ಚೆತ್ತ ಕಾರು ಚಾಲಕ ವ್ಯಕ್ತಿಯನ್ನು ತಪ್ಪಿಸಿ, ಕಾರು ನಿಲ್ಲಿಸದೇ ಮುಂದೆ ಸಾಗಿದ್ದಾನೆ.

ಏಕಾಏಕಿ ಕಾರಿಗೆ ಅಡ್ಡಬರುವ ದೃಶ್ಯ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಪೊಲೀಸರು, ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ:ಸರಗಳ್ಳನ ಚೇಸ್​​ ಮಾಡುವಾಗ ಮಧುಗಿರಿ ಪೊಲೀಸರಿದ್ದ ಕಾರು ಅಪಘಾತ: ಮೂವರಿಗೆ ಗಾಯ - Police Car Accident

ABOUT THE AUTHOR

...view details